- ಹರಿಹರದಲ್ಲಿಕ್ಕೆ ಆಗಮಿಸಿದ್ದ ವೇಳೆ ಚರ್ಚ್ ಲೆಕ್ಕಪತ್ರ ವಿವರಕ್ಕಾಗಿ ಆಗ್ರಹ ।
- - - - ಬಸಲಿಕಾ ಚರ್ಚ್ ದೇಣಿಗೆ, ಮರಿಯಾ ಸದನ ಹಾಲ್ ಬಾಡಿಗೆ, ಮರಿಯಾ ನಿವಾಸ ಶಾಲೆ ಮುಂತಾದ ಹಣದ ದುರುಪಯೋಗ; ಆರೋಪ
- ಫಾದರ್ ಕೆ.ಎ. ಜಾರ್ಜ್ ಅಧಿಕಾರ ವಹಿಸಿಕೊಂಡಾಗಿನಿಂದ ಚರ್ಚ್ನ ಲೆಕ್ಕಪತ್ರ ವಿವರ ನೀಡಿಲ್ಲ ಎಂದು ಆರೋಪ- ಹೆದ್ದಾರಿಗೆ ಜಮೀನು ಸ್ವಾಧೀನದ ಪರಿಹಾರದ ಯಾರ ಖಾತೆಗೆ, ಎಷ್ಟು ಜಮಾ ಆಗಿದೆ ಎಂದು ಪ್ರಶ್ನೆ
ವಿವಿಧ ಕಾರ್ಯಕ್ರಮಗಳ ಹಿನ್ನೆಲೆ ಬಿಷಪ್ ಫ್ರಾನ್ಸಿಸ್ ಸೆರಾವೋ ನಗರದ ಚರ್ಚಗೆ ಆಗಮಿಸಿದ್ದರು. ಈ ವೇಳೆ ವಿವಿಧ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಚರ್ಚ್ ಪಾಲನಾ ಪರಿಷತ್ತು ಸದಸ್ಯರು, ಮುಖಂಡರು ಸಮಾಜದ ಸಾರ್ವಜನಿಕರು ಒತ್ತಾಯಿಸಿ, ಪ್ರತಿಭಟನೆಗೆ ಮುಂದಾದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಆರೋಗ್ಯಸ್ವಾಮಿ ಸುರೇಶ ಕುಮಾರ ಮಾತನಾಡಿ, ಈ ಚರ್ಚ್ಗೆ ದೇಶ, ರಾಜ್ಯದ ಹಲವಾರು ಜಿಲ್ಲೆಗಳಿಂದ ನಿತ್ಯ ಜಾತಿ-ಮತ ಭೇಧವಿಲ್ಲದೇ ಹಲವಾರು ಭಕ್ತರು ಬರುತ್ತಾರೆ. ಇದೊಂದು ಪವಿತ್ರ ಧರ್ಮ ಕ್ಷೇತ್ರವಾಗಿದೆ. ಇಂಥ ಪವಿತ್ರ ಧರ್ಮಕ್ಷೇತ್ರಕ್ಕೆ ಫಾದರ್ ಕೆ.ಎ. ಜಾರ್ಜ್ ಕಳೆದ 2 ವರ್ಷಗಳಿಂದ ಧರ್ಮಾಧಿಕಾರಿ ಆಗಿದ್ದಾರೆ. ಅವರು ಅಧಿಕಾರ ವಹಿಸಿಕೊಂಡಾಗಿನಿಂದ ಇಲ್ಲಿಯವರೆಗೂ ಚರ್ಚ್ನ ಲೆಕ್ಕಪತ್ರದ ವಿವರವನ್ನು ಚರ್ಚ್ ಪಾಲನಾ ಸಮಿತಿಗಾಗಲಿ, ಕ್ರೈಸ್ತ ಸಮುದಾಯದವರಿಗಾಗಲಿ ನೀಡಿಲ್ಲ. ಈ ಬಗ್ಗೆ ಶಿವಮೊಗ್ಗದ ಬಿಷಪ್ ಅವರಿಗೂ ಮನವಿ ಸಲ್ಲಿಸಲಾಗಿದೆ. ಇದುವರೆಗೆ ಲೆಕ್ಕಪತ್ರ ನೀಡುತ್ತಿಲ್ಲ ಎಂದು ದೂರಿದರು.
ಚರ್ಚ್ ನವೀಕರಣ ಮತ್ತು ದುರಸ್ತಿಗಾಗಿ ಸುಮಾರು ₹20 ಲಕ್ಷದಿಂದ ರಿಂದ ₹22 ಲಕ್ಷವನ್ನು ನೀಡಿದ ಬಗ್ಗೆ ಮಾಹಿತಿ ಇದೆ. ದುರಸ್ತಿ ಮತ್ತು ನವೀಕರಣಕ್ಕಾಗಿ ಅನೇಕ ದಾನಿಗಳು ಸಿಮೆಂಟ್ ಮತ್ತಿತರೆ ಸಾಮಗ್ರಿಗಳನ್ನು ನೀಡಿರುವ ಮಾಹಿತಿ ಇದೆ. ಹಳೆಯ ಚರ್ಚ್ ದುರಸ್ತಿ ಮತ್ತು ನವೀಕರಣಕ್ಕಾಗಿ ಸಂಗ್ರಹವಾದ ಹಣದ ಬಗ್ಗೆ ಲೆಕ್ಕಾಚಾರ ಜನರಿಗೆ ಒಪ್ಪಿಸುವಂತೆ ಮನವಿ ಮಾಡಿದ್ದರೂ, ಯಾವುದೇ ಮಾಹಿತಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲಾರೆನ್ಸ್, ಅಗಷ್ಟಿನ್, ಜೋಸೆಫ್ ಕುಮಾರ, ಆರ್.ಎನ್. ಜಾನ್, ಫ್ರಾನ್ಸಿಸ್ ಜೆ., ರಾಜಣ್ಣ, ಅಲ್ಬರ್ಟ್, ಆ್ಯಂಟಿನಿ ಕ್ರೋಷ್, ವಿನೋದ್ ರಾಜನ್ ಹಾಗೂ ಇತರರು ಪ್ರತಿಭಟನೆಗೆ ಸಾಥ್ ನೀಡಿದರು.
ಹರಿಹರದ ಬಸಲಿಕಾ ಆರೋಗ್ಯ ಮಾತೆಯ ಚರ್ಚ್ನಲ್ಲಿ ಶನಿವಾರ ಬಿಷಪ್ ಅವರಿಗೆ ಘೇರಾವ್ ವೇಳೆ ತಳ್ಳಾಟ ನೂಕಾಟ ನಡೆಯಿತು.
ಬಾಕ್ಸ್ * ಜಮಾ ಖರ್ಚಿನ ಮಾಹಿತಿ ಮಂಡಿಸುತ್ತೇವೆ: ಬಿಷಪ್ ಹರಿಹರ ನಗರಕ್ಕೆ ಆಗಮಿಸಿದ ಶಿವಮೊಗ್ಗದ ಕ್ರೈಸ್ತ ರೋಮನ್ ಕ್ಯಾಥೋಲಿಕ್ ಧರ್ಮಾಧ್ಯಕ್ಷ ಬಿಷಪ್ ಫ್ರಾನ್ಸಿಸ್ ಸೆರಾವೊ ಪತ್ರಕರ್ತರೊಂದಿಗೆ ಮಾತನಾಡಿ, ನಮ್ಮಲ್ಲಿ ವಿವಿಧ ಸಮಿತಿಗಳಿವೆ. ನಮ್ಮ ರೀತಿಯ ಪ್ರಕಾರ ಆರ್ಥಿಕ ಸಮಿತಿಯಲ್ಲಿ ಮಾತ್ರ ಜಮಾ ಖರ್ಚಿನ ಮಾಹಿತಿ ಮಂಡಿಸುತ್ತೇವೆ. ಇದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲ ಎಂದರು.
ಚರ್ಚ್ ಹೆಸರಿನಲ್ಲಿ ಯಾವುದೇ ಆಸ್ತಿಗಳನ್ನು ರಿಜಿಸ್ಟರ್ ಮಾಡಿಸುವುದಿಲ್ಲ. ರೈತರೊಬ್ಬರ ಹೆಸರಿನಲ್ಲಿ ಜಮೀನುಗಳನ್ನು ರಿಜಿಸ್ಟರ್ ಮಾಡಿಸುತ್ತೇವೆ. ಉಳಿದಂತೆ ಬಡ ಹಿಂದೂ ಕುಟುಂಬವೊಂದಕ್ಕೆ ಇಲ್ಲಿನ ಅಡುಗೆ ಕೆಲಸಗಳಿಗೆ ನೇಮಕ ಮಾಡಲಾಗಿದೆ. ಬಡ ಕುಟುಂಬಗಳಿಗೆ ಸಾಧ್ಯವಾದಷ್ಟು ಅಥವಾ ಉಚಿತ ಶಿಕ್ಷಣ ನೀಡುತೇವೆ ಎಂದರು.ಈ ಸಂದರ್ಭ ಫಾದರ್ ಕೆ.ಎ. ಜಾರ್ಜ್ ಹಾಗೂ ಇತರರು ಇದ್ದರು.
- - - -22ಎಚ್.ಆರ್.ಆರ್01:ಹರಿಹರದಲ್ಲಿ ಶಿವಮೊಗ್ಗದ ಕ್ರೈಸ್ತ ರೋಮನ್ ಕ್ಯಾಥೋಲಿಕ್ ಧರ್ಮಾಧ್ಯಕ್ಷ ಬಿಷಪ್ ಫ್ರಾನ್ಸಿಸ್ ಸೆರಾವೊ ಪತ್ರಕರ್ತರೊಂದಿಗೆ ಮಾತನಾಡಿದರು.