ಸಿದ್ದರಾಮಯ್ಯ ಎಲ್ಲ ವರ್ಗದ ನಾಯಕ: ಮಾಜಿ ಶಾಸಕ ಬಿ.ಆರ್. ಯಾವಗಲ್ಲ

KannadaprabhaNewsNetwork |  
Published : Jan 07, 2026, 02:30 AM IST
ಕುರುಬ ಸಮಾಜದವರು ಸಿಎಂ ಸಿದ್ದರಾಮಯ್ಯನವರು ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಹಿಂದುಳಿದ ರೈತ ಕುಟುಂಬದಿಂದ ಬಂದ ಸಿದ್ದರಾಮಯ್ಯನವರು ಕಡುಬಡತನದಲ್ಲಿ ಕಾನೂನು ಪದವಿ ಮುಗಿಸಿ ಆನಂತರ ರಾಜಕಾರಣಕ್ಕೆ ಬಂದು ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿಗಳಾಗಿ ಯಾವುದೇ ಒಂದು ವರ್ಗಕ್ಕೆ ಸಿಮೀತ ಎನ್ನದೆ ಎಲ್ಲ ವರ್ಗದ ಜನರಗೆ ಹಲವಾರು ರೀತಿ ಯೋಜನೆಗಳನ್ನು ಜಾರಿಗೆ ತಂದರು.

ನರಗುಂದ: ರಾಜ್ಯದಲ್ಲಿ ಎರಡು ಅವಧಿಯಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಅಭಿವೃದ್ಧಿ ಮಾಡಿದ್ದಾರೆ. ಮೇಲಾಗಿ ಅವರು ಎಲ್ಲ ವರ್ಗದ ನಾಯಕರಾಗಿದ್ದರೆಂದು ಮಾಜಿ ಶಾಸಕ ಬಿ.ಆರ್. ಯಾವಗಲ್ಲ ತಿಳಿಸಿದರು.

ಮಂಗಳವಾರ ಪಟ್ಟಣದ ಸಂಗೊಳ್ಳಿ ರಾಯಣ್ಣವರ ವೃತ್ತದ ಬಳಿ ಕರ್ನಾಟಕ ರಾಜ್ಯ ಕುರುಬ ಸಮಾಜ ಮತ್ತು ಕನಕದಾಸ ಕಲ್ಯಾಣ ಸಮಿತಿ ಆಶ್ರಯದಲ್ಲಿ ಡಿ. ದೇವರಾಜ ಅರಸು ಅವರ ಆಡಳಿತವನ್ನು ಸಮಗಟ್ಟಿದ ಸಿದ್ದರಾಮಯ್ಯನವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಮಾತನಾಡಿದರು.

ರಾಜ್ಯದಲ್ಲಿ ಹಿಂದುಳಿದ ರೈತ ಕುಟುಂಬದಿಂದ ಬಂದ ಸಿದ್ದರಾಮಯ್ಯನವರು ಕಡುಬಡತನದಲ್ಲಿ ಕಾನೂನು ಪದವಿ ಮುಗಿಸಿ ಆನಂತರ ರಾಜಕಾರಣಕ್ಕೆ ಬಂದು ಶಾಸಕರಾಗಿ, ಸಚಿವರಾಗಿ, ಹಲವಾರು ರೀತಿ ರಾಜ್ಯದಲ್ಲಿ ತಮ್ಮಗೆ ವಹಿಸಿದ ಖಾತೆಯನ್ನು ನಿಭಾಹಿಸಿ ಮುಂದೆ ಮುಖ್ಯಮಂತ್ರಿಗಳಾಗಿ ಯಾವುದೇ ಒಂದು ವರ್ಗಕ್ಕೆ ಸಿಮೀತ ಎನ್ನದೆ ಎಲ್ಲ ವರ್ಗದ ಜನರಗೆ ಹಲವಾರು ರೀತಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ ಕೀರ್ತಿ ಸಿಎಂ ಅವರಿಗೆ ಸಲ್ಲುತ್ತದೆ ಎಂದರು.

ಕರ್ನಾಟಕ ಕುರುಬ ಸಮಾಜದ ಅಧ್ಯಕ್ಷ ನೀಲಪ್ಪ ಗುಡದಣ್ಣವರ, ಕನಕದಾಸ ಕಲ್ಯಾಣ ಸಮಿತಿ ಅಧ್ಯಕ್ಷ ಫಕೀರಪ್ಪ ಸವದತ್ತಿ, ಬಾಬು ಹಿರೇಹೊಳಿ, ಸುನೀಲ ಕುಷ್ಟಗಿ, ಬೀರಪ್ಪ ದುಂಡಿ, ಅನೀಲ ಧರಿಯಣ್ಣವರ, ಎಚ್.ಬಿ. ಅಸೂಟಿ, ಎಸ್.ಐ. ಅಂಕಲಿ, ರಾಜು ಕಲಾಲ, ಸಾಬಣ್ಣ ಸವದತ್ತಿ, ಎಸ್.ಬಿ. ದಂಡಿನ, ಚಂದ್ರಶೇಖರ ದಂಡಿನ, ನೀಲಪ್ಪ ಮಾತರಂಗಿ, ದೇವಪ್ಪ ಹಟ್ಟಿ, ಪ್ರೊ. ಪಿ.ಎಸ್. ಅಣ್ಣಗೇರಿ, ಮಂಜು ಮೆಣಸಗಿ, ಬಸವರಾಜ ವಾಸನ, ಉಮೇಶ ಹಿರೇಹೊಳಿ, ಸುನೀಲ ಕಳಸಣ್ಣವರ, ವೆಂಕಣ್ಣ ಹೊನಕೇರಿ, ಪ್ರವೀಣ ಯಾಗವಗಲ್, ಮಲ್ಲಪ್ಪ ಗೋನಾಳ, ಡಿ.ಎಸ್. ಹಣಿಸಿ, ಪ್ರಭು ಭಾವಿಕಟ್ಟಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ