- ಜಿಲ್ಲಾ ಕ್ರೀಡಾಂಗಣದಲ್ಲಿ ಹಿರಿಯ ಪುರುಷರು, ಮಹಿಳೆಯರಿಗೆ ಆಯೋಜನೆ: ದಿನೇಶ್ ಕೆ. ಶೆಟ್ಟಿ - - -
- 90 ಪುರುಷ, 90 ಮಹಿಳಾ ಖೋ ಖೋ ಪಟುಗಳು, 36 ತರಬೇತುದಾರರು ಮತ್ತು ವ್ಯವಸ್ಥಾಪಕರು
- 32 ರೆಫರಿಗಳು, 30 ತಾಂತ್ರಿಕ ಅಧಿಕಾರಿಗಳು, ಸ್ವಯಂಸೇವಕರು- ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆಯಲ್ಲಿ ಎಲ್ಲರಿಗೂ ವಸತಿ, ಊಟದ ವ್ಯವಸ್ಥೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಶನಿವಾರ ಸಂಜೆ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಟೂರ್ನಿ ಆಯೋಜನೆ ಸಿದ್ಧತೆ ಕುರಿತು ಮಾಹಿತಿ ನೀಡಿದ ಅವರು, ದಕ್ಷಿಣ ಭಾರತ ಖೋ ಖೋ ಕಮಿಟಿ, ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆ, ಜಿಲ್ಲಾ ಖೋ ಖೋ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕ್ರೀಡಾ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಭಾಗಿತ್ವದಲ್ಲಿ 31ನೇ ಚಾಂಪಿಯನ್ ಶಿಪ್ ನಡೆಯಲಿದೆ ಎಂದು ಹೇಳಿದರು.
90 ಪುರುಷ, 90 ಮಹಿಳಾ ಖೋ ಖೋ ಪಟುಗಳು, 36 ತರಬೇತುದಾರರು ಮತ್ತು ವ್ಯವಸ್ಥಾಪಕರು, 32 ರೆಫರಿಗಳು, 30 ತಾಂತ್ರಿಕ ಅಧಿಕಾರಿಗಳು, ಸ್ವಯಂಸೇವಕರು ಸೇರಿ 300ಕ್ಕೂ ಹೆಚ್ಚು ಮಂದಿ ಕ್ರೀಡಾಕೂಟದ ಭಾಗವಹಿಸಲಿದ್ದು, ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆಯಲ್ಲಿ ಎಲ್ಲರಿಗೂ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ. ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಾವಳಿ ಜರುಗಲಿದೆ. ಪ್ರತಿ ತಂಡ ಎಲ್ಲ ತಂಡಗಳೊಂದಿಗೆ ಪಂದ್ಯ ಆಡಲಿವೆ. ಭಾರತೀಯ ಖೋ ಖೋ ಫೆಡರೇಷನ್ ಹೊಸ ನಿಯಮಗಳ ಅನುಸಾರವೇ ಪಂದ್ಯಗಳು ನಡೆಯಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಎಸ್ಕೆಕೆಐ ಅಧ್ಯಕ್ಷ ಲೋಕೇಶ್ವರ, ಜಿಲ್ಲಾ ಸಂಸ್ಥೆ ಉಪಾಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಜೆ.ರಾಮಲಿಂಗಪ್ಪ, ಶಿವಯೋಗಿ ಎಲೆ, ಖೋ ಖೋ ಕೋಚ್ ರಘು, ಕಾಂಗ್ರೆಸ್ ಮುಖಂಡ ಶಶಿ ಹುಲಿಕುಂಟೆ ಮಠ್, ಹಿರಿಯ ಕಬಡ್ಡಿ ಪಟು ಮಲ್ಲಿಕಾರ್ಜುನ್, ಎನ್.ಕೆ.ಕೊಟ್ರೇಶ್ ಇತರರಿದ್ದರು.
-19ಕೆಡಿವಿಜಿ42: ದಿನೇಶ ಕೆ. ಶೆಟ್ಟಿ