ಮಣ್ಣಿನ ಸಂರಕ್ಷಣೆ ಎಲ್ಲರ ಕರ್ತವ್ಯವಾಗಲಿ: ಸ್ಫೂರ್ತಿ ಜಿ.ಎಸ್.

KannadaprabhaNewsNetwork |  
Published : Dec 08, 2025, 02:45 AM IST
ಪೋಟೊ ಕ್ಯಾಪ್ಸನ್:ಜಂತ್ಲಿ–ಶಿರೂರ ಗ್ರಾಮದಲ್ಲಿ ವಾಟರ್‌ಶೆಡ್ ಮಹೋತ್ಸವ ಹಾಗೂ ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಆತ್ಮ ಯೋಜನೆಯಡಿ ಕಿಸಾನ್ ಗೋಷ್ಠಿ ಉದ್ಘಾಟಿಸಿದ ಕೃಷಿ ನಿರ್ದೇಶಕಿ  ಸ್ಪೂರ್ತಿ.ಜಿ.ಎಸ್, ಗ್ರಾ ಪಂ ಅಧ್ಯಕ್ಷೆ  ಜೈತೂಂಬಿ.ರಾ.ಬಳ್ಳಾರಿ, ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಇದ್ದರು. | Kannada Prabha

ಸಾರಾಂಶ

ಸವೆದ ಮಣ್ಣಿನಿಂದ ಫಲ ಸಿಗಲು ಸಾಧ್ಯವಿಲ್ಲ. ಈ ಮಣ್ಣಿನ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮಣ್ಣಿನ ಮಹತ್ವವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತದೆ.

ಡಂಬಳ: ಮನುಷ್ಯನಿಗೆ ಅಗತ್ಯವಿರುವಂತೆ ಮಣ್ಣಿಗೂ ಪೋಷಕಾಂಶದ ಅಗತ್ಯವಿರುತ್ತದೆ. ಆಹಾರದ ಮುಖ್ಯ ಮೂಲ ಮಣ್ಣು. ಮಣ್ಣಿನ ಮಹತ್ವ ಮಣ್ಣಿನಲ್ಲಿ ಕೆಲಸ ಮಾಡುವವರಿಗೆ ಗೊತ್ತು. ಮಣ್ಣಿನ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಜಿಲ್ಲಾ ಕೃಷಿ ನಿರ್ದೇಶಕಿ ಸ್ಫೂರ್ತಿ ಜಿ.ಎಸ್. ತಿಳಿಸಿದರು.

ಜಂತ್ಲಿ- ಶಿರೂರ ಗ್ರಾಮದಲ್ಲಿ ಜಲಾನಯನ ಮಹೋತ್ಸವ ಹಾಗೂ ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಆತ್ಮ ಯೋಜನೆಯಡಿ ಕಿಸಾನ್ ಗೋಷ್ಠಿ ಉದ್ಘಾಟಿಸಿ ಮಾತನಾಡಿ, ಸವೆದ ಮಣ್ಣಿನಿಂದ ಫಲ ಸಿಗಲು ಸಾಧ್ಯವಿಲ್ಲ. ಈ ಮಣ್ಣಿನ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮಣ್ಣಿನ ಮಹತ್ವವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತದೆ. ಮಣ್ಣಿನ ಕಳಪೆ ಸ್ಥಿತಿಯಿಂದಾಗಿ ಮಣ್ಣಿನ ಸವೆತ ತೀವ್ರವಾಗಿ ಆಗುತ್ತಿದೆ. ಎಲ್ಲರೂ ಎಚ್ಚೆತ್ತುಕೊಂಡು ಫಲವತ್ತಾದ ಮಣ್ಣು ಉಳಿಸಿಕೊಂಡು ಹೋಗುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಮಾತನಾಡಿ, ಜಲಾನಯನದ ಪರಿಕಲ್ಪನೆಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ ನವೀನ ತಳಿಗಳ ಬಳಕೆ ವಿಜ್ಞಾನಿಗಳ ಸಲಹೆಯಂತೆ ಬೆಳೆ ರಕ್ಷಣಾ ಕ್ರಮಗಳನ್ನು ಅನುಸರಿಸುವ ಕುರಿತು ರೈತರಿಗೆ ಸಲಹೆ ನೀಡಿದರು.

ವಿಜ್ಞಾನಿ ಡಾ. ಎಸ್.ಕೆ. ಮದ್ಲಾಪೂರ ಅವರು ಮಣ್ಣಿನ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಹೇಮಣ್ಣ ಪೂಜಾರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೈತೂಂಬಿ ರಾ. ಬಳ್ಳಾರಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವಿ ದೊಡ್ಡಮನಿ, ಗ್ರಾಪಂ ಸದಸ್ಯರಾದ ಯಲ್ಲಪ್ಪ ಜಡಿ, ಯಲ್ಲಪ್ಪ ಹೊಂಬಳ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಸಂತ ಗೋಕಾಕ, ಪಿಡಿಒ ವೀರೇಶ ಆವಾರಿ, ಕೃಷಿ ಅಧಿಕಾರಿ ಎಸ್.ಬಿ. ರಾಮೇನಹಳ್ಳಿ, ತಾಂತ್ರಿಕ ಕೃಷಿ ಅಧಿಕಾರಿ ಹನುಮಂತಪ್ಪ, ವಿರುಪಾಕ್ಷಪ್ಪ ಹಳ್ಳಿಕೇರಿಮಠ, ಶೇಖಪ್ಪ ದೇಸಾಯಿ, ರಂಗಪ್ಪ ಡಂಬಳ, ಮಂಜು ಬಳಗಾನೂರ, ಬಸವರಾಜ ಕಲಕೇರಿ, ಬಾಬೂಜಿ ಹಡಪದ, ಮಾರುತಿ ರಾಥೋಡ, ಅಕ್ಕಮಹಾದೇವಿ ಶೆಲವಡಿ, ಗೌರಿಶಂಕರ ಸಜ್ಜನ, ರಾಕೇಶ್ ಕದಾಂಪೂರ ಗ್ರಾಮದ ರೈತರು ಇದ್ದರು. ಬಸವರಾಜ ಬೇವಿನಮರದ ಕಾರ್ಯಕ್ರಮದಲ್ಲಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌