ಮಹಾನಗರ ಪಾಲಿಕೆಯಲ್ಲಿ ಇ-ಸ್ವತ್ತು ಮಾಡಿಸಲು ತುಂಬಾ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಮಲೆನಾಡು ಕೇಸರಿಪಡೆ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಹಾನಗರ ಪಾಲಿಕೆಯಲ್ಲಿ ಇ-ಸ್ವತ್ತು ಮಾಡಿಸಲು ತುಂಬಾ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಮಲೆನಾಡು ಕೇಸರಿಪಡೆ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸರ್ಕಾರವು ಖಾಸಗಿ ಸ್ವತ್ತುಗಳ ಅಕಮ ಪರಭಾರೆ ಖಾತೆಯಾಗುವುದನ್ನು ತಡೆಗಟ್ಟಲು ಇ-ಸ್ವತ್ತನ್ನು 2015 ರಿಂದಲೇ ಜಾರಿಗೆ ತಂದಿದೆ. ಇದಕ್ಕಾಗಿ ಮಹಾನಗರ ಪಾಲಿಕೆ ಕೂಡ ಜಾಗೃತಿ ಕಾರ್ಯಕಮಕ್ಕಾಗಿ ಸುಮಾರು 15ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಂಡಿತ್ತು. ಆದರೂ, ಕೂಡ ಪಾಲಿಕೆಯಿಂದ ಇ-ಸ್ವತ್ತು ಪಡೆಯಲಾಗುತ್ತಿಲ್ಲ ಎಂದು ದೂರಿದರು. ಅಪ್ಲೋಡ್ ಆಗಲು ತಾಂತ್ರಿಕ ದೋಷವಿದೆ. ಸರ್ವರ್ ಕೆಲಸ ಮಾಡುತ್ತಿಲ್ಲ ಎಂಬ ಸಬೂಬನ್ನು ಅಧಿಕಾರಿಗಳು ಹೇಳುತ್ತಿದ್ದಾರೆ. ಇ-ಸ್ವತ್ತು ಇಲ್ಲದೇ ಯಾವುದೇ ಸ್ವತ್ತುಗಳು ನೋಂದಣಿಯಾಗುತ್ತಿಲ್ಲ. ಇದರಿಂದಾಗಿ ಮದುವೆ ಮಾಡುವವರು, ವಿದೇಶಕ್ಕೆ ಹೋಗುವವರು, ಆಸ್ಪತ್ರೆ ಖರ್ಚು ಭರಿಸಲು ಸಾರ್ವಜನಿಕರಿಗೆ ಕಷ್ಟವಾಗುತ್ತಿದೆ. ಆದ್ದರಿಂದ ಇ-ಸ್ವತ್ತು ನೀಡಲಿಕ್ಕಾಗಿಯೇ ಒಬ್ಬ ಅಧಿಕಾರಿಯನ್ನು ನೇಮಿಸಬೇಕು. ಇ-ಸ್ವತ್ತು ಮಾಡಿಸಲು ಕೆಲವು ನೌಕರರು ಹಣದ ಬೇಡಿಕೆ ಕೂಡ ಇಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆಯೂ ಕೂಡ ಅಗತ್ಯಕಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕೇಸರಿಪಡೆಯ ಅಧ್ಯಕ್ಷ ಎಸ್.ಜೆ. ರಾಜು, ಪಮುಖರಾದ ರಾಕೇಶ್ ಕುಮಾರ್, ಮಂಜುನಾಥ್, ಶೀನಿವಾಸ್, ಚಂದನ್, ಅಪ್ಪು, ಯಶವಂತ್ ಸೇರಿದಂತೆ ಹಲವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.