ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಗ್ರಾಮಗಳಲ್ಲೇ ಈ - ಸ್ವತ್ತು
ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಪ್ರತಿ ಮನೆಗೂ, ಖಾಲಿ ನಿವೇಶನಗಳಿಗೂ ಸರ್ಕಾರದಿಂದ ಸಿಗುವ ಈ-ಸ್ವತ್ತುಗಳನ್ನು ಪಡೆಯಲು ಸಾರ್ವಜನಿಕರು ಪರದಾಡುತ್ತಿದ್ದಾರೆ. ಈ ರೀತಿಯ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿಯೇ ನಿಮ್ಮ ಗ್ರಾಮದಲ್ಲಿಯೇ ಇಲಾಖೆಯ ಅಧಿಕಾರಿಗಳೊಡನೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.ರಾಜ್ಯದಲ್ಲಿಯೇ ಪ್ರಥಮಬಾರಿಗೆ ಜಿ.ಪಿ.ಎಲ್.ಎಫ್.ನ ಅಡಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಸಮವಸ್ತ್ರವನ್ನು ವಿತರಿಸಿ ಸನ್ಮಾನ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರಿಗೂ ಕೂಡ ಸನ್ಮಾನ ಮಾಡಲಾಯಿತು. ಇ ಸ್ವತ್ತು ವಿತರಿಸಲು ಕ್ರಮ
ತಾ.ಪಂ.ಇಒ ಜೆ.ಕೆ.ಹೊನ್ನಯ್ಯ ಮಾತನಾಡಿ, ಹಕ್ಕು ಪತ್ರ ನೀಡಿದ್ದರೂ ದಾಖಲೆಗಳಲ್ಲಿ ಸರ್ವೇ ನಂಬರ್ ಬರುತ್ತಿರುವ ದೂರುಗಳು ಇವೆ. ಕಾನೂನು ವ್ಯಾಪ್ತಿಯಲ್ಲಿ ಪರಿಹಾರ ಸೂಚಿಸಲಾಗುವುದು. ಶಾಸಕರ ಸೂಚನೆಯಂತೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಮನೆ ಮನೆಗೆ ಹೋಗಿ ದಾಖಲೆಗಳನ್ನು ಸಂಗ್ರಹಿಸಿ ಇ ಸ್ವತ್ತು ವಿತರಿಸಲಾಗುವುದು ಎಂದರುಕೋಚಿಮುಲ್ ನಿರ್ದೇಶಕ ಜೆ .ಕಾಂತರಾಜು ಮಾತನಾಡಿ, ಈ ಸ್ವತ್ತು ಸಿಗದೆ ವರ್ಷಾನುಗಟ್ಟಲೆ ಕಾಯುತ್ತಿರುವವರು ಇದ್ದಾರೆ. ನಗರ ಪ್ರದೇಶದಲ್ಲಿ ನಡೆಯುತ್ತಿದ್ದ ಇ ಸ್ವತ್ತು ವಿತರಣೆ ಅಭಿಯಾನವನ್ನು ಗ್ರಾಮೀಣ ಪ್ರದೇಶಕ್ಕೆ ವಿಸ್ತರಿಸಲಾಗಿದೆ. ಕಾನೂನು ವ್ಯಾಪ್ತಿಯಲ್ಲಿ ಹಕ್ಕು ಪತ್ರ ಹಾಗೂ ಈ ಸ್ವತ್ತು ವಿತರಣೆ ಮಾಡಿದರೆ ಜನಕ್ಕೆ ಅನುಕೂಲವಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ತೊಂಡೆಬಾವಿ ಗ್ರಾಪಂ ಅಧ್ಯಕ್ಷ ಕಾಮಾಕ್ಷಿ ರಾಮದಾಸ್, ಪಿಡಿಒ ಬಸವರಾಜ್ ಬಳೂಟಗಿ , ಸೇರಿದಂತೆ ಅಲಕಾಪುರ, ಜಿ ಬೊಮ್ಮಸಂದ್ರ, ಕಲ್ಲಿನಾಯಕನಹಳ್ಳಿ, ತರಿದಾಳು, ಅಲ್ಲಿಪುರ, ಬೇವನಹಳ್ಳಿ ಗ್ರಾಪಂ ಅಧ್ಯಕ್ಷರು ಸದಸ್ಯರು, ಪಿಡಿಒಗಳು ಮತ್ತು ಅಧಿಕಾರಿಗಳು ಇದ್ದರು.
ಫೋಟೋ............ಗೌರಿಬಿದನೂರಿನ ತೊಂಡೆಭಾವಿಯಲ್ಲಿ ಏರ್ಪಡಿಸಿದ್ದ ಇ ಸ್ವತ್ತು ಅಭಿಯಾನದಲ್ಲಿ ಶಾಸಕ ಕೆ.ೆಚ್.ಪುಟ್ಟಸ್ವಾಮಿಗೌಡ ಮಾತನಾಡಿದರು.