ದೇಶದ ಆರ್ಥಿಕ ಪ್ರಗತಿಯಲ್ಲಿ ಸರ್‌ ಎಂ. ವಿಶ್ವೇಶ್ವರಯ್ಯ ಕೊಡುಗೆ ಅಪಾರ: ಯದುನಂದನ್ ಅಭಿಪ್ರಾಯ

KannadaprabhaNewsNetwork |  
Published : Sep 17, 2025, 01:05 AM IST
39 | Kannada Prabha

ಸಾರಾಂಶ

ವಿಶ್ವೇಶ್ವರಯ್ಯನವರ ಏಳಿಗೆಗೆ ಅವರ ಪ್ರಾಮಾಣಿಕತೆ ಮತ್ತು ಶಿಸ್ತು ಬದ್ಧ ಜೀವನವೇ ಕಾರಣ. ಇಂದಿನ ಯುವಪೀಳಿಗೆ ಸರ್‌ ಎಂ.ವಿ. ಅವರ ಆದರ್ಶ ಪಾಲಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ದೇಶದ ಆರ್ಥಿಕ ಪ್ರಗತಿಯಲ್ಲಿ ಸರ್‌ ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರ ಎಂದು ಯಶಸ್‌ ಕನ್ಸಲ್ಟ್ಟೆಂಟ್‌ ಮುಖ್ಯಸ್ಥ ಸಿ.ಎನ್‌. ಯದುನಂದನ್‌ ಹೇಳಿದರು.

ಮೈಸೂರು ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ನಲ್ಲಿ ಏರ್ಪಡಿಸಿದ್ದ ಎಂಜಿನಿಯರುಗಳ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು ಮಾತನಾಡಿ, ತಾಂತ್ರಿಕ ಕ್ಷೇತ್ರಕ್ಕೆ ಸರ್‌ ಎಂ.ವಿ. ಅವರು ಅಪಾರವಾದ ಕೊಡುಗೆ ನೀಡಿದರು. ಆ ಮೂಲಕ ಹಲವಾರು ಬದಲಾವಣೆ ಮತ್ತು ಬೆಳವಣಿಗೆಗೆ ಕಾರಣರಾದರು ಎಂದರು.

ಮೈಸೆಮ್‌ ಕಾಲೇಜಿನ ಕಾರ್ಯದರ್ಶಿ ಎಂ. ಮಂಜುನಾಥ್‌ ಮಾತನಾಡಿ, ವಿಶ್ವೇಶ್ವರಯ್ಯನವರ ಏಳಿಗೆಗೆ ಅವರ ಪ್ರಾಮಾಣಿಕತೆ ಮತ್ತು ಶಿಸ್ತು ಬದ್ಧ ಜೀವನವೇ ಕಾರಣ. ಇಂದಿನ ಯುವಪೀಳಿಗೆ ಸರ್‌ ಎಂ.ವಿ. ಅವರ ಆದರ್ಶ ಪಾಲಿಸಬೇಕು ಎಂದರು.

ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಜಿಲ್ಲಾ ಪರಿಷತ್‌ ಮಾಜಿ ಅಧ್ಯಕ್ಷ ಕೆ.ಎನ್‌. ಪುಟ್ಟಬುದ್ದಿ, ಪ್ರಾಂಶುಪಾಲ ಡಾ.ಟಿ.ಎಸ್. ಮಂಜುನಾಥ್‌, ಎಲ್ಲಾ ಬೋಧಕರು, ಬೋಧಕೇತರರು ಇದ್ದರು.. ಎಂ. ವಿಜಯಶ್ರೀ ಸ್ವಾಗತಿಸಿದರು. ಎಂ. ಜಸ್ವಂತ್‌ ಅತಿಥಿಗಳನ್ನು ಪರಿಚಯಿಸಿದರು. ರಕ್ಷಿತಾ ವಂದಿಸಿದರು. ಡಿ.ಎಸ್‌. ಯೋಗೀಸ್‌, ಪಿ. ಅಶ್ವಿನಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಬೀದಿ ನಾಯಿಗಳು ಶೀಘ್ರ ಶೆಲ್ಟರ್‌ಗೆ : ರಾವ್‌
ಸಿದ್ದು ಅಹಿಂದ ಲೀಡರ್‌ ಆಗಿದ್ದರೆ ಪುತ್ರ ಕ್ಷೇತ್ರ ಆಯ್ಕೆ ಏಕೆ?: ಗೌಡ