ಮೀನುಗಾರರ ಸಂಘಕ್ಕೆ ಸಿದ್ದಶೆಟ್ಟಿ, ಕೃಷ್ಣ ಅವಿರೋಧ ಆಯ್ಕೆ

KannadaprabhaNewsNetwork |  
Published : Jun 10, 2025, 03:12 AM ISTUpdated : Jun 10, 2025, 03:13 AM IST
ಮೀನುಗಾರರ ಸಂಘಕ್ಕೆ ಸಿದ್ದಶೆಟ್ಟಿ, ಕೃಷ್ಣ ಅವಿರೋಧ ಆಯ್ಕೆ | Kannada Prabha

ಸಾರಾಂಶ

ನಮ್ಮ ಸಂಘದ ಸದಸ್ಯರಿಗೆ ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಕೊಡಿಸಿ, ಆರ್ಥಿಕವಾಗಿ ಅಭಿವೃದ್ಧಿ ಪಡಿಸಲು ಶ್ರಮಿಸುತ್ತೇನೆ, ಪಕ್ಷಬೇಧ ಮರೆತು, ಸಂಘದ ಅಭ್ಯೂದಯಕ್ಕೆ ಸ್ಪಂದಿಸುವೆ .

ಕೊಳ್ಳೇಗಾಲ: ತಾಲೂಕಿನ ಮುಳ್ಳೂರು ಗ್ರಾಮದ ಕಾವೇರಿ ಮೀನುಗಾರರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎಸ್.ಸಿದ್ದಶೆಟ್ಟಿ, ಉಪಾಧ್ಯಕ್ಷರಾಗಿ ಎಂ.ಕೃಷ್ಣ ಅವರು ಅವಿರೋಧವಾಗಿ ಆಯ್ಕೆಯಾದರು. ಗ್ರಾಮದ ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಸಿದ್ದಶೆಟ್ಟಿ, ಕೃಷ್ಣ ಮಾತ್ರ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ನಾಗೇಶ್ ಘೋಷಣೆ ಮಾಡಿದರು. ಬಳಿಕ ಅಧ್ಯಕ್ಷ ಎಸ್.ಸಿದ್ದಶೆಟ್ಟಿ ಮಾತನಾಡಿ, ಮೀನುಗಾರರ ಸಹಕಾರ ಸಂಘಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದ ಎಲ್ಲರಿಗೂ ಧನ್ಯವಾದ ತಿಳಿಸಿದರಲ್ಲದೆ, ನಮ್ಮ ಸಂಘದ ಸದಸ್ಯರಿಗೆ ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಕೊಡಿಸಿ, ಆರ್ಥಿಕವಾಗಿ ಅಭಿವೃದ್ಧಿ ಪಡಿಸಲು ಶ್ರಮಿಸುತ್ತೇನೆ, ಪಕ್ಷಬೇಧ ಮರೆತು, ಸಂಘದ ಅಭ್ಯೂದಯಕ್ಕೆ ಸ್ಪಂದಿಸುವೆ ಎಂದರು.

ಅಂಗಡಿ ಸಿದ್ದಶೆಟ್ಟಿ, ಮಹದೇವಶೆಟ್ಟಿ, ಶಂಭುಲಿಂಗಶೆಟ್ಟಿ, ಸಿದ್ದರಾಜನಾಯಕ, ಸಾಕಮ್ಮ, ಬಿ.ಶಿವಮ್ಮ ಇದ್ದರು. ಗ್ರಾಮದ ಯಜಮಾನರು ರಾಜೇಶ್, ಮಾದೇಶ್, ಸೋಮಣ್ಣ, ಶಂಕರ್, ಪಿಎಸಿಸಿಎಸ್ ನಿರ್ದೇಶಕ ಎಂ.ಕೆ.ಪುಟ್ಟಸ್ವಾಮಿ, ಮುಖಂಡ ಕೆ.ಸಿದ್ದಪ್ಪಸ್ವಾಮಿ, ಜೆ.ಮಾದೇಶ್, ಬಸವಣ್ಣ, ವಿ.ಚಂದ್ರಶೇಖರ ಇನ್ನಿತರಿದ್ದರು .

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ