ಕೋದಂಡರಾಮ ದೇಗುಲದಲ್ಲಿ ವಿಶೇಷ ಪೂಜೆ

KannadaprabhaNewsNetwork |  
Published : May 13, 2024, 12:02 AM IST
ಕೆ ಕೆ ಪಿ ಸುದ್ದಿ 04:ನಗರದ ಕೋಟೆ ಶ್ರೀ ಕೋದಂಡರಾಮ ಸ್ವಾಮಿ ದೇವಾಲಯ ದಲ್ಲಿ ತ್ರಿಮತಸ್ಥ ವೈಷ್ಣವ ಬಂಧುಗಳು ಶ್ರೀ ರಾಮಾನುಜಾಚಾ ರ್ಯರ ಜಯಂತಿ ಆಚರಿಸಿದರು. | Kannada Prabha

ಸಾರಾಂಶ

ಕನಕಪುರ: ನಗರದ ಕೋಟೆ ಹೆಬ್ಬಾಗಿಲಿನಲ್ಲಿರುವ ಶ್ರೀ ಕೋದಂಡರಾಮ ದೇವಾಲಯದಲ್ಲಿ ಶ್ರೀ ರಾಮಾನುಜಾಚಾರ್ಯರ ಜಯಂತಿ ಪ್ರಯುಕ್ತ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಾಯಿತು.

ಕನಕಪುರ: ನಗರದ ಕೋಟೆ ಹೆಬ್ಬಾಗಿಲಿನಲ್ಲಿರುವ ಶ್ರೀ ಕೋದಂಡರಾಮ ದೇವಾಲಯದಲ್ಲಿ ಶ್ರೀ ರಾಮಾನುಜಾಚಾರ್ಯರ ಜಯಂತಿ ಪ್ರಯುಕ್ತ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಾಯಿತು. ದೇವಾಲಯದ ಅಂಗಳದಲ್ಲಿ ಶ್ರೀ ರಾಮಾನುಜಾಚಾರ್ಯರ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿವಿಧ ಹೂವುಗಳಿಂದ ಅಲಂಕರಿಸಿ ಪೂಜಿಸಲಾಯಿತು. ಮಹಿಳಾ ಭಜನಾ ಮಂಡಳಿ ಸದಸ್ಯರು ಶ್ರೀ ಗಳ ಭಕ್ತಿ ಕೀರ್ತನೆಗಳನ್ನು ಹಾಡಿ ಭಕ್ತಿ ಪ್ರದರ್ಶಿಸಿದರು.

ಹಿಂದೂ ಧರ್ಮದ ಶ್ರೇಷ್ಠ ತತ್ವಜ್ಞಾನಿಗಳಲ್ಲಿ ಒಬ್ಬರಾಗಿದ್ದ ಶ್ರೀಗಳು, ಸಮಾಜದಲ್ಲಿದ್ದ ಅಸ್ಪ್ರಶ್ಯತೆಯನ್ನು ತೊಡೆದು ಹಾಕಲು ಶ್ರಮಿಸಿದ ಮಹಾಮಹಿಮರು. 11ನೇ ಶತಮಾನದ 1017ರಲ್ಲಿ ತಮಿಳುನಾಡಿನ ಶ್ರೀ ಪೆರಂಬುದೂರಿನಲ್ಲಿ ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಇವರು, ವಿಶಿಷ್ಟಾದ್ವೈತ ಸಿದ್ಧಾಂತ ಸಾರಿದ ಮಹಾ ಗುರುವಾಗಿ, ತತ್ವಜ್ಞಾನಿಯಾಗಿ ಬಾಳಿ ಬಹುಕಿದರು. ಉತ್ತರ ಮತ್ತು ದಕ್ಷಿಣ ಭಾರತದ ವೈಷ್ಣವ ಪಂಥವನ್ನು ಒಗ್ಗೂಡಿಸಿ ವಿಷ್ಣುವಿನ ಆರಾಧನೆ ಮತ್ತು ಧಾರ್ಮಿಕ ನಂಬಿಕೆಗಳನ್ನು ಬಲಗೊಳಿಸಿದರು. ತಮ್ಮ ಸುದೀರ್ಘ 120 ವರ್ಷಗಳ ಜೀವನದಲ್ಲಿ ವಿಷ್ಣುವನ್ನು ಪೂಜಿಸುವುದು ಮೋಕ್ಷ ಪಡೆಯಲು ಇರುವ ಏಕೈಕ ಮಾರ್ಗ ಎಂದವರು ಎಂದು ಹೇಳಿದರು.

ರಾಮಾನುಜಾಚಾರ್ಯರು 12 ವರ್ಷ ಕರ್ನಾಟಕದ ಮೇಲುಕೋಟೆಯಲ್ಲಿ ನೆಲೆಸಿ ಅಲ್ಲಿ ಅವರು ತಮ್ಮ ವಿಶಿಷ್ಟಾದ್ವೈತ ಸಿದ್ಧಾಂತ ಪ್ರಚಾರ ಮಾಡಿದರು. ಇಂದಿಗೂ ಮೇಲುಕೋಟೆ ವೈಷ್ಣವ ಸಂಪ್ರದಾಯದ ಕೇಂದ್ರವಾಗಿದೆ. 11ನೇ ಶತಮಾನದ ಮಹಾ ಸಂತ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆ ಹೈದರಾಬಾದ್‌ನ ಮುಚಿಂತಲ್‌ನಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಪ್ರತಿಮೆ ಸಮಾನತೆ ಸಂಕೇತವಾಗಿದ್ದು, ಭಾರತದಲ್ಲಿ ಸಮಾನತೆಯ ಸಂದೇಶ ಸಾರಿದ ಅವರನ್ನು ಗುರು, ದಾರ್ಶನಿಕ ಮತ್ತು ಸಮಾಜ ಸುಧಾರಕ ಎಂದು ಇಂದಿಗೂ ಪೂಜಿಸಲಾಗುತ್ತಿದೆ. ಅವರು ಭೋದಿಸಿದ ವಿಶಿಷ್ಟಾದ್ವೈತ ಸಿದ್ಧಾಂತ ಇಂದಿಗೂ ಭಾರತದ ಜನಪ್ರಿಯ ಅಧ್ಯಾತ್ಮ ಮಾರ್ಗವಾಗಿ ಪ್ರಕಾಶಿಸುತ್ತಿದೆ ಎಂದರು.

ಶ್ರೀ ರಾಮಾನುಜಾಚಾರ್ಯರ ಮೂರ್ತಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಕೆ ಕೆ ಪಿ ಸುದ್ದಿ 04:ಕನಕಪುರ ಕೋಟೆ ಶ್ರೀ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ತ್ರಿಮತಸ್ಥ ವೈಷ್ಣವ ಸಮುದಾಯ ಶ್ರೀ ರಾಮಾನುಜಾಚಾ ರ್ಯರ ಜಯಂತಿ ಆಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮ ಯುವಜನತೆ ಸ್ವಂತಿಕೆಗೆ ಕೇಂದ್ರ ಯೋಜನೆ: ಬಿ.ವೈ.ರಾಘವೇಂದ್ರ
ಸಮಾನತೆಯ ಅರಿವಿನ ಡಾ.ಅಂಬೇಡ್ಕರ್‌ ಹಬ್ಬ: ಡಾ.ಶಿವಾನಂದ