ಬೇಲೂರು: ಪಟ್ಟಣದ ಶೃಂಗೇರಿ ಶಂಕರಮಠದ ಶಾಖೆಯಲ್ಲಿ ಆದಿ ಶಂಕರಾಚಾರ್ಯರ ಜಯಂತಿಯ ಅಂಗವಾಗಿ ಐದು ದಿನಗಳ ಕಾಲ ವಿಶೇಷ ಪೂಜೆ, ಉತ್ಸವಗಳು, ಮೆರವಣಿಗೆ ಪ್ರವಚನದೊಂದಿಗೆ ಅದ್ಧೂರಿಯಾಗಿ ಸಂಪನ್ನಗೊಂಡಿತು.
ಈ ವೇಳೆ ಶೃಂಗೇರಿ ಶಾರದ ಮಠದ ಧರ್ಮದರ್ಶಿ ವಿಜಯಕೇಶವ ಮಾತನಾಡಿದರು. ಕೆ. ನಾರಾಯಣರಾವ್ ಮಾತನಾಡಿ, ಶಂಕರಾಚಾರ್ಯರ ತತ್ತ್ವಗಳು ಮಾನವ ಜೀವನಕ್ಕೆ ದಾರಿ ತೋರಿಸುವವು. ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ನಮ್ಮ ಸಂಸ್ಕೃತಿ ಮತ್ತು ಪರಂಪರೆ ಮುಂದುವರಿಯಲು ಸಹಕಾರವಾಗುತ್ತದೆ. ಯುವಪೀಳಿಗೆ ಇಂತಹ ಆಚರಣೆಗಳಲ್ಲಿ ಭಾಗಿಯಾಗಬೇಕು” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ಸುಮಂತ್ ಕುಮಾರ್ ಶರ್ಮಾ, ರಮೇಶ್ ಆನಂಬಿ, ಸುರೇಶ್, ನಾಗರಾಜು ಅನಂತಮೂರ್ತಿ, ರವೀಂದ್ರ, ಸುರೇಶ್, ಶಶಿ, ಕೃಷ್ಣಮೂರ್ತಿ ಹಾಗೂ ಗಾಯಿತ್ರಿ ಭಜನಾ ಮಂಡಳಿ ಸದಸ್ಯರು ಇದ್ದರು.