ಸಿಇಟಿ ಪರೀಕ್ಷೆಯಲ್ಲಿ ಶಿರಾ ಪ್ರೆಸಿಡೆನ್ಸಿ ಪಿಯು ಕಾಲೇಜು ಅತ್ಯುತ್ತಮ

KannadaprabhaNewsNetwork |  
Published : Jun 04, 2024, 12:31 AM IST
3ಶಿರಾ1: ಏಪ್ರಿಲ್ 24ರಲ್ಲಿ ನಡೆದ ಕರ್ನಾಟಕ ಸಿ.ಇ.ಟಿ ಪರೀಕ್ಷೆಯಲ್ಲಿ ಶಿರಾ ನಗರದ ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ತ್ಯುತ್ತಮ ಸಾಧನೆ ಮಾಡಿದ್ದಾರೆ. | Kannada Prabha

ಸಾರಾಂಶ

ಒಟ್ಟು 9 ವಿದ್ಯಾರ್ಥಿಗಳು 100 ರ್‍ಯಾಂಕ್ ಹಾಗೂ 39 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ 500ರರೊಳಗಿನ ರ್‍ಯಾಂಕ್ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರು ಸುಬ್ರಮಣ್ಯ ಡಿ. ಕೆ. ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿರಾ

ಏಪ್ರಿಲ್ ನಲ್ಲಿ ನಡೆದ ಕರ್ನಾಟಕ ಸಿಇಟಿ ಪರೀಕ್ಷೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿರುವ ಶಿರಾ ನಗರದ ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮೆರೆದಿದ್ದಾರೆ. ಒಟ್ಟು 9 ವಿದ್ಯಾರ್ಥಿಗಳು 100 ರ್‍ಯಾಂಕ್ ಹಾಗೂ 39 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ 500ರರೊಳಗಿನ ರ್‍ಯಾಂಕ್ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರು ಸುಬ್ರಮಣ್ಯ ಡಿ. ಕೆ. ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ಕೃಷಿವಿಜ್ಞಾನ ವಿಭಾಗದಲಿ ದರ್ಶನ್ ಎಚ್. ಆರ್. 22, ಚಂದನಾ ವಿ. 24, ವೇದಮೂರ್ತಿ ಡಿ. ಎಸ್. 44, ದರ್ಶನ್ ಜಿ. ವಿ. 67, ದಿಗಂತ್ ಎ. ಎಂ. 90, ಮಹೇಶ್ ಜಿ. ಡಿ. 161, ಮನೋಜ್ ಗೌಡ ವಿ. 177, ವಂದನಾ ಜಿ. ಎಸ್. 318, ಕನ್ನಿಕಾ ಎಚ್. ಆರ್. 319, ದೀಶಂತ್ ಇ. 332, ಭಾಸ್ಕರ್ 337, ವರ್ಷಿತಗೌಡ 455, ವಾಣಿ 499, ಹಾಗೂ 24 ವಿದ್ಯಾರ್ಥಿಗಳು 1000ರರೊಳಗಿನ ರ್‍ಯಾಂಕ್ ಪಡೆದಿದ್ದಾರೆ.

ಪಶುವೈದ್ಯ ವಿಭಾಗದಲ್ಲಿ ದರ್ಶನ್ ಎಚ್. ಆರ್. 27, ದಿಗಂತ್ ಎ. ಎಂ. 28, ಚಂದನಾ ವಿ. 47, ಮಹೇಶ್ ಜಿ. ಡಿ. 49, ದರ್ಶನ್ ಜಿ. ವಿ. 132, ವೇದಮೂರ್ತಿ ಡಿ. ಎಸ್. 143, ವಂದನಾ ಜಿ. ಎಸ್. 318, ಪ್ರಗತಿ ಡಿ. 347, ಮನೋಜ್ ಗೌಡ ವಿ. 356 , ಕನ್ನಿಕಾ ಎಚ್. ಆರ್. 362, ನಿತಿನ್ ಗೌಡ 422, ಸ್ಪೂರ್ತಿ ಪ್ರಭು 490ನೇ ರ್‍ಯಾಂಕ್ ಗಳಿಸಿದ್ದಾರೆ. 29 ವಿದ್ಯಾರ್ಥಿಗಳು 1000ರರೊಳಗಿನ ರ್‍ಯಾಂಕ್ ಪಡೆದಿದ್ದಾರೆ.

ಇಂಜಿನಿಯರಿಂಗ್ - ನ್ಯಾಚ್ಯುರೋಪಥಿ ವಿಭಾಗದಲ್ಲಿ ವಾಣಿ 499, ತನುಶಾ ಎಂ. 564, ಸ್ಪೂರ್ತಿ ಪ್ರಭು 677, ಮೇಘನಾ ಎಂ. ಎಸ್. 708, ನಿವೇದಿತಾ 736, ಪ್ರಗತಿ ಡಿ. 824, ತೇಜಸ್ ಎ. ಆರ್. 883 ರ್‍ಯಾಂಕ್ ಮತ್ತು 64 ವಿದ್ಯಾರ್ಥಿಗಳು 5000ರರೊಳಗಿನ ರ್‍ಯಾಂಕ್ ಪಡೆದಿದ್ದಾರೆ.

ಬಿಎಸ್ಸಿ ನರ್ಸಿಂಗ್ ವಿಭಾಗದಲ್ಲಿ ಸ್ಪೂರ್ತಿ ಪ್ರಭು 491, ತನುಶಾ ಎಂ. 571, ಪೂಜಾ ಎನ್. 746, ವಾಣಿ 780, ಪ್ರಗತಿ ಡಿ. 932ನೇ ರ್‍ಯಾಂಕ್ ಗಳಿಸಿದ್ದಾರೆ. 22 ವಿದ್ಯಾರ್ಥಿಗಳು 2000ರರೊಳಗಿನ ರ್‍ಯಾಂಕ್ ಪಡೆಯುವುದರ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸ್ಥೆಯ ಅಧ್ಯಕ್ಷ ಚಿದಾನಂದ್ ಎಂ.ಗೌಡರವರು ಅಭಿನಂಧಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿಲ್ಲಿಯಲ್ಲಿ ಡಿಕೆಶಿ ರಾಜ್ಯ ನೀರಾವರಿ ಸಭೆ
ಗ್ಯಾಸ್ ಇಲ್ಲದೇ ಬೆಳಗಾವಿಯ 60 + ಕೈಗಾರಿಕೆ ಬಂದ್‌ ಹಂತಕ್ಕೆ