ಹುಬ್ಬಳ್ಳಿ:
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ತೋಳನಕೆರೆ, ಗ್ಲಾಸ್ಹೌಸ್, ನೆಹರು ಸ್ಟೆಡಿಯಂ ಸೇರಿದಂತೆ 8 ಯೋಜನೆ ಕಾಮಗಾರಿಯ ಬಹಳಷ್ಟು ವಿಷಯಗಳಲ್ಲಿ ತೃಪ್ತಿಕರವಾಗಿಲ್ಲ. ಅತೃಪ್ತಿಗೆ ಕಾರಣಗಳ ಸಹಿತ ಸ್ಮಾರ್ಟ್ಸಿಟಿಗೆ ಪತ್ರ ಬರೆಯಲಾಗಿದೆ ಎಂದರು.
ವೀರಣ್ಣ ಸವಡಿ ಕೂಡ ಸ್ಮಾರ್ಟ್ಸಿಟಿ ಕಾಮಗಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅವೈಜ್ಞಾನಿಕ ಕಾಮಗಾರಿಗಳು, ಕಳಪೆ, ನಿರ್ವಹಣೆ ಸಂಬಂಧಿಸಿದಂತೆ ಹಿಂದಿನ ಮೇಯರ್ ಆಕ್ಷೇಪ ವ್ಯಕ್ತಪಡಿಸಿ ಲೋಕಾಯುಕ್ತಕ್ಕೂ ಪತ್ರ ಬರೆದಿದ್ದರು. ಆದರೆ, ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರು.ಫಿಶ್ ಮಾರ್ಕೇಟ್ ಮತ್ತು 1547 ವಾಣಿಜ್ಯ ಮಳಿಗೆಗಳು ಹರಾಜು ಮಾಡಲಾಗುತ್ತದೆ. ಇದಲ್ಲದೇ 2700 ಲೀಸ್ ಪಾಪರ್ಟಿ ಹರಾಜು ಇಲ್ಲವೇ ಮಾರಾಟ ಮಾಡುವ ಕುರಿತು ಉಸ್ತುವಾರಿ ಸಚಿವರು ಕೆಡಿಪಿ ಸಭೆಯಲ್ಲಿ ತೀರ್ಮಾನಿಸುವುದಾಗಿ ತಿಳಿಸಿದ್ದಾರೆ. ಇದರಿಂದ ₹ 500 ಕೋಟಿ ಪಾಲಿಕೆಗೆ ಆದಾಯ ಹರಿದು ಬರುವ ನಿರೀಕ್ಷೆ ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿರುವ ರೈಲ್ವೆ ಆಸ್ತಿಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಏರ್ಪೋರ್ಟ್ ಸೇರಿದಂತೆ ಹಲವು ಸಂಸ್ಥೆಗಳ ಆಸ್ತಿ ಸರ್ವೇ ಆರಂಭಿಸಲಾಗಿದೆ. ಈಗಾಗಲೇ ನೈಋತ್ಯ ರೈಲ್ವೆ ಹಾಗೂ ಪಾಲಿಕೆ ಅಧಿಕಾರಿಗಳ ಜಂಟಿ ಸಮೀಕ್ಷೆ ಮುಂದುವರಿದಿದೆ. ಇದರಂತೆ ಶಿಕ್ಷಣ ಸಂಸ್ಥೆಗಳು ಮತ್ತು ಏರಪೋರ್ಟ್ನಿಂದ ತೆರಿಗೆ ಬಾಕಿ ಇದ್ದು, ಸರ್ವೇ ಮಾಡಿ ತೆರಿಗೆ ವಸೂಲು ಮಾಡಲಾಗುವುದು ಎಂದು ಹೇಳಿದರು.
ಹಿರಿಯ ಸದಸ್ಯ ವೀರಣ್ಣ ಸವಡಿ ಮಾತನಾಡಿ, ಬಹುವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಎಲ್ಇಡಿ ಪ್ರಾಜೆಕ್ಟ್ ಅನುಷಾನಕ್ಕೆ ಕಾಲ ಕೂಡಿ ಬಂದಿದ್ದು, ಟೆಂಡರ್ ಓಪನ್ ಆಗಲಿದೆ. ಅದೇ ರೀತಿ ಪಾಲಿಕೆ ವ್ಯಾಪ್ತಿಯ ಆಸ್ತಿಗಳ ಭೌಗೋಳಿಕ ಸರ್ವೇ ಕೂಡಿ ಟೆಂಡರ್ ಹಂತದಲ್ಲಿದ್ದ ಕೆಲವೇ ದಿನಗಳಲ್ಲಿ ಅಂತಿಮಗೊಳ್ಳಲಿದೆ. ಸಭಾಭವನ ನಿರ್ಮಾಣಕ್ಕೆ ಸರ್ಕಾರ ವಿಶೇಷ ಅನುದಾನ ಕೊಡದಿದ್ದರೆ ಪಾಲಿಕೆಯಿಂದಲೇ ಹಂತ-ಹಂತವಾಗಿ ನಿರ್ಮಿಸಲಾಗುವುದು ಎಂದರು.ಧಾರವಾಡ ಪ್ರತ್ಯೇಕ ಪಾಲಿಕೆ ರಚನೆಗೆ ಸರ್ಕಾರ ಒಪ್ಪಿಗೆ ನೀಡಿದ್ದರಿಂದ ಹು-ಧಾ ಪಾಲಿಕೆ ಗಡಿ ವಿಸ್ತರಣೆ ಕಾರ್ಯವನ್ನು ತಡೆ ಹಿಡಿಯಲಾಗಿದೆ. ಹುಬ್ಬಳ್ಳಿ ಪಾಲಿಕೆಗೆ ಸಂಬಂಧಿಸಿ ಗಡಿ ಗುರುತು ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.