ಕನ್ನಡಪ್ರಭ ವಾರ್ತೆ ವಿಜಯಪುರ ರಾಘವೇಂದ್ರ ಕುಲಕರ್ಣಿ ಕನ್ನೂರಕರ ವಿರಚಿತ ಮುಂಜಾನೆ ಮಾತು ಕೃತಿಯಲ್ಲಿ ಹಲವು ಮೌಲ್ಯಯುತ ಉಪದೇಶದ ಮಾತುಗಳಿದ್ದು, ಪ್ರತಿಯೊಬ್ಬರೂ ಅವುಗಳನ್ನು ಓದಿ ವರ್ತನೆಯಲ್ಲಿ ಪರಿವರ್ತನೆಯಾಗಬೇಕು ಎಂದು ವಿಶ್ರಾಂತ ಪ್ರಾಚಾರ್ಯ ಡಾ.ವಿ.ಡಿ.ಐಹೊಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಘವೇಂದ್ರ ಕುಲಕರ್ಣಿ ಕನ್ನೂರಕರ ವಿರಚಿತ ಮುಂಜಾನೆ ಮಾತು ಕೃತಿಯಲ್ಲಿ ಹಲವು ಮೌಲ್ಯಯುತ ಉಪದೇಶದ ಮಾತುಗಳಿದ್ದು, ಪ್ರತಿಯೊಬ್ಬರೂ ಅವುಗಳನ್ನು ಓದಿ ವರ್ತನೆಯಲ್ಲಿ ಪರಿವರ್ತನೆಯಾಗಬೇಕು ಎಂದು ವಿಶ್ರಾಂತ ಪ್ರಾಚಾರ್ಯ ಡಾ.ವಿ.ಡಿ.ಐಹೊಳ್ಳಿ ಹೇಳಿದರು.

ನಗರದ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಂಡ ಕೃತಿ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಲಕರ್ಣಿಯವರು ವಿದ್ಯಾರ್ಥಿ ದೆಶೆಯಲ್ಲಿಯೇ ಪೇಪರ ಹಂಚಿ ಆಗಿನ ವಿದ್ಯಾರ್ಥಿ ಇಂದು ಸಾಹಿತಿಯಾಗಿ ಸುಮಾರು 20 ಕೃತಿಗಳನ್ನು ರಚಿಸಿದ್ದಾರೆ. ಪೋಷಕರು, ಪಾಲಕರು ಮತ್ತು ಶಿಕ್ಷಕರು ಈ ಕೃತಿಗಳನ್ನು ಓದಿದಾಗ ಬದಲಾವಣೆ ಕಾಣಲು ಸಾಧ್ಯ ಎಂದರು.

ಹಿರಿಯ ಸಂಶೋಧಕ ಡಾ.ಕೃಷ್ಣ ಕೊಲ್ಹಾರಕುಲಕರ್ಣಿ ಮತ್ತು ಡಾ.ಎಂ.ಎಸ್.ಮದಭಾವಿ ಮುಂಜಾನೆ ಮಾತು ಹಾಗೂ ಆಧುನಿಕ ಶಾಕುಂತಲೆ ಎಂಬ ನೂತನ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.