ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಟಿಎಪಿಸಿಎಂಎಸ್ ಆಡಳಿತ ಕಚೇರಿಯಲ್ಲಿ ಸಂಸ್ಥೆ ನಿರ್ದೇಶಕರೂ ಆದ ಮಾಜಿ ಎಂಎಲ್ಸಿ ಸಂದೇಶ್ ನಾಗರಾಜು ಅವರನ್ನು ಅಭಿನಂದಿಸಿ ಮಾತನಾಡಿ, ಸಂದೇಶ್ ನಾಗರಾಜು ಅವರು 60 ವರ್ಷಗಳಿಂದ ಸಿನಿಮಾ, ರಾಜಕೀಯ, ಸಹಕಾರ ಕ್ಷೇತ್ರ ಸೇರಿದಂತೆ ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಟಿಎಪಿಸಿಎಂಎಸ್ ನಿರ್ದೇಶಕರಾಗಿ, ಡಿಸಿಸಿ ಬ್ಯಾಂಕ್ ನಿರ್ದೇಶಕರು ಹಾಗೂ ಅಧ್ಯಕ್ಷರಾಗಿ ಮತ್ತು ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಜನಸೇವೆ ಮಾಡಿದ್ದಾರೆ. ಸಂಸ್ಥೆಗೆ ವೈಯಕ್ತಿಕವಾಗಿ 10 ಲಕ್ಷ ಹಣನೀಡಿದ ಕೊಡುಗೈದಾನಿಗಳಾಗಿದ್ದಾರೆ. 80 ವಸಂತಗಳನ್ನು ಪೂರೈಸಿರುವ ಅವರು ಮುಂದಿನ ದಿನಗಳಲ್ಲಿ ಇವರು ಮತ್ತಷ್ಟು ಉತ್ತುಂಗ ಸ್ಥಿತಿಗೆ ಏರಲಿ ಎಂದು ಹಾರೈಸಿದರು.ಅಭಿನಂದನೆ ಸ್ವೀಕರಿಸಿದ ಸಂದೇಶ್ ನಾಗರಾಜ್ ಮಾತನಾಡಿ, ನಾನು ಸಾಕಷ್ಟು ಸನ್ಮಾನ, ಅಭಿನಂದನೆಗಳನ್ನು ಸ್ವೀಕರಿಸಿದ್ದೇನೆ. ಆದರೆ, ನನ್ನ ಹುಟ್ಟೂರು, ಸ್ವಂತ ತಾಲೂಕಿನಲ್ಲಿ ಸ್ವೀಕರಿಸಿದ ಸನ್ಮಾನ ನನಗೆ ಸಾಕಷ್ಟು ತೃಪ್ತಿ ಹಾಗೂ ಖುಷಿತಂದುಕೊಟ್ಟಿದೆ ಎಂದರು.
ಈ ವೇಳೆ ಟಿಎಪಿಸಿಎಂಎಸ್ ಸಂಸ್ಥೆಯ ಉಪಾಧ್ಯಕ್ಷೆ ತಿಬ್ಬಮ್ಮ(ಪದ್ಮಮ್ಮ), ಡಿಸಿಸಿ ಬ್ಯಾಂಕ್ ನಿರ್ದೇಶಕ ಗುರುಸ್ವಾಮಿ, ನಿರ್ದೇಶಕರಾದ ರಾಮಕೃಷ್ಣೇಗೌಡ, ಕೆ.ಎಸ್.ದಯಾನಂದ್, ಶ್ರೀಕಾಂತ್, ಬೆಟ್ಟಸ್ವಾಮೀಗೌಡ, ಕಣಿವೆಯೋಗೇಶ್, ಪುಷ್ಪಾವತಿ, ಚಿಟ್ಟಿಬಾಬು, ಜಯಶೀಲ, ಮಾಲತಿ, ಕಾರ್ಯದರ್ಶಿ ನವೀನ್ ಕುಮಾರ್, ಅರಳಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಸೀತಾಪುರ ವಿಶ್ವನಾಥ್, ನೌಕರರ ವರ್ಗ, ಸಿಬ್ಬಂದಿಗಳು ಹಾಜರಿದ್ದರು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪುರ್ವ ಕಾಲೇಜಿನಲ್ಲಿ ಶನಿವಾರ ನಿವೃತ್ತಿಗೊಂಡ ಗಣಿತ ಪ್ರಾಧ್ಯಾಪಕ ಬಿ.ಸಿ.ದೇವರಾಜು ಅವರ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಿ.ಸಿ.ದೇವರಾಜು ಪ್ರಾಧ್ಯಾಪಕರ ಹುದ್ದೆ ಜೊತೆಗೆ ಕಚೇರಿಯಲ್ಲಿ ಖಾಲಿ ಇದ್ದ ಹುದ್ದೆ ಜವಾಬ್ದಾರಿಯನ್ನು ಯಶಸ್ವಿಗೆ ನಿರ್ವಹಿಸಿ ಇತರಿಗೆ ಮಾದರಿಯಾಗಿದ್ದರು. ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದರು.