ಬಿತ್ತನೆ ಬೀಜ ದರ ಹೆಚ್ಚಳ: ರೈತರಿಂದ ಜಿಲ್ಲಾಧಿಕಾರಿ ಮನವಿ

KannadaprabhaNewsNetwork |  
Published : May 29, 2024, 12:51 AM ISTUpdated : May 29, 2024, 12:52 AM IST
ಫೋಟೋ- ಫಾರ್ಮರ್‌  | Kannada Prabha

ಸಾರಾಂಶ

ಮುಂಗಾರು ಪೂರ್ವ ಉತ್ತಮ ಮಳೆ ಆಗುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ಆದರೆ, ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿತರಿಸುವ ಬಿತ್ತನೆ ಬೀಜಗಳ ಬೆಲೆ ಹೆಚ್ಚಿಸಿದ್ದು ಸಂಕಷ್ಟಕ್ಕೆ ದೂಡಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಮುಂಗಾರು ಪೂರ್ವ ಉತ್ತಮ ಮಳೆ ಆಗುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ಆದರೆ, ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿತರಿಸುವ ಬಿತ್ತನೆ ಬೀಜಗಳ ಬೆಲೆ ಹೆಚ್ಚಿಸಿದ್ದು ಸಂಕಷ್ಟಕ್ಕೆ ದೂಡಿದೆ.

ಬಿತ್ತನೆ ಬೀಜದಿಂದ ಬೀಜಕ್ಕೆ ದರ ಹೆಚ್ಚಳದಲ್ಲಿ ವ್ಯತ್ಯಾಸವಿದ್ದು, ಪ್ರತಿ ಕೆಜಿಗೆ ₹14ರಿಂದ ₹61ರವರೆಗೆ ಹೆಚ್ಚಳವಾಗಿದೆ. ಆದರೆ, ರೈತರಿಗೆ ನೀಡುವ ರಿಯಾಯಿತಿಯಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿಲ್ಲ. ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ವರುಣನ ಅವಕೃಪೆಗೆ ತುತ್ತಾಗಿದ್ದ ರೈತರಿಗೆ, ಈಗ ಬೀಜಗಳ ಬೆಲೆ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬಸವರಾಜ ಮಾಲಿಪಾಟೀಲ ಆರೋಪಿಸಿದರು.

ಈ ಕುರಿತು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಮಾಡಿರುವ ಅವರು, ತೊಗರಿ ಹೆಸರು ಮುಂತಾದ ಬೀಜಗಳು 5 ಕೆಜಿ ಚೀಲ ಬರುತ್ತಿದ್ದು, ಅವುಗಳ ದರ ನೂರಾರು ರುಪಾಯಿ ಏರಿಕೆ ಆಗಿದೆ. 5 ಎಕರೆವರೆಗೆ ಮಾತ್ರ ರಿಯಾಯ್ತಿ ನೀಡಲಾಗುತ್ತಿದ್ದು, ಉಳಿದ ಬೀಜಗಳನ್ನು ಮಾರುಕಟ್ಟೆ ದರದಲ್ಲೇ ಖರೀದಿಸಬೇಕು.

ಸೂರ್ಯಕಾಂತಿ ಬೀಜದ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಪ್ರತಿ ಕೆಜಿಗೆ ₹940ಕ್ಕೆ ನೀಡಲಾಗುತ್ತಿದೆ. ಸೋಯಾ ಅವರೆ ಬೆಲೆಯಲ್ಲಿ ಪ್ರತಿ ಕೆಜಿಗೆ ₹6, ಹೈಬ್ರಿಡ್ ಜೋಳ ₹7 ಕಡಿಮೆ ಆಗಿದೆ. ಉಳಿದ ಎಲ್ಲ ಬೀಜಗಳ ಬೆಲೆಯಲ್ಲಿ ಏರಿಕೆ ಆಗಿದೆ.

ಸಾಮಾನ್ಯ ರೈತರಿಗೆ ಹೆಸರು, ಉದ್ದು, ತೊಗರಿ, ಸಜ್ಜೆ, ಸೋಯಾ ಅವರೆ ಪ್ರತಿ ಕೆಜಿಗೆ ₹25, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ₹37.50, ಮೆಕ್ಕೆಜೋಳ ಸಾಮಾನ್ಯ ರೈತರಿಗೆ ₹20, ಪರಿಶಿಷ್ಟ ಜಾತಿ, ಪಂಗಡದವರಿಗೆ ₹30, ಸೂರ್ಯಕಾಂತಿ ಸಾಮಾನ್ಯ ರೈತರಿಗೆ ₹80, ಎಸ್‍ಸಿ, ಎಸ್‍ಟಿ ರೈತರಿಗೆ ₹120, ಶೇಂಗಾ ಸಾಮಾನ್ಯ ರೈತರಿಗೆ ₹14, ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ₹21 ರಿಯಾಯಿತಿ ನೀಡಲಾಗುತ್ತದೆ.

ಕಳೆದ ವರ್ಷ ಸ್ಪ್ರಿಂಕ್ಲರ್ ಪೈಪ್ ಮತ್ತು ಉಪಕರಣಗಳ ದರ ಹೆಚ್ಚಿಸಲಾಗಿತ್ತು. ಈಗ ಬಿತ್ತನೆ ಬೀಜಗಳ ಬೆಲೆ ಹೆಚ್ಚಿಸಲಾಗಿದೆ. ಮುಂದೆ ಮಳೆ ಹೇಗೂ ಎನ್ನುವ ರೈತರಿಗೆ ಬೆಲೆ ಹೆಚ್ಚಳ ಹೊಸ ಹೊರೆಯಾಗಿಸಿದೆ.‘ಬರಗಾಲದಿಂದ ರೈತ ಸಮುದಾಯ ತೀವ್ರ ಸಂಕಷ್ಟದಲ್ಲಿದೆ. ಬೀಜಗಳ ದರ ಹೆಚ್ಚಳ ಮಾಡಿರುವುದು ರೈತರ ಸಂಕಷ್ಟ ಹೆಚ್ಚಿಸಲಿದೆ. ಸರ್ಕಾರ ಕೂಡಲೇ ಬೀಜಗಳ ದರವನ್ನು ಕಡಿಮೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಲ್ಲಣ್ಣ ಕುಲಕರ್ಣಿ, ಗಿರೀಶಗೌಡ ಇನಾಂದಾರ, ಕಲ್ಯಾಣರಾವ ಪಾಟೀಲ, ಸೂರ್ಯಕಾಂತ ಡೆಂಗೆ, ಅಣವೀರ ಪಾಟೀಲ, ರಾಜು ಜೈನ, ಶಿವಮೂರ್ತಿ ಸ್ವಾಮಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!