ಕನ್ನಡಪ್ರಭ ವಾರ್ತೆ ಮುಧೋಳ
ಸೋಮವಾರ ಬೆಳಗ್ಗೆ 7.15ಕ್ಕೆ ಶ್ರೀ ವೇದಮೂರ್ತಿ ಮಾದನಹಿಪ್ಪರಗಾ ಗ್ರಾಮದ ಸಿದ್ದಯ್ಯ ಕಣ್ಣಿ ಅವರ ರುದ್ರ ಅಧ್ಯಯನದೊಂದಿಗೆ ಶ್ರೀ ಸಿದ್ಧಲಿಂಗ ಋಷಿಗಳ ರುದ್ರಾಭಿಷೇಕ ಪೂಜೆ, ಬೆಳಗ್ಗೆ 10.15ಕ್ಕೆ ರಥಕ್ಕೆ ಕಳಸಾರೋಹಣ, ಮಧ್ಯಾಹ್ನ 12.30ಕ್ಕೆ ಮಹಾಪ್ರಸಾದ, ಮಧ್ಯಾಹ್ನ 2.15ಕ್ಕೆ ಕುಂಭ ಕಳಸ, ಪುರವಂತ, ಡೊಳ್ಳಿನಮೇಳ, ಝಾಂಜ್ ಪಥಕ್ ಹಾಗೂ ವಿವಿಧ ವಾದ್ಯ ವೈಭವಗಳೊಂದಿಗೆ ಶ್ರೀ ಸಿದ್ಧಲಿಂಗ ಋಷಿಗಳ ಅಡ್ಡಪಲ್ಲಕ್ಕಿ ಮೆರವಣಿಗೆ ಪುರಪ್ರವೇಶವಾಯಿತು.
ಏ.28ರಂದು ಬೆಳಗ್ಗೆ 7.15ಕ್ಕೆ ಶ್ರೀ ಸಿದ್ಧಲಿಂಗ ಋಷಿಗಳ ವಿಭೂತಿ ಮಹಾಪೂಜೆ, ರಾತ್ರಿ 7.15ಕ್ಕೆ ಸಂಗೀತ ಭಜನೆಯೊಂದಿಗೆ ಪತ್ರಿ ಪುಷ್ಪಗಳಿಂದ ಕೈಲಾಸ ಮಂಟಪದಲ್ಲಿ ಶ್ರೀ ಸಿದ್ಧಲಿಂಗ ಋಷಿಗಳ ಕೌದಿ ಮಹಾಪೂಜೆ ನಂತರ ಶ್ರೀ ಸಿದ್ಧಲಿಂಗ ಋಷಿಗಳ ಜಯ ಜಯಕಾರಯೊಂದಿಗೆ ಕಾರ್ಯಕ್ರಮ ಮಹಾಮಂಗಲಗೊಳ್ಳಲಿದೆ.