ಶಿವಾನಂದ ಸ್ವಾಮೀಜಿ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ-ಶ್ರೀಗಳು

KannadaprabhaNewsNetwork |  
Published : May 24, 2025, 12:01 AM IST
(23ಎನ್.ಆರ್.ಡಿ1 ಗ್ರಂಥ ಮತ್ತು ಜ್ಯೋತಿಯಾತ್ರೆಯನ್ನು ಸದಾಶಿವಾನಂದ ಶ್ರೀಗಳು ಬರಮಾಡಿಕೊಳ್ಳುತ್ತಿದ್ದಾರೆ.)   | Kannada Prabha

ಸಾರಾಂಶ

ನಮ್ಮ ಶಿವಾನಂದ ಶ್ರೀಗಳು ಭಕ್ತರ ಸಮೂಹ ಕಟ್ಟಿಕೊಂಡು ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆಂದು ಗದುಗಿನ ಶಿವಾನಂದ ಮಠದ ಸದಾ ಶಿವಾನಂದ ಶ್ರೀಗಳು ಹೇಳಿದರು.

ನರಗುಂದ: ನಮ್ಮ ಶಿವಾನಂದ ಶ್ರೀಗಳು ಭಕ್ತರ ಸಮೂಹ ಕಟ್ಟಿಕೊಂಡು ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆಂದು ಗದುಗಿನ ಶಿವಾನಂದ ಮಠದ ಸದಾ ಶಿವಾನಂದ ಶ್ರೀಗಳು ಹೇಳಿದರು.

ಅವರು ಶುಕ್ರವಾರ ತಾಲೂಕಿನ ಸಂಕದಾಳ ಗ್ರಾಮದ ಶಿವಾನಂದ ಶ್ರೀಗಳ ಮಠದ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮಲೀನ ಚನ್ನಬಸಯ್ಯ ಶ್ರೀಗಳ 73ನೇ ವಾರ್ಷಿಕ ಪುಣ್ಯಾರಾಧನೆ ಹಾಗೂ ಗ್ರಂಥ ಮೆರವಣಿಗೆ ಮತ್ತು ಜ್ಯೋತಿಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ನಾಡಿನಲ್ಲಿ ಹಲವಾರು ಶರಣರಲ್ಲಿ ನಮ್ಮ ಶಿವಾನಂದ ಶ್ರೀಗಳ ಒಬ್ಬರು. ಅಂದಿನ ದಿನಗಳಲ್ಲಿ ಈ ಸಂಕದಾಳ ಗ್ರಾಮದ ಚಿಕ್ಕ ಮಠದಲ್ಲಿ ಶ್ರೀಮಠದ ಭಕ್ತರೆ ಆಸ್ತಿಯೆಂದು ತಿಳಿದು ಪ್ರತಿ ವರ್ಷ ಭಕ್ತರನ್ನು ಸೇರಿಸಿಕೊಂಡು ಹಲವಾರು ರೀತಿ ಧಾರ್ಮಿಕ, ಆಧ್ಯಾತ್ಮಕ ಪ್ರವಚನ ಕಾರ್ಯಕ್ರಮಗಳನ್ನು ಮಾಡಿ ಈ ಭಾಗದ ಭಕ್ತರನ್ನು ಉದ್ದಾರ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಈ ಆಧುನಿಕ ಯುಗದಲ್ಲಿ ಮನುಷ್ಯ ಬದುಕಿಗಾಗಿ ಹಲವಾರು ರೀತಿಯ ಒತ್ತಡದಿಂದ ಬಳಲುತ್ತಿದ್ದಾನೆ. ಹಾಗಾಗಿ ನಾವು ಈ ಒತ್ತಡದಿಂದ ಹೊರ ಬರಬೇಕೆಂದರೆ ಪ್ರತಿ ದಿವಸ ನಾವು ಶಿವಾನಂದ ಶ್ರೀಗಳ ಜಪ, ತಪ ಮಾಡಿದರೆ ಮಾತ್ರ ಒತ್ತಡ ಜೀವನದಿಂದ ಹೊರಬರಲು ಸಾಧ್ಯವಾಗುತ್ತದೆ ಭಕ್ತರು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ನಿಮಿತ್ತ ಶುಕ್ರವಾರ ಚನ್ನಬಸವ ಮಹಾಸ್ವಾಮಿಗಳ ಜನ್ಮಭೂಮಿಯಾದ ರೋಣ ತಾಲೂಕಿನ ಸುಕ್ಷೇತ್ರ ಯಾ.ಸ.ಹಡಗಲಿ ಗ್ರಾಮದಿಂದ ಗ್ರಂಥ ಮತ್ತು ಜ್ಯೋತಿಯಾತ್ರೆವು ಜಗದ್ಗುರು ಸದಾಶಿವಾನಂದ ಶ್ರೀಗಳ ನೇತೃತ್ವದಲ್ಲಿ ಸುರಕೋಡ, ನರಗುಂದ, ಚಿಕ್ಕನರಗುಂದ ಬೆನಕನಕೊಪ್ಪ, ಗ್ರಾಮಗಳ ಮುಖಾಂತರ ಸಂಕದಾಳ ಗ್ರಾಮಕ್ಕೆ ಆಗಮಿಸಿದ ಗ್ರಂಥ ಮೆರವಣಿಗೆ ಮತ್ತು ಜ್ಯೋತಿಯಾತ್ರೆಯನ್ನು ಶ್ರೀಗಳು ಮತ್ತು ಭಕ್ತರು ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಹಡಗಲಿ ಶಿವಾನಂದ ಮಠದ ಚಿದಾನಂದ ಶ್ರೀಗಳು, ವಿಜಯಕುಮಾರ ತೋಂಟದ, ಮಹೇಶ್ವರಯ್ಯ ಸುರೇಬಾನ, ಎಸ್. ಸಣ್ಣಕಲ್ಲು, ಶಿವನಗೌಡ ರಾಯನಗೌಡ್ರ, ರಾಯನಗೌಡ ಚನ್ನವೀರಗೌಡ್ರ, ರಮೇಶ ಕರಕನಗೌಡ್ರ, ಶಿವಪ್ಪ ಬೋಳಶೆಟ್ಟಿ, ಮಂಜು ಮೆಣಸಗಿ, ಗೋವಿಂದರಾಜ ಗುಡಿಸಾಗರ, ಚಿನು ರಾಯರಡ್ಡಿ, ಡಾ. ಸುರೇಶ ಭೂಮಣ್ಣವರ, ಸಂಗನಗೌಡ ಹಾಲಗೌಡ್ರ, ಎಂ.ಆರ್. ಕೊಣ್ಣೂರ, ಬಸನಗೌಡ ಪಾಟೀಲ, ಗಂಗಾಧರಯ್ಯ ಸುರೇಬಾನಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ