ಸಿರಿ ಸಂಪಿಗೆ ಕೃತಿ, ಧ್ವನಿಸುರುಳಿ ಬಿಡುಗಡೆ ನಾಳೆ: ಆರ್.ಓಬಳೇಶ್‌

KannadaprabhaNewsNetwork |  
Published : Mar 22, 2025, 02:01 AM IST
  21 ಜೆ.ಜಿ.ಎಲ್.1) ಜಗಳೂರು ಪಟ್ಟಣದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರುವಾರ ಭದ್ರಾಮೇಲ್ದಂಡೆ ನೀರಾವರಿ ಹೋರಾಟಗಾರರು, ವಕೀಲರಾದ ಆರ್. ಓಬಳೇಶ್ , ಪತ್ರಕರ್ತ ಸಾಹಿತಿ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ, ಕೃತಿಕಾರ ಪಿ.ಎಚ್. ಬಸವರಾಜ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. | Kannada Prabha

ಸಾರಾಂಶ

ಪಟ್ಟಣದಲ್ಲಿ ಮಾ.23ರಂದು ಚಿಕ್ಕ ಅರೆಕೆರೆ ಬಸವರಾಜ್ ರಚಿಸಿರುವ ಸಿರಿ ಸಂಪಿಗೆ ಕೃತಿ ಬಿಡುಗಡೆ ಮತ್ತು ಧ್ವನಿಸುರುಳಿ ವಿವಿಧ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ಅವರು ಉದ್ಘಾಟನೆ ಮಾಡಿಲಿದ್ದಾರೆ ಎಂದು ಭದ್ರಾ ಮೇಲ್ದಂಡೆ ನೀರಾವರಿ ಹೋರಾಟಗಾರ, ವಕೀಲ ಆರ್.ಓಬಳೇಶ್ ಹೇಳಿದ್ದಾರೆ.

- ಕಾದಂಬರಿಕಾರ ಡಾ. ಬಿ.ಎಲ್. ವೇಣು ಮತ್ತಿತರ ಗಣ್ಯರು ಭಾಗಿ

- - - ಕನ್ನಡಪ್ರಭ ವಾರ್ತೆ ಜಗಳೂರು

ಪಟ್ಟಣದಲ್ಲಿ ಮಾ.23ರಂದು ಚಿಕ್ಕ ಅರೆಕೆರೆ ಬಸವರಾಜ್ ರಚಿಸಿರುವ ಸಿರಿ ಸಂಪಿಗೆ ಕೃತಿ ಬಿಡುಗಡೆ ಮತ್ತು ಧ್ವನಿಸುರುಳಿ ವಿವಿಧ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ಅವರು ಉದ್ಘಾಟನೆ ಮಾಡಿಲಿದ್ದಾರೆ ಎಂದು ಭದ್ರಾ ಮೇಲ್ದಂಡೆ ನೀರಾವರಿ ಹೋರಾಟಗಾರ, ವಕೀಲ ಆರ್.ಓಬಳೇಶ್ ಹೇಳಿದರು.

ಪಟ್ಟಣದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕು ಪಂಚಾಯಿತಿ ಆವರಣದ ಸಭಾಂಗಣದಲ್ಲಿ ಬೆಳಗ್ಗೆ 10.30 ಗಂಟೆಗೆ ಶುಕ್ರದೆಸೆ ನ್ಯೂಸ್ ಮೀಡಿಯಾ ಹಾಗೂ ಜನಶಕ್ತಿ ಸಾಂಸ್ಕೃತಿಕ ಕಲಾ ವೇದಿಕೆ ಹಾಗೂ ಬಯಲು ಸಿರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಕೃತಿ ಹಾಗೂ ದ್ವನಿಸುರುಳಿ ಬಿಡುಗಡೆಯಾಗಲಿದೆ ಎಂದರು.

ಪತ್ರಕರ್ತ, ಸಾಹಿತಿ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಕವಿಗಳಿಂದ ಮಹಿಳಾ ಸಾಧಕರ ಕುರಿತು ಕೇವಲ 21 ನಿಮಿಷಗಳಲ್ಲಿ ದಾಖಲೆ ಬರಹ ಮತ್ತು ವಿವಿಧ ಸಾಧಕರಿಗೆ ಸನ್ಮಾನ, ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಅನಂತರ ಖ್ಯಾತ ಚಲನಚಿತ್ರ ಸಂಭಾಷಣೆಕಾರ, ಹಿರಿಯ ಸಾಹಿತಿ, ಖ್ಯಾತ ಕಾದಂಬರಿಕಾರ ಡಾ. ಬಿ.ಎಲ್. ವೇಣು ಅವರಿಂದ ಕೃತಿ ಬಿಡುಗಡೆ ಮತ್ತು ಧ್ವನಿಸುರುಳಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ಕೃತಿಕಾರ ಪಿ.ಎಚ್. ಬಸವರಾಜ ಮಾತನಾಡಿ, ರಾಜ್ಯಮಟ್ಟದ ಕವಿಗಳು ಮಹಿಳಾ ಸಾಧಕರ ಕುರಿತು ಸ್ಥಳದಲ್ಲಿಯೇ 21 ನಿಮಿಷಗಳಲ್ಲಿ ದಾಖಲೆ ಬರಹ ಸಾಧಕರ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರಪ್ಪ, ಎಚ್.ಪಿ. ರಾಜೇಶ್, ಮಾಜಿ ಜಿಪಂ ಸದಸ್ಯ ಕೆ.ಪಿ. ಪಾಲಯ್ಯ. ರಾಜ್ಯ ಎಸ್.ಟಿ. ಘಟಕದ ಪ್ರಧಾನ ಕಾರ್ಯಧರ್ಶಿ ಕೀರ್ತಿಕುಮಾರ್, ಹಿರಿಯ ಸಾಹಿತಿ ಎನ್.ಟಿ. ಎರ್ರಿಸ್ವಾಮಿ, ಕಾಂಗ್ರೆಸ್ ಎಸ್‌ಸಿ ಘಟಕ ಅಧ್ಯಕ್ಷ ಬಿ.ಮಹೇಶ್ವರಪ್ಪ, ಜಿಲ್ಲಾ ಜಾಗೃತಿ ಸಮಿತಿ ಮತ್ತು ಜ್ಞಾನತರಂಗಿಣಿ ವಿದ್ಯಾಸಂಸ್ಥೆ ಸಂಸ್ಥಾಪಕ ಪಿ.ಎಸ್. ಅರವಿಂದನ್, ಕ.ಸಾ.ಪ. ಅಧ್ಯಕ್ಷೆ ಸುಜಾತಮ್ಮ ರಾಜು. ದಲಿತ ಮುಖಂಡ ಜಿ.ಎಚ್. ಶಂಭುಲಿಂಗಪ್ಪ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಈ ಸಂದರ್ಭ ಪ್ರಗತಿಪರ ಮುಖಂಡ ಆರ್.ಸತ್ಯಮೂರ್ತಿ ಗೌರಿಪುರ ಮತ್ತಿತರ ಮುಖಂಡರು ಹಾಜರಿದ್ದರು.

- - -

-21ಜೆ.ಜಿ.ಎಲ್.1:

ಜಗಳೂರು ಪಟ್ಟಣದಲ್ಲಿ ವಕೀಲ ಆರ್. ಓಬಳೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ, ಪಿ.ಎಚ್. ಬಸವರಾಜ ಇತರರು ಇದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ