ಮಳೆಗಾಗಿ ಸಿದ್ಧೇಶ್ವರ ಬೆಟ್ಟದಲ್ಲಿ ವಿಶೇಷಪೂಜೆ

KannadaprabhaNewsNetwork |  
Published : Jul 28, 2026, 01:30 AM IST
1) ಮಾಗಡಿ ತಾಲ್ಲೂಕಿನ ಗವೀನಾಮಂಗಲದಲ್ಲಿರುವ ಶ್ರೀ ಸಿದ್ಧೇಶ್ವರ (ಸಿದ್ಧಪಾಜಿ) ಮಳೆಗಾಘಿ ವಿಶೆಷ ಪೂಜೆ ಮಾಡಿರುವುದು.2) ತಾಲ್ಲೂಕಿನ ವಿರೇಗೌಡನದೊಡ್ಡಿ ಗ್ರಾಮಸ್ಥರು ಮಳೆಗಾಘಿ ಪ್ರಾರ್ಥಿಸಿ ಶ್ರೀ ಸಿದ್ಧೇಶ್ವರ ಬೆಟ್ಟದಲ್ಲಿ ಸಾಮೂಹಿಕ ಭೋಜನ ಮಾಡುತ್ತಿರುವುದು. | Kannada Prabha

ಸಾರಾಂಶ

ಮಾಗಡಿ: ತಾಲೂಕಿನಲ್ಲಿ ಮಳೆ ಕೊರತೆಯಿಂದಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದು, ಮಳೆಗಾಗಿ ಪ್ರಾರ್ಥಿಸಿ ತಾಲೂಕಿನ ವೀರೇಗೌಡನದೊಡ್ಡಿ ಗ್ರಾಮಸ್ಥರು ಶ್ರೀ ಸಿದ್ಧೇಶ್ವರ (ಸಿದ್ಧಪಾಜಿ) ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು

ಮಾಗಡಿ: ತಾಲೂಕಿನಲ್ಲಿ ಮಳೆ ಕೊರತೆಯಿಂದಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದು, ಮಳೆಗಾಗಿ ಪ್ರಾರ್ಥಿಸಿ ತಾಲೂಕಿನ ವೀರೇಗೌಡನದೊಡ್ಡಿ ಗ್ರಾಮಸ್ಥರು ಶ್ರೀ ಸಿದ್ಧೇಶ್ವರ (ಸಿದ್ಧಪಾಜಿ) ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಮಳೆ ಅಭಾವದಿಂದ ಕಂಗೆಟ್ಟಿರುವ ಗ್ರಾಮಸ್ಥರು, ಶ್ರೀ ಸಿದ್ಧೇಶ್ವರ ಬೆಟ್ಟಕ್ಕೆ ತೆರಳಿ ದೇವರಿಗೆ ವಿಶೇಷ ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ದೇವರಿಗೆ ''''''''ಒಬ್ಬಟ್ಟಿನ ನೈವೇದ್ಯ'''''''' ಸಮರ್ಪಿಸಿ ತಾಲೂಕಿನಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಎಂದು ಪ್ರಾರ್ಥಿಸಿದರು.

ಮುಂಗಾರು ಆರಂಭದ ವೇಳೆಯಲ್ಲಿ ಮಳೆ ಬರದಿದ್ದಾಗ ಗ್ರಾಮಸ್ಥರು ಒಟ್ಟಾಗಿ ಬೆಟ್ಟದ ಮೇಲೆ ಒಬ್ಬಟ್ಟು ತಯಾರಿಸಿ ದೇವರಿಗೆ ನೈವೇದ್ಯ ಮಾಡುವುದು ಇಲ್ಲಿನ ಹಳೆಯ ಪ್ರತೀತಿಯಾಗಿದೆ. ಬೆಟ್ಟದ ಮೇಲೆಯೇ ಶುದ್ಧವಾಗಿ ಒಬ್ಬಟ್ಟು ಹಾಗೂ ಊಟ ತಯಾರಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಹಂಚಲಾಗುತ್ತದೆ. ಹೀಗೆ ಪೂಜೆ ಸಲ್ಲಿಸಿದ ಒಂದೆರಡು ದಿನಗಳಲ್ಲಿ ಮಳೆಯಾಗಿರುವ ಹಲವು ಉದಾಹರಣೆಗಳು ಮತ್ತು ನಂಬಿಕೆಗಳು ಈ ಭಾಗದಲ್ಲಿದೆ.

ಸಿದ್ಧದೇವರ ಬೆಟ್ಟಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಪೂಜಾ ಕಾರ್ಯಕ್ರಮದಲ್ಲಿ ವೀರೇಗೌಡನದೊಡ್ಡಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

30 ವಿದ್ಯಾರ್ಥಿಗಳ ಸಾವಿಗೆ ಸಚಿವ ಶಾ ನೇರ ಹೊಣೆ
ನಿರಂತರ ಪರಿಶ್ರಮದಿಂದ ಸಾಧನೆ ಸಾಧ್ಯ: ಬಿ.ಸಿ.ಪಾಟೀಲ್