ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮೇಲುಕೋಟೆಯಲ್ಲಿ ವಿಜಯ ಪ್ರಥಮ ದರ್ಜೆ ಕಾಲೇಜು ಒಂದು ವಾರಗಳಕಾಲ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾಯೋಜನೆ ವಾರ್ಷಿಕ ವಿಶೇಷ ಶಿಬಿರಿದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಪ್ರತಿಫಲಾಪೇಕ್ಷೆ ಹಾಗೂ ಬೇಧಭಾವವಿಲ್ಲದೆ ಸಮಾಜಸೇವೆ ಮಾಡಲು ಎನ್ಎಸ್ಎಸ್ ಶಿಬಿರದ ಮೂಲಕ ಕಲಿಯಬಹುದು ಎಂದರು.
ಮೇಲುಕೋಟೆ ರಾಮಾನುಜಾಚಾರ್ಯರ ಕರ್ಮಭೂಮಿಯಾಗಿದ್ದು, ಇಲ್ಲಿನ ಸ್ಮಾರಕಗಳು ಮತ್ತು ಕೊಳಗಳು ದೇವಾಲಯಗಳ ಸುತ್ತಮುತ್ತ ಸ್ವಚ್ಚಗೊಳಿಸಿ ಪರಿಸರ ಜಾಗೃತಿ ಮೂಡಿಸುವ ಕಾರ್ಯವನ್ನು ವಿದ್ಯಾಪ್ರಚಾರ ಸಂಘದ ರಾಷ್ಟ್ರೀಯ ಸೇವಾಯೋಜನೆಯ ಘಟಕ ಪ್ರತಿವರ್ಷ ಮಾಡಿಕೊಂಡು ಬಂದಿದೆ. ನಿಸ್ವಾರ್ಥ ಮನೋಭಾವದಿಂದ ಮಾಡುವ ಸೇವಾ ಕಾರ್ಯ ಯಶಸ್ವಿಯಾಗುತ್ತದೆ. ಇತರರಿಗೂ ದಾರಿದೀಪವಾಗುತ್ತದೆ ಎಂದರು.ಪಾಂಡವಪುರದಲ್ಲಿ ವಿದ್ಯಾಪ್ರಚಾರ ಸಂಘ ಸ್ಥಾಪಿಸಿದ ಶಾಲಾ ಕಾಲೇಜಿನಲ್ಲಿ ಲಕ್ಷಾಂತರ ಮಂದಿ ವ್ಯಾಸಂಗ ಮಾಡಿದ್ದಾರೆ. ಗ್ರಾಮೀಣ ಪ್ರದೇಶದ ಬಡಮಕ್ಕಳ ಶಿಕ್ಷಣಕ್ಕೆ ಆಶಾದೀಪವಾಗಬೇಕೆಂಬ ಹಂಬಲದಿಂದ ಆರಂಭವಾದ ಸಂಸ್ಥೆ 75 ವಸಂತಗಳನ್ನು ಪೂರೈಸಿ ಸೇವೆ ಮಾಡುತ್ತಾ ಬಂದಿದೆ ಎಂದರು.
ರಾಷ್ಟ್ರೀಯ ಸೇವಾಯೋಜನೆಯ ಶಿಬಿರದ ವೇಳೆ ಸ್ಮಾರಕಗಳು, ಕಲ್ಯಾಣಿ ಸುತ್ತಮುತ್ತ, ಪ್ರಮುಖವಾಗಿ ಅನ್ನದಾನಭವನದ ಸುತ್ತಮುತ್ತ ಹಾಗೂ ಶತಮಾನದ ಶಾಲೆ ಆವರಣವನ್ನು ಸ್ವಚ್ಛಮಾಡಲು ಯೋಜಿಸಿದ್ದೇವೆ ಎಂದರು.
ಈ ವೇಳೆ ಎನ್ ಎಸ್ ಎಸ್ ಶಿಬಿರವನ್ನು ಮೇಲುಕೋಟೆ ದೇಗುಲದ ಇಒ ಮಹೇಶ್ ಉದ್ಘಾಟಿಸಿದರು. ವಿಜಯ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಉಮೇಶ್, ಉಪಪ್ರಾಂಶುಪಾಲ ರಮೇಶ್, ಖಜಾಂಚಿ ರಾಮೇಗೌಡ, ಮೇಲುಕೋಟೆ ಬಾಲಕರ ಶಾಲೆ ಮುಖ್ಯಶಿಕ್ಷಕ ಸಂತಾನರಾಮನ್ ನಿವೃತ್ತ ಮುಖ್ಯಶಿಕ್ಷಕ ಅಣ್ಣೇಗೌಡ ಮತ್ತಿತರರು ಭಾಗವಹಿಸಿದ್ದರು.