ಯೋಧ ಗಿರೀಶ್‌ ನಿಧನ: ಶೋಕದಲ್ಲಿ ಮುಳುಗಿದ ಗ್ರಾಮ

KannadaprabhaNewsNetwork |  
Published : Dec 10, 2025, 12:30 AM IST
9ಕೆೆೆೆೆೆೆಕೆೆೆೆೆಡಿಯು2. | Kannada Prabha

ಸಾರಾಂಶ

ಕಡೂರು: ರಾಜಸ್ತಾನದ ಬಿಕಾನೇರ್‌ ನಲ್ಲಿ ಗಡಿ ಭದ್ರತಾ ಪಡೆಯ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕಿನ ಜೋಡಿ ತಿಮ್ಮಾಪುರದ ಗಿರೀಶ್ (37) ಅನಾರೋಗ್ಯದಿಂದ ಸೇವೆ ಸಲ್ಲಿಸುತ್ತಿದ್ದ ಸ್ಥಳದಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ.

ಕಡೂರು: ರಾಜಸ್ತಾನದ ಬಿಕಾನೇರ್‌ ನಲ್ಲಿ ಗಡಿ ಭದ್ರತಾ ಪಡೆಯ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕಿನ ಜೋಡಿ ತಿಮ್ಮಾಪುರದ ಗಿರೀಶ್ (37) ಅನಾರೋಗ್ಯದಿಂದ ಸೇವೆ ಸಲ್ಲಿಸುತ್ತಿದ್ದ ಸ್ಥಳದಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ.ಕಡೂರು ತಾಲೂಕಿನ ಬೀರೂರು ಹೋಬಳಿ ಜೋಡಿ ತಿಮ್ಮಾಪುರ ಗ್ರಾಮದ ಬಸಪ್ಪ ಮತ್ತು ಜಯಮ್ಮ ಅವರ ಪುತ್ರರಾದ ಇವರು 10 ವರ್ಷದ ಹಿಂದೆ ಗಿರೀಶ್ ಅಭಿಲಾಷ ಅವರನ್ನು ವಿವಾಹವಾಗಿದ್ದು, ಪ್ರಣೀತ್, ಇಂಪನಾ ಎಂಬ ಮಕ್ಕಳಿದ್ದಾರೆ. ಕಳೆದ ಎರಡು ವಾರದ ಹಿಂದಷ್ಟೇ ಊರಿಗೆ ಬಂದು ಕುಟುಂಬ ಸದಸ್ಯರೊಂದಿಗೆ ಸಂತಸದಿಂದ ಕೆಲ ದಿನಗಳ ಕಾಲ ಇದ್ದು ಮತ್ತೆ ಸೇನೆಗೆ ತೆರಳಿದ್ದ ಗಿರೀಶ್ ಅವರು ಮೃತಪಟ್ಟಿರುವ ಸುದ್ದಿ ತಿಳಿದು ಇಡೀ ಗ್ರಾಮವೇ ಶೋಕದ ಮಡುವಿನಲ್ಲಿ ಮುಳುಗಿದೆ.

ಗಿರೀಶ್ ಅವರ ಸಾವಿಗೆ ಅನಾರೋಗ್ಯವೇ ಕಾರಣ ಎಂದು ಹೇಳುತ್ತಿದ್ದರೂ ಅವರ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಗಿರೀಶ್ ಕಳೆದ 18 ವರ್ಷದ ಹಿಂದೆ ರಾಜಸ್ತಾನದ ಗಡಿ ಭಧ್ರತಾ ಪಡೆಗೆ ಸೇರಿ, ಶ್ರೀನಗರ, ಗೌಹಾತಿ. ಭೂಪಾಲ್ ಮತ್ತು ರಾಜಸ್ತಾನದಲ್ಲಿ ಸೇವೆ ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ.

ತಾ.ಪಂ ಮಾಜಿ ಸದಸ್ಯ ಗೋವಿಂದ ಸ್ವಾಮಿ ಈ ಕುರಿತು ಮಾತನಾಡಿ, ಕಳೆದ ಸೋಮವಾರ ಸಂಜೆ ಕರ್ತವ್ಯದ ವೇಳೆಯಲ್ಲಿ ಅನಾರೋಗ್ಯದಿಂದ ವಾಂತಿಯಾಗಿದ್ದಾಗಿ ಮನೆಯವರೊಂದಿಗೆ ದೂರವಾಣಿ ಮೂಲಕ ಮಾತನಾಡಿದಾಗ ತಿಳಿಸಿದ್ದರು. ಆದರೆ ಮಂಗಳವಾರ ಬೆಳಿಗ್ಗೆ ಬಿಎಸ್ ಎಫ್ ಯುನಿಟ್ ನವರು ಗಿರೀಶ್ ಮೃತಪಟ್ಟಿರುವುದಾಗಿ ತಿಳಿಸಿ ಊರಿಗೆ ಮೃತದೇಹ ತರುವುದಾಗಿ ತಿಳಿಸಿದ್ದಾರೆ ಎಂದರು.

ಬುಧವಾರ ಅವರ ತೋಟದಲ್ಲಿ ಅಂತ್ಯ ಕ್ರಿಯೆ ನಡೆಸುವುದಾಗಿ ಗಿರೀಶ್ ಸಹೋದರ ಸತೀಶ್ ಮಾಹಿತಿ ನೀಡಿದರು.

9ಕೆಕೆೆಡಿಯು2.ಮೃತ ಯೋಧ ಗಿರೀಶ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ