ಕನ್ನಡಪ್ರಭ ವಾರ್ತೆ ಧಾರವಾಡ
ಶಶಿ ಸಾಲಿ ಅಭಿನಂದಾ ಸಮಿತಿ, ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ, ಗದಗ ತೋಂದಾರ್ಯ ಮಠದ ಸಹಯೋಗದಲ್ಲಿ ಭಾನುವಾರ ನಗರದ ಸೃಜನಾ ರಂಗಮಂದಿರದಲ್ಲಿ ನಡೆದ ಶಶಿ ಸಾಲಿ ಅಭಿನಂದನೆ ಹಾಗೂ ''''ನೆನಪು ಹರಿಗೋಲು'''' ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಹಿಂದಿನ ದಿನಗಳಲ್ಲಿ ಬಡವ, ಶ್ರೀಮಂತ ಯಾರೇ ಇರಲಿ, ಸ್ನೇಹಿತರು ಜೀವಕ್ಕೆ ಜೀವ ಕೊಡುತ್ತಿದ್ದರು. ಆದರೆ, ಇಂದು ಬದಲಾದ ಕಾಲಘಟದಲ್ಲಿ ಲಾಭ ಮಾತ್ರ ನೋಡುವ ಸ್ನೇಹವಿದೆ. ಹೀಗಾಗಿ ಮಕ್ಕಳಿಗೆ ಸಂಸ್ಕಾರ ಕಲಿಸಲು ಪಾಲಕರಿಗೆ ಹೇಳಿದರು.ನಾನು, ಶಶಿ ಸಾಲಿ 1974ರಿಂದ ಬಾಲ್ಯದ ಸ್ನೇಹಿತರು. ನಂಬಿಕೆ, ವಿಶ್ವಾಸ, ಪ್ರೀತಿಗೆ ಮತ್ತೊಂದು ಹೆಸರೇ ಶಶಿ ಸಾಲಿ. ಸ್ನೇಹದಲ್ಲಿ ಭಿನ್ನಾಭಿಪ್ರಾಯ, ವೈಮನಸ್ಸು ಸಹಜ. ಆದರೆ, ಅವುಗಳು ಕ್ಷಣಿಕವಾಗಿರಬೇಕು. ಅಂದಾಗ ಮಾತ್ರ ಸ್ನೇಹ ಜೀವನ ಬಹಳ ಸಂದರ ಇರಲು ಸಾಧ್ಯ ಎಂದು ತಿಳಿಸಿದರು.
ಅಭಿನಂದನಾ ಪರ ನುಡಿಗಳನ್ನಾಡಿದ ಡಾ. ಶಾಂತಿನಾಥ ದಿಬ್ಬದ, ತೋಂಟದ ಡಾ. ಸಿದ್ದಲಿಂಗ ಶ್ರೀಗಳಿಂದ 2018ರಲ್ಲಿ ಮೊಳಕೆ ಒಡೆದ ಶಶಿ ಸಾಲಿ ಅಭಿನಂದನೆ ನಾಲ್ಕು ವರ್ಷದ ಬಳಿಕ ಈಡೇರಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಪಲ್ಲಕ್ಕಿಯಲ್ಲಿ ಹೊತ್ತುತಂದ ''''ನೆನಪು ಹರಿಗೋಲು'''' ಕೃತಿ ಬಿಡುಗಡೆ ಬಳಿಕ ಶಶಿ ಸಾಲಿ ಹಾಗೂ ಆಶಾ ಸಾಲಿ ದಂಪತಿ ಸನ್ಮಾನಿಸುವ ಮೂಲಕ ಅಭಿನಂದಿಸಲಾಯಿತು.