ಕನ್ನಡಪ್ರಭ ವಾರ್ತೆ ಕಲಬುರಗಿ
ಬಡತನ ಬೆನ್ನಿಗಿದ್ದರು ಲೆಕ್ಕಿಸದೆ ಕಾನೂನು ಪದವಿಯನ್ನು ಪಡೆದು ದೀನ ದಲಿತರ, ಬಡವರ ಪರ ಹೋರಾಟವನ್ನು ಮಾಡಿ ರಾಜ್ಯದ ಜನತೆಗೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿ ಬುದ್ಧ, ಬಸವ ಡಾ. ಅಂಬೇಡ್ಕರ್ ತತ್ವಗಳನ್ನು ಮೈಗೂಡಿಸಿಕೊಂಡು, ಕುರುಬಗೊಂಡ ಸಮಾಜದ ಕೀರ್ತಿ ಕಳಸ ಸಿಎಂ ಸಿದ್ದರಾಮಯ್ಯ ನವರು ಎಂದೂ ಪೂಜಾರಿ ಕೊಂಡಾಡಿದ್ದಾರೆ.
ಕೆವಲ ಒಂದೇ ಸಮಾಜಕ್ಕೆ ಸೀಮಿತವಾಗದೆ ಸಮಾಜದ ಸರ್ವಸಮಾಜಕ್ಕೆ ಸಿಮಿವಾಗಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದು ಸಮಾಜದ ಭಾಗ್ಯವೇ ಸರಿ. ಇದೀಗ ವಿರೋದ ಪಕ್ಷದವರು ಇಲ್ಲಸಲ್ಲದ ಅಪಾದನೆ ಹೊರಿಸಿ ಇವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಯತ್ನಲ್ಲಿದ್ದಾರೆ. ಇದು ವ್ಯರ್ಥ ಪ್ರಯತ್ನ. ನಿಷ್ಕಳಂಕ ರಾಜಕಾರಣಿ ಸಿಎಂ ಸಿದ್ದರಾಮಯ್ಯ 4ದಶಕಗಳ ರಾಜಕೀಯ ಜೀವನದಲ್ಲಿ ಯಶಸ್ಸು ಕಂಡವರು. ಇರು ಕುರುಬ ಸಮಾಜದ ಹೆಮ್ಮೆ. ಬೀರಲಿಂಗೇಶ್ವರ ಅವರಿಗೆ ಸದಾಕಾಲ ಒಳಿತು ಮಾಡಲಿ ಎಂದು ಮುಖಂಡರಾದ ಲಕ್ಷ್ಮಣ ಎಸ್ ಪೂಜಾರಿ ಶುಭ ಕೋರಿದ್ದಾರೆ.