ಮಲ್ಲಯ್ಯ ಪೋಲಂಪಲ್ಲಿ
ಕಳೆದೆರಡು ವರ್ಷಗಳಿಂದ ಭೀಕರ ಬರಗಾಲದಿಂದ ತತ್ತರಿಸಿದ್ದ ರೈತರಲ್ಲಿ ಈ ಬಾರಿ ಮುಂಗಾರು ಮಳೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ತಾಲೂಕಿನಲ್ಲೆಡೆ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಗರಿಗದರಿವೆ. ರೈತರು ರೈತರು ಬಿತ್ತನೆಗೆ ಮುಂದಾಗಿದ್ದಾರೆ.
ಈಗಾಗಲೇ ಭೂಮಿ ಹದಗೊಳಿಸಿ, ಇನ್ನು ಬಿತ್ತನೆ ಮಾಡದೇ ಕಾದಿದ್ದ ರೈತರು ತಮ್ಮ ಕೃಷಿ ಭೂಮಿಯಲ್ಲಿ ತೊಗರಿ ಹತ್ತಿ ಸಜ್ಜೆ ಹಾಗೂ ಹೆಸರು ಇತರೆ ಬೀಜ ಬಿತ್ತನೆಯಲ್ಲಿ ನಿರತರಾಗಿದ್ದಾರೆ.ಶಹಾಪುರ ತಾಲೂಕಿನ ಕೃಷಿ ಭೂಮಿ: ತಾಲೂಕಿನಲ್ಲಿ 8177 0 ಹೆಕ್ಟೇರ್ ಕೃಷಿ ಭೂಮ ಇದ್ದು. ಇದರಲ್ಲಿ ನೀರಾವರಿ 56100 ಹೆಕ್ಟೇರ್, 25670 ಒಣ ಬೇಸಾಯ ಭೂಮಿ ಇದೆ. ಶಹಾಪುರ ತಾಲೂಕಿನ 370 ಕ್ವಿಂಟಲ್ ತೊಗರಿ, 40 ಕ್ವಿಂಟಲ್ ಹೆಸರು ಬಂದಿದ್ದು, ಶಹಾಪುರ, ದೋರನಹಳ್ಳಿ, ಗೋಗಿ, ವಡಗೇರ ಹಾಗೂ ಹಯ್ಯಾಳ ರೈತ ಸಂಪರ್ಕ ಹಂಚಿಕೆ ಮಾಡಲಾಗಿದೆ. 2.50 ಲಕ್ಷ ಪಾಕೆಟ್ ಹತ್ತಿ ಬೀಜ ಬೀಜ ಹಾಗೂ ರಸಗೊಬ್ಬರ ಮಾರಾಟ ಅಂಗಡಿಗಳಿಗೆ ಬಂದಿವೆ.
ಗೊಬ್ಬರ ದಾಸ್ತಾನು: ತಾಲೂಕಿನಲ್ಲಿ ಯೂರಿಯಾ, ಡಿಎಪಿ, ಕಾಂಪ್ಲೆಕ್ಸ್ ಹಾಗೂ ಪೋಟ್ಯಾಶ್ ಸೇರಿ 9100 ಟನ್ ಗೊಬ್ಬರ ದಾಸ್ತಾನು ಇದೆ. ಕಾಲಕಾಲಕ್ಕೂ ರೈತರ ಬೇಡಿಕೆ ತಕ್ಕಂತೆ ಗೊಬ್ಬರ ಪೂರೈಸಲಾಗುವುದು. ಸದ್ಯ ಗೊಬ್ಬರದ ಕೊರತೆ ಇರುವುದಿಲ್ಲ ಎಂದು ಕೃಷಿ ಅಧಿಕಾರಿ ತಿಳಿಸಿದ್ದಾರೆ.
ಎತ್ತುಳ್ಳ ರೈತರಿಗೆ ಹೆಚ್ಚಿದ ಬೇಡಿಕೆ: ಗೊಬ್ಬರ ಸಾಗಿಸುವುದು, ಉಳುಮೆ ಮಾಡುವುದು ಹಾಗೂ ಬಿತ್ತನೆ ಮಾಡುವುದು ಒಂದೇ ಸಲ ಬಂದಿರುವು ದರಿಂದ ಬಾಡಿಗೆ ಟ್ರ್ಯಾಕ್ಟರ್ಗಳಿಗೆ ಬೇಡಿಕೆ ಹೆಚ್ಚಿದೆ. ಇನ್ನು ಎತ್ತುಳ್ಳ ರೈತರು ತಮ್ಮ ಕೆಲಸ ಮುಗಿಸುವಲ್ಲಿ ಮಗ್ನರಾಗಿದ್ದಾರೆ. ಜೊತೆಗೆ ಬಾಡಿಗೆಗೆ ಹೋಗುತ್ತಿದ್ದಾರೆ. ಇಷ್ಟು ದಿನ ಕೆಲಸವಿಲ್ಲದೆ ಕುಳಿತ ಕೂಲಿಕಾರ್ಮಿಕರಿಗೆ ಮುಂಗಾರು ಮಳೆಯಿಂದಾಗಿ ಬೇಡಿಕೆ ಹೆಚ್ಚಿದೆ.
ದುಬಾರಿ ಬೆಲೆಗೆ ಬೀಜ ಮಾರಾಟ ಆರೋಪ: ಕಳೆದೆರಡು ವರ್ಷಗಳಿಂದ ಬರದಿಂದ ತತ್ತರಿಸಿದ ರೈತರಿಗೆ ಈ ಸಲದ ಮುಂಗಾರು ರೈತನ ಕೈ ಹಿಡಿದಿದ್ದು, ಮಳೆ ಚೆನ್ನಾಗಿ ಬರುತ್ತಿರುವುದಿಂದ ರೈತರಲ್ಲಿ ಖುಷಿ ತಂದಿದೆ. ಆದರೆ, ಅಂಗಡಿಗಳ ಮಾಲೀಕರು ಬೀಜಗಳ ಕೃತಕ ಅಭಾವ ಸೃಷ್ಟಿಸಿ ಬೀಜಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುವ ಮೂಲಕ ರೈತರ ವಂಚನೆಗೆ ಮುಂದಾಗಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ರೈತರಿಗೆ ನಿಗದಿಪಡಿಸಿದ ಬೆಲೆಗೆ ಬೀಜ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರಾಂತ ರೈತ ಸಂಘದ ಅಧ್ಯಕ್ಷ ಭೀಮರಾಯ ಟಪ್ಪೇದಾರ್ ಮನವಿ ಮಾಡಿದ್ದಾರೆ.
ಪಹಣಿಗೆ ಆಧಾರ್ ಜೋಡಣೆ: ಶಹಾಪುರ ತಾಲೂಕಿನಲ್ಲಿ 108603 ಫ್ಲಾಟ್ ಗಳಿದ್ದು, 39741 ಲಿಂಕ್ ಆಗಿವೆ. ಎನ್ಎ ಆಗಿರುವುದು 4114, ಮರಣ ಹೊಂದಿರುವವರ ಸಂಖ್ಯೆ 5029, ಮರಣ ಹಾಗೂ ಎನ್ ಎ ಇರುವದು 52. ಇವೆ. ಪಹಣಿಗೆ ಆಧಾರ ಜೋಡಣೆಯಿಂದ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ನೇರವಾಗಿ ರೈತರಿಗೆ ತಲುಪಲು ಸಹಾಯವಾಗುತ್ತದೆ. ರೈತರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ಉಮಾಕಾಂತ ಹಳ್ಳೆ ತಿಳಿಸಿದ್ದಾರೆ.
- ಸುನಿಲ್ ಕುಮಾರ್ ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಶಹಾಪುರ.ಈ ಬಾರಿ ಮಳೆರಾಯ ರೈತರ ಕೈ ಹಿಡಿದಿದ್ದಾನೆ. 2 ವರ್ಷಗಳಿಂದ ಬರಗಾಲದಿಂದ ಬೆಳೆ ಇಲ್ಲದೆ ತ್ರಾಸ್ ಅನುಭವಿಸಿದ್ದೇವೆ. ಈ ಸಲ ಒಳ್ಳೆ ಬೆಳೆ ಬರುವ ಮುನ್ಸೂಚನೆ ಮಳೆರಾಯ ನೀಡಿದ್ದಾನೆ. ರೈತರಿಗೆ ಒಳ್ಳೆ ಬೀಜ ಗೊಬ್ಬರ ಸರ್ಕಾರ ವಿತರಿಸಬೇಕು.