ಕನ್ನಡಪ್ರಭ ವಾರ್ತೆ ಹಿರಿಯೂರು
ಸ್ವಾತಂತ್ರ್ಯ ತ್ಯಾಗ ಬಲಿದಾನದ ಸಂಕೇತ. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರಾದ ಕೋವೆರಹಟ್ಟಿ ಗೋವಿಂದಪ್ಪ, ಮರಡಿಹಳ್ಳಿ ಭೀಮಪ್ಪ, ಹನುಮಂತಪ್ಪರವರನ್ನು ಸನ್ಮಾನಿಸಿ ಗೌರವ ಸಮರ್ಪಸಿದ್ದೇವೆ. ಅಸಮಾನತೆ, ಶೋಷಣೆಯ ಅವಧಿ ಮುಗಿದು ಹೊಸ ಮನ್ವoತರವನ್ನು ಭಾರತ ಪ್ರವೇಶಿಸಿದೆ ಎಂದರು.
ಈ ವೇಳೆ 78 ನೇ ಸ್ವಾತಂತ್ರೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಜಾನಪದ ಕಲಾವಿದ ಹೆಚ್ ಎಸ್ ಮಾರುತೇಶ್, ಶ್ರಮವೀರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಶಫಿವುಲ್ಲಾ, ನೃತ್ಯ ಶಿಕ್ಷಕ ಮಹೇಶ್, ಭಾರತ್ ಸೇವಾದಳದ ಸೇವೆಗಾಗಿ ಡಿಜಿ ಶ್ರೀನಿವಾಸ್, ಕಮಲಮ್ಮ ಹಾಗೂ ಅಂಗಾoಗ ದಾನ ಮಾಡಿದ ಎಸ್ ಆಕಾಶ್ ರವರ ಕುಟುಂಬದವರಿಗೆ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಂ ತಿಪ್ಪೇಸ್ವಾಮಿ, ಇಓ ಸತೀಶ್ ಕುಮಾರ್, ಡಿವೈಎಸ್ ಪಿ ಚೈತ್ರಾ, ಟಿಹೆಚ್ ಓ ಡಾ. ವೆಂಕಟೇಶ್, ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಮುಂತಾದವರು ಉಪಸ್ಥಿತರಿದ್ದರು.