ರಾಮನಗರ: ಮುಂದಿನ ಎರಡು ತಿಂಗಳಲ್ಲಿ ಆಶ್ರಯ ಸಮಿತಿ ರಚನೆ ಮಾಡಿ, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ನಿವೇಶನ ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ಭರವಸೆ ನೀಡಿದರು.
ಸಭೆಯಲ್ಲಿ ಅಹವಾಲು ಸಲ್ಲಿಸಿದ ಬಹುತೇಕ ಮಂದಿ ನಿವೇಶನ ಕೋರಿ ಮನವಿ ಮಾಡಿದ್ದೀರಿ. ಈಗಾಗಲೇ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಂಬಾಪುರ ಗ್ರಾಮದ ಬಳಿ ಸುಮಾರು 22 ಎಕರೆ ಜಮೀನನ್ನು ಗುರುತಿಸಲಾಗಿದೆ. ಅಲ್ಲಿ ಚನ್ನಮಾನಹಳ್ಳಿ, ವಿಭೂತಿಕೆರೆ, ಅಂಜನಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ನಿವೇಶನ ರಹಿತ ಬಡವರಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದರು.
ಅತಿ ಶೀಘ್ರದಲ್ಲೇ ಆಶ್ರಯ ಸಮಿತಿ ರಚನೆ ಮಾಡುತ್ತೇವೆ. ಆಯಾಯ ಗ್ರಾಮದಲ್ಲಿ ಯಾರು ಬಡವರು, ನಿರ್ಗತಿಕರು, ಯಾರಿಗೆ ನಿವೇಶನ ಅಗತ್ಯವಿದೆ ಎಂಬುದನ್ನು ಗುರುತಿಸಿ ನಿವೇಶನ ಹಂಚಿಕೆ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.1 ಸಾವಿರ ಬಗರ್ ಹುಕುಂ ಅರ್ಜಿ:
ವಿಭೂತಿಕೆರೆ ಪಂಚಾಯಿತಿಗೆ ವಿವಿಧ ಅನುದಾನದಡಿ 9.5ಕೋಟಿ ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ನೀಡಿದ್ದೇವೆ. ಚನ್ನಮಾನಹಳ್ಳಿ ಗ್ರಾಮಕ್ಕೆ 1 ಕೋಟಿ ಅನುದಾನ ಕೊಟ್ಟಿದ್ದೇವೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 50 ಕೋಟಿ ಲಭ್ಯವಿದ್ದು, ಈ ಗ್ರಾಮಕ್ಕೆ ಇನ್ನೂ 20 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಶೈಕ್ಷಣಿಕ ಸಹಾಯಧನ, ಉದ್ಯೋಗ, ನಿವೇಶನ, ಚರಂಡಿ, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಕೋರಿ ಸಾರ್ವಜನಿಕರು ಅಹವಾಲು ಸಲ್ಲಿಸಿದರು.
ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕೆ.ರಾಜು, ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಮಾಜಿ ಅಧ್ಯಕ್ಷ ಸಿಎನ್ಆರ್ ವೆಂಕಟೇಶ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾದ ವಿ.ಎಚ್.ರಾಜು, ಬಗರ್ ಹುಕುಂ ಸಮಿತಿ ಸದಸ್ಯ ಜಯಕರ್ನಾಟಕ ರವಿ, ಗ್ರಾಮದ ಮುಖಂಡರಾದ ನಾಗೇಶ್, ಚನ್ನಮಾನಹಳ್ಳಿ ರಾಜು, ವೆಂಕಟಪ್ಪ, ಉಮೇಶ್, ಶ್ರೀನಿವಾಸ್, ಶಶಿ, ಮುನಿರಾಜು, ಗೋವಿಂದರಾಜು, ವೆಂಕಟಪ್ಪ, ಶಿವಣ್ಣ, ವಿಷಕಂಠಪ್ಪ, ಕುಂಬಾಪುರ ಪಾರ್ಥ,ಅರಳಪ್ಪ, ಭೂಷಣ್ ಮತ್ತಿತರರು ಹಾಜರಿದ್ದರು.
ಕಳೆದ 20-25 ವರ್ಷಗಳಿಂದ ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದೀರಿ. ಅಂತಹ 850ರಿಂದ 1000 ಅರ್ಜಿಗಳನ್ನು ಒಂದು ವರ್ಷದೊಳಗೆ ವಿಲೇವಾರಿ ಮಾಡಿ, ಅರ್ಹ ರೈತರಿಗೆ ಸಾಗುವಳಿ ಜಮೀನು ಕೊಡಿಸುತ್ತೇನೆ. ಈಗಾಗಲೇ ಹರೀಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರ ಜಮೀನಿಗೆ ಭೇಟಿ ನೀಡಿ, ಪರಿಶೀಲನೆ ಮಾಡಿದ್ದೇವೆ. ಅಲ್ಲಿ ಸುಮಾರು 40 ಮಂದಿಗೆ ಸಾಗುವಳಿ ಚೀಟಿ ನೀಡಲು ಕ್ರಮ ಕೈಗೊಳ್ಳುತ್ತಿದ್ದೇವೆ.
6ಕೆಆರ್ ಎಂಎನ್ 2.ಜೆಪಿಜಿ