ಸಾತ್ವಿಕ ಸುಖಕ್ಕಾಗಿ ಭಗವಂತನ ಸೇವೆ ಅಗತ್ಯ

KannadaprabhaNewsNetwork |  
Published : Jan 23, 2025, 12:46 AM IST
(20ಎನ್.ಆರ್.ಡಿ5 ಶ್ರೀ ನಾಗಲಿಂಗ ಶ್ರೀಗಳ ತೋಟಲೋತ್ಸವ ಕಾರ್ಯಕ್ರಮದಲ್ಲಿ ಸೋಲಬಯ್ಯ ಶ್ರೀಗಳು ಮಾತನಾಡುತ್ತಿದ್ದಾರೆ.)  | Kannada Prabha

ಸಾರಾಂಶ

ಪ್ರಪಂಚದಲ್ಲಿ ಮನುಷ್ಯ ಸಾತ್ವಿಕ ಸುಖಕ್ಕಾಗಿ ಭಗವಂತನ ಪ್ರಾರ್ಥನೆ ಮಾಡುವುದು ಅಗತ್ಯ

ನರಗುಂದ: ಲೌಕಿಕ ಪ್ರಪಂಚದ ಸಾತ್ವಿಕ ಸುಖಕ್ಕಾಗಿ ಭಗವಂತನ ಸೇವೆ ಮಾಡುವುದು ಅಗತ್ಯ ಎಂದು ಬನಹಟ್ಟಿ ಶ್ರೀ ರುದ್ರೇಶ್ವರ ಮಠದ ಸೋಲಬಯ್ಯ ಶ್ರೀಗಳು ಹೇಳಿದರು.

ಪಟ್ಟಣದ ಸೋಮಾಪುರ ಬಡಾವಣೆಯ ಶ್ರೀನಾಗಲಿಂಗ ನಿಲಯದಲ್ಲಿ 41ನೇ ವರ್ಷದ ಅಜಾತ ಶ್ರೀ ನಾಗಲಿಂಗ ಮಹಾಸ್ವಾಮಿಗಳ ಪುರಾಣ ಪ್ರವಚನದ ಅಂಗವಾಗಿ ಶ್ರೀ ನಾಗಲಿಂಗ ಮಹಾಸ್ವಾಮಿಗಳ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಪಂಚದಲ್ಲಿ ಮನುಷ್ಯ ಸಾತ್ವಿಕ ಸುಖಕ್ಕಾಗಿ ಭಗವಂತನ ಪ್ರಾರ್ಥನೆ ಮಾಡುವುದು ಅಗತ್ಯ. ಬನಹಟ್ಟಿಯ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಮತ್ತು ಶ್ರೀನಾಗಲಿಂಗ ಮಹಾಸ್ವಾಮಿಗಳ ಆಧ್ಯಾತ್ಮಿಕ ಒಡನಾಟ, ಅವರ ಪವಾಡ ನಾವು ಅಧ್ಯಯನ ಮಾಡಿ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಭೀಮಣ್ಣ ಶಾಸ್ತ್ರಿಗಳು, ರಾಮಚಂದ್ರ ಬಡಿಗೇರ, ಗಾಯತ್ರಿ ಮಹಿಳಾ ಮಂಡಳದ ಪದಾಧಿಕಾರಿಗಳು, ಮೌನೇಶ ಪತ್ತಾರ, ಶಂಕರಪ್ಪ ಬಡಿಗೇರ, ರಾಜು ಆಚಾರ್ಯ, ಮಹೇಶ ಬಡಿಗೇರ, ಆನಂದ ಮುರಾಳ, ಪ್ರಸಾದ ಕೆಂಚರಡ್ಡಿ, ರಮೇಶ ಮಿಕಲಿ, ಅಭಿಲಾಷ ಬಾಳಿಗೇರಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!