ಉಪ್ಪಾರ ಸಮಾಜದ ಭವನ ನಿರ್ಮಾಣಕ್ಕೆ ಶೀಘ್ರ ನಿವೇಶನ

KannadaprabhaNewsNetwork |  
Published : May 06, 2025, 12:22 AM IST
ಫೋಟೊ-04ಬಿವೈಡಿ1 | Kannada Prabha

ಸಾರಾಂಶ

ದೇವಲೋಕದಿಂದ ಗಂಗೆಯನ್ನು ಭೂಮಿಗೆ ಹರಿಸಿದ ಭಗೀರಥ ವಂಶ ಎಂಬ ಹೆಗ್ಗಳಿಕೆ ಸದಾ ಇರಲಿದೆ ಎಂದರಲ್ಲದೇ ಸಂಘಟನೆ ಮೂಲಕ ಸಮಾಜ ಮೇಲೆತ್ತುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ

ಬ್ಯಾಡಗಿ: ಉಪ್ಪಾರ ಸಮಾಜದ (ಭಗೀರಥ) ಸಮುದಾಯ ಭವನ ನಿರ್ಮಾಣಕ್ಕೆ ಶೀಘ್ರದಲ್ಲಿಯೇ ಪಟ್ಟಣದಲ್ಲಿ ನಿವೇಶನ ಮಂಜೂರು ಮಾಡಿಸುವುದಾಗಿ ಶಾಸಕ ಬಸವರಾಜ ಶಿವಣ್ಣವರ್‌ ಭರವಸೆ ನೀಡಿದರು.

ಪಟ್ಟಣದ ತಹಸೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ಆಯೋಜನೆ ಮಾಡಲಾಗಿದ್ದ ಭಗೀರಥ ಜಯಂತ್ಯುತ್ಸವದಲ್ಲಿ ಭಗಿರಥ ಭಾವಚಿತ್ರಕ್ಕೆ ಪುಪ್ಪ ನಮನ ಅರ್ಪಿಸಿ ಮಾತನಾಡಿ ಅವರು, ಹಿಂದುಳಿದಿರುವ ಉಪ್ಪಾರ ಸಮಾಜಕ್ಕೆ ಸರ್ಕಾರ ನೀಡುತ್ತಿರುವ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಆರ್ಥಿಕ, ಸಾಮಾಜಿಕ, ಹಾಗೂ ರಾಜಕೀಯ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಿದೆ ಎಂದರಲ್ಲದೇ ಸಮಾಜದ ಸಮುದಾಯ ಭವನ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಅಲ್ಪ ಸಂಖ್ಯಾತರಾಗಿರುವ ಉಪ್ಪಾರ ಸಮಾಜಕ್ಕೆ ತನ್ನದೇ ಆದ ಹಿರಿಮೆ ಇದೆ, ದೇವಲೋಕದಿಂದ ಗಂಗೆಯನ್ನು ಭೂಮಿಗೆ ಹರಿಸಿದ ಭಗೀರಥ ವಂಶ ಎಂಬ ಹೆಗ್ಗಳಿಕೆ ಸದಾ ಇರಲಿದೆ ಎಂದರಲ್ಲದೇ ಸಂಘಟನೆ ಮೂಲಕ ಸಮಾಜ ಮೇಲೆತ್ತುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ ಎಂದರು.

ಶಂಕರ್ ಉಪ್ಪಾರ ಉಪನ್ಯಾಸ ನೀಡಿದರು, ಲಿಂಗರಾಜ ಹರ್ಲಾಪುರ, ಸ್ವಾಗತಿಸಿದರು, ಶ್ರೀನಿವಾಸ ಕರ್ನೂಲ ನಿರೂಪಿಸಿದರು. ಶಿವಬಸಪ್ಪ ಉಪ್ಪಾರ ವಂದಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪಗೋಳ, ಮುರಿಗೆಪ್ಪ ಶೆಟ್ಟರ್‌, ಬಸವರಾಜ ಸುಂಕಾಪುರ, ಪುರಸಭೆ ಸದಸ್ಯ ಗಾಯಿತ್ರಿ ರಾಯ್ಕರ, ಚೆನ್ನಬಸಪ್ಪ ಹುಲ್ಲತ್ತಿ, ಎಂ.ಎಸ್. ಪಾಟೀಲ, ಚಂದ್ರು ಆಟದವರ, ಮಾಲತೇಶ ಉಪ್ಪಾರ, ಶಿವಮೂರ್ತಿ ಉಪ್ಪಾರ, ವೆಂಕಟೇಶ ಉಪ್ಪಾರ, ಕೃಷ್ಣಪ್ಪ ಉಪ್ಪಾರ ಹಾಗೂ ಬ್ಯಾಡಗಿ ಪಟ್ಟಣದ ಉಪ್ಪಾರ ಸಮಾಜದ ಮಹಿಳೆಯರು ಯುವಕರು ಹಾಗೂ ಬಂಧುಗಳು ಕಾಸಂಬಿ, ಗುಂಗುರಗೊಪ್ಪ ಗ್ರಾಮಗಳ ಮುಖಂಡರಿದ್ದರು.

ಇದಕ್ಕೂ ಮುನ್ನ ಪಟ್ಟಣದ ಬನಶಂಕರಿ ದೇವಸ್ಥಾನ ಆವರಣದಿಂದ ಶ್ರೀಭಗೀರಥ ಮಹರ್ಷಿಯ ಭಾವಚಿತ್ರದ ಮೆರವಣಿಗೆಗೆ ಮಾಜಿ ಶಾಸಕ ಸುರೇಶ ಗೌಡ ಪಾಟೀಲ ಚಾಲನೆ ನೀಡಿದರು. ನಂತರ ಮೆರವಣಿಗೆ ಸಕಲ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ತಹಸೀಲ್ದಾರ ಕಾರ್ಯಾಲಯದವರೆಗೆ ನಡೆಸಿದರು.

ಎಲ್ಲ ಜಯಂತಿ ಕಾರ್ಯಕ್ರಮಗಳು ಕೇವಲ ಅವರವರ ಜಾತಿಗೆ ಮಾತ್ರ ಸೀಮಿತಾಗುತ್ತಿರುವುದು ನೋವಿನ ಸಂಗತಿ, ಎಲ್ಲ ಸಮಾಜದವರನ್ನು ಅಪ್ಪುವ, ಭಗೀರಥ ಜಯಂತಿಗೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗೈರಾಗಿರುವುದೇ ಇದಕ್ಕೆ ಸಾಕ್ಷಿ ಎಂದು ನೋವು ತೋಡಿಕೊಂಡರು.

PREV

Recommended Stories

ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು
ತೊಗರಿ ರೈತನಿಗೆ ಗದರಿದ ಖರ್ಗೆ ವಿರುದ್ಧ ವಿಪಕ್ಷ ಗರಂ