ಚಾತುಮಾಸ್ಯದಿಂದ ಸಮಾಜ ಪ್ರಗತಿ: ಬ್ರಹ್ಮಾನಂದ ಸರಸ್ವತಿ ಶ್ರೀ

KannadaprabhaNewsNetwork |  
Published : Jul 06, 2025, 11:48 PM IST
ಫೋಟೋ: ೬ಕೆಎಂಟಿ_ಜೆಯುಎಲ್_ಕೆಪಿ೧ : ಕೋನಳ್ಳಿಯಲ್ಲಿ ನೂತನ ನಿರ್ಮಿತ ಗುರುಭವನವನ್ನು ಬ್ರಹ್ಮಾನಂದ ಸರಸ್ವತಿ ಶ್ರೀಗಳು ಉದ್ಘಾಟಿಸಿದರು. ಮಂಜುನಾಥ ನಾಯ್ಕ ಕೋಡ್ಕಣಿ, ಚಾತುರ್ಮಾಸ್ಯ ಸಮನ್ವಯ ಸಮಿತಿ ಅಧ್ಯಕ್ಷ ಎಚ್.ಆರ್.ನಾಯ್ಕ, ಸೂರಜ ನಾಯ್ಕ, ಮಂಜುನಾಥ ಎಲ್. ನಾಯ್ಕ, ಸುನೀಲ ನಾಯ್ಕ, ಕೃಷ್ಣ ನಾಯ್ಕ, ಅರುಣ ನಾಯ್ಕ, ರಾಮಯ್ಯ ನಾಯ್ಕ, ಬಾಲಕೃಷ್ಣ ನಾಯ್ಕ, ಪ್ರೊ.ಪ್ರಮೋದ ನಾಯ್ಕ ಇತರರು ಇದ್ದರು.  | Kannada Prabha

ಸಾರಾಂಶ

ಕುಮಟಾ ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ಸಭಾಭವನದ ಬಳಿ ನೂತನ ನಿರ್ಮಿತ ಗುರುಭವನ ಹಾಗೂ ಸಭಾಕಾರ್ಯಕ್ರಮವನ್ನು ಶನಿವಾರ ಕನ್ಯಾಡಿ ಶ್ರೀ ರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಶ್ರೀಗಳು ಉದ್ಘಾಟಿಸಿದರು.

ಕುಮಟಾ: ಚಾತುರ್ಮಾಸ್ಯ ಕಾಲದಲ್ಲಿ ಭಕ್ತಿ, ಗುರುಸೇವೆ, ಸತ್ಸಂಗದಲ್ಲಿ ಒಗ್ಗಟ್ಟಿನಿಂದ ದುಡಿಯುವುದರಿಂದ ಸ್ವಯಂ ಶಕ್ತಿಯ ಪರಿಚಯವಾಗುತ್ತದೆ. ಧರ್ಮ-ಕರ್ಮಗಳ ಮಹತ್ವ ಅರಿವಾಗುತ್ತದೆ. ಸಮಾಜದ ಪ್ರಗತಿಯೂ ಆಗುತ್ತದೆ ಎಂದು ಕನ್ಯಾಡಿ ಶ್ರೀ ರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಶ್ರೀಗಳು ನುಡಿದರು.

ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ಸಭಾಭವನದ ಬಳಿ ನೂತನ ನಿರ್ಮಿತ ಗುರುಭವನ ಹಾಗೂ ಸಭಾಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಭಕ್ತಿ ಮಾರ್ಗವು ದೈವ ಸಾಕ್ಷಾತ್ಕಾರಕ್ಕೆ ಸಹಕಾರಿ, ಚಾತುರ್ಮಾಸ್ಯದ ಸ್ಥಳವು ಪುಣ್ಯಸಂಚಯಿತವಾಗಿ ಸಮೃದ್ಧಿ ಗಳಿಸುತ್ತದೆ. ಜು. ೧೦ರಿಂದ ಆ. ೨೦ರ ವರೆಗೆ ಸಂಕಲ್ಪಿಸಿರುವ ಚಾತುರ್ಮಾಸ್ಯದ ಸ್ಥಳದಲ್ಲಿ ದೇವತೆಗಳ ಸಂಚಾರ, ಸಾನ್ನಿಧ್ಯ ಪ್ರಾಪ್ತವಾಗುತ್ತದೆ. ಎಲ್ಲ ಭಕ್ತರು ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು.

ಕೋನಳ್ಳಿಯ ವನದುರ್ಗಾ ಮಂದಿರದ ಪರಿಸರದಲ್ಲಿ ನಡೆಯಲಿರುವ ಬ್ರಹ್ಮಾನಂದ ಸರಸ್ವತಿ ಶ್ರೀಗಳ ಚಾತುರ್ಮಾಸ ವ್ರತಾಚರಣೆಗಾಗಿ ಶ್ರೀಗಳ ವಾಸ್ತವ್ಯ ಇನ್ನಿತರ ಬಳಕೆಗಾಗಿ ನಿರ್ಮಿಸಿದ ಗುರುಭವನದಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ವೈದಿಕರು ನಡೆಸಿಕೊಟ್ಟರು.

ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಕೋಡ್ಕಣಿ, ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಚಾತುರ್ಮಾಸ್ಯ ಸಮನ್ವಯ ಸಮಿತಿ ಅಧ್ಯಕ್ಷ ಎಚ್.ಆರ್. ನಾಯ್ಕ, ಪ್ರಮುಖರಾದ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸೂರಜ ನಾಯ್ಕ, ಮಂಜುನಾಥ ಎಲ್. ನಾಯ್ಕ, ಸುನೀಲ ನಾಯ್ಕ ಕಾರವಾರ, ಭಟ್ಕಳದ ಕೃಷ್ಣ ನಾಯ್ಕ, ಅರುಣ ನಾಯ್ಕ, ಕೋನಳ್ಳಿಯ ರಾಮಯ್ಯ ನಾಯ್ಕ, ರಾಮಪ್ಪ ನಾಯ್ಕ ಹೊನ್ನಾವರ, ಬಾಲಕೃಷ್ಣ ನಾಯ್ಕ, ವೈಭವ ನಾಯ್ಕ, ಪ್ರೊ. ಪ್ರಮೋದ ನಾಯ್ಕ ಇತರರು ಇದ್ದರು.

ಶಂಕರ ಅಡಿಗುಂಡಿ ಸ್ವಾಗತಿಸಿದರು. ವಿಶ್ವನಾಥ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಗೋವಿಂದ ನಾಯ್ಕ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌