ತೋಳ ದಾಳಿಗೆ ಏಳು ಕುರಿಗಳ ಸಾವು

KannadaprabhaNewsNetwork |  
Published : Jun 30, 2025, 12:34 AM IST
ಲೋಕಾಪುರ ಸಮೀಪದ ನಿಂಗಾಪುರ ಗ್ರಾಮzಲ್ಲಿ ತೋಳ ದಾಳಿ ಮಾಡಿದ ಕುರಿಗಳು ಮೃತ ಪಟ್ಟ ಸ್ಥಳಕ್ಕೆ ಅರಣ್ಯಾಧಿಕಾರಿ ರಾಮಗಾನಟ್ಟಿ ಭೇಟಿ ನೀಡಿ ಮಾಹಿತಿ ಪಡೆದರು. | Kannada Prabha

ಸಾರಾಂಶ

ಕುರಿಗಳ ಹಿಂಡಿನ ಮೇಲೆ ತೋಳ ದಾಳಿಯಿಂದ ಏಳು ಕುರಿಗಳು ಸಾವಿಗೀಡಾದ ಘಟನೆ ಸಮೀಪದ ನಿಂಗಾಪುರ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಕನ್ನಡಪ್ರಭ ವಾರ್ತೆ ಲೋಕಾಪುರ

ಕುರಿಗಳ ಹಿಂಡಿನ ಮೇಲೆ ತೋಳ ದಾಳಿಯಿಂದ ಏಳು ಕುರಿಗಳು ಸಾವಿಗೀಡಾದ ಘಟನೆ ಸಮೀಪದ ನಿಂಗಾಪುರ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.ಅಬ್ದುಲ್‌ ರಜಾಕ್‌ ಸರಕಾವಸ ಅವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ಸೀಮೆಯಲ್ಲಿ ಕುರಿಗಳ ಹಿಂಡು ಮೇಯಲು ಸಮಯದಲ್ಲಿ ಈ ಘಟನೆ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪಂಚನಾಮೆ ಮಾಡಿ, ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯಾಧಿಕಾರಿ ನಿಂಗಪ್ಪ ರಾಮಗಾನಟ್ಟಿ ತಿಳಿಸಿದ್ದಾರೆ. ಅಬ್ದುಲ್ ರಜಾಕ್‌ ಕುರಿ ಸಾಕಾಣಿಯಿಂದಲೇ ಬದುಕು ನಡೆಸುತ್ತಿದ್ದ ಈ ಅಪಾರ ನಷ್ಟಕ್ಕೆ ಕಂಗಾಲಾಗಿದ್ದು, ತೋಳ ದಾಳಿಯಿಂದ ಹಾನಿಗೆ ಸರಕಾರ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾನೆ. ಗಸ್ತು ಸಿಬ್ಬಂದಿ ಬಸವರಾಜ ನಂದಿಕೋಲಮಠ, ಫಕೀರಪ್ಪ ಬಂಗಿ, ಪಶು ವೈದ್ಯ ಡಾ.ಬಿ.ಕೆ. ಹೊಸೂರ ಭೇಟಿ ನೀಡಿ ಪರೀಶಿಲನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳು ಬಾಲ್ಯದಲ್ಲೇ ಓದುವ ಹವ್ಯಾಸ ಬೆಳೆಸಿಕೊಳ್ಳಲಿ: ವಿವೇಕಾನಂದಗೌಡ ಪಾಟೀಲ
ಕವಿವಿ ಪದವಿ ಪರೀಕ್ಷೆ ಎಡವಟ್ಟು: ವಿದ್ಯಾರ್ಥಿಗಳಿಗೆ ಶಾಕ್‌