ಆಧ್ಯಾತ್ಮಿಕ ಶಿಕ್ಷಣವು ಏಕಾಗ್ರತೆಯನ್ನು ಹೆಚ್ಚಿಸುವ ಸಾಧನ

KannadaprabhaNewsNetwork |  
Published : Jan 06, 2025, 01:03 AM IST
5ಎಚ್ಎಸ್ಎನ್7 : ಸಾರ್ವಜನಿಕರು ಚಿತ್ರ ಪ್ರದರ್ಶನವನ್ನು ವೀಕ್ಷಿಸಿದರು. | Kannada Prabha

ಸಾರಾಂಶ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ "ಆಧ್ಯಾತ್ಮಿಕ ಚಿತ್ರ ಪಟ ಪ್ರದರ್ಶನ " ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು. ಆಧ್ಯಾತ್ಮಿಕ ಶಿಕ್ಷಣವು ಏಕಾಗ್ರತೆಯನ್ನು ಹೆಚ್ಚಿಸುವ ಸಾಧನವಾಗಿದೆ. ವರ್ತಮಾನ ಸಮಯದಲ್ಲಿ ಜಗತ್ತಿನಲ್ಲಿ ಜಾತಿ ಧರ್ಮಗಳ ನಡುವೆ ಕಲಹ, ಅಶಾಂತಿ ಮತ ಭೇದಗಳು ಹೆಚ್ಚಾಗುತ್ತಿವೆ. ಜನರ ನಡುವೆ ವೈಷಮ್ಯ ಹೆಚ್ಚುತ್ತಿದೆ. ದುಃಖ ಕಾಯಿಲೆಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಜನರಿಗೆ ಈ ಆಧ್ಯಾತ್ಮಿಕ ರಾಜಯೋಗ ಶಿಕ್ಷಣವು ನಿಜವಾದ ಶಾಂತಿ ಮತ್ತು ಆನಂದವನ್ನು ಒದಗಿಸುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಇಲ್ಲಿಯ ಪ್ರಸನ್ನ ಶ್ರೀ ಸುಬ್ರಹ್ಮಣ್ಯ ಷಷ್ಠಿ ರಥೋತ್ಸವದ ಪ್ರಯುಕ್ತ ಕೊಣನೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ "ಆಧ್ಯಾತ್ಮಿಕ ಚಿತ್ರ ಪಟ ಪ್ರದರ್ಶನ " ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು.

ಈ ಪ್ರದರ್ಶನವು ಸಂಪೂರ್ಣ ಉಚಿತವಾಗಿದ್ದು ಇಲ್ಲಿ ದೇವತೆಗಳೆಂದರೆ ಯಾರು, ಪರಮಾತ್ಮ ಶಿವನಿಂದ ದೇವತೆಗಳ ಸೃಷ್ಟಿ ಹೇಗೆ ಆಗುತ್ತದೆ, ಎಲ್ಲಾ ಧರ್ಮದವರಿಗೂ ಒಬ್ಬನೇ ಪರಮಾತ್ಮ ಹೇಗೆ, ಸ್ವರ್ಗ - ನರಕಗಳ ವ್ಯತ್ಯಾಸವೇನು, ನಾಲ್ಕು ಯುಗಗಳ ರಹಸ್ಯ, ಕರ್ಮಫಲ, ರಾಜಯೋಗದಿಂದ ಉಂಟಾಗುವ ಮಾನಸಿಕ ಏಕಾಗ್ರತೆ ಮತ್ತು ಪುಣ್ಯ ಸಂಚಯ, ಸಮಯದ ಮಹತ್ವ ಹಾಗೂ ರಾಜಯೋಗದ ಆಧಾರ ಮತ್ತು ವಿಧಿಗಳ ಬಗ್ಗೆ ಆಗಮಿಸಿದ ಭಕ್ತಾದಿಗಳಿಗೆ ಸಾರ್ವಜನಿಕರಿಗೆ ವಿವರಿಸಲಾಯಿತು.

ಈ ಸಂದರ್ಭದಲ್ಲಿ ಸೇವಾ ಕೇಂದ್ರದ ಶಿಕ್ಷಕಿ ಡಿಕೆ ಸುರೇಂದ್ರ ಮಾತನಾಡಿ, ಆಧ್ಯಾತ್ಮಿಕ ಶಿಕ್ಷಣವು ಏಕಾಗ್ರತೆಯನ್ನು ಹೆಚ್ಚಿಸುವ ಸಾಧನವಾಗಿದೆ. ವರ್ತಮಾನ ಸಮಯದಲ್ಲಿ ಜಗತ್ತಿನಲ್ಲಿ ಜಾತಿ ಧರ್ಮಗಳ ನಡುವೆ ಕಲಹ, ಅಶಾಂತಿ ಮತ ಭೇದಗಳು ಹೆಚ್ಚಾಗುತ್ತಿವೆ. ಜನರ ನಡುವೆ ವೈಷಮ್ಯ ಹೆಚ್ಚುತ್ತಿದೆ. ದುಃಖ ಕಾಯಿಲೆಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಜನರಿಗೆ ಈ ಆಧ್ಯಾತ್ಮಿಕ ರಾಜಯೋಗ ಶಿಕ್ಷಣವು ನಿಜವಾದ ಶಾಂತಿ ಮತ್ತು ಆನಂದವನ್ನು ಒದಗಿಸುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ. ಸಮಯದ ಅಭಾವವಿರುವವರಿಗೆ ಈ ಒಂದು ಚಿತ್ರಪಟ ಪ್ರದರ್ಶನ ಒಂದು ಕಿರು ಪರಿಚಯವನ್ನ ಕಡಿಮೆ ಸಮಯದಲ್ಲಿ ಒದಗಿಸುತ್ತದೆ. ಎಲ್ಲರೂ ಇದರ ಲಾಭವನ್ನು ಪಡೆಯಿರಿ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಆಗಮಿಸಿದವರಿಗೆ 2025ನೇ ಇಸವಿಯ ಕ್ಯಾಲೆಂಡರ್‌, ಸಾಹಿತ್ಯಗಳನ್ನು ಅನ್ನು ಉಚಿತವಾಗಿ ನೀಡಲಾಯಿತು.

ಪಂಚಾಯತಿ ಸದಸ್ಯರಾದ ಸಿದ್ದರಾಜು, ಸತ್ಯಸಾಯಿ ಸೇವಾ ಸಮಿತಿಯ ಕಾಳೇಗೌಡ್ರು ಸಾಯಿ ಪ್ರಸಾದ್ ರಾಮೇಗೌಡ ದೇವರಾಜೇಗೌಡರು, ಶಂಕರಮ್ಮ ಲಕ್ಷ್ಮಿ ಸುಜಾತ , ಕೊಣನೂರು ಬ್ರಹ್ಮ ಕುಮಾರೀಸ್ ನ ಬಿ ಕೆ ಸುನಂದ, ವಸಂತಮ್ಮ, ಬಿಕೆ ರಾಧಾ, ಬಿಕೆ ನಾಗರತ್ನ, ಕೊಣನೂರು ಸೂರ್ಯನಾರಾಯಣ , ನಾಗರಾಜು, ಪೇಪರ್‌ ಲೋಕೇಶ್, ರವಿ, ರಾಮನಾಥಪುರ ಮಂಜಣ್ಣ ಮತ್ತು ಅನೇಕ ಭಕ್ತಾದಿಗಳು, ಸುತ್ತಮುತ್ತಲಿನ ಊರಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಲಾಭ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರಕಾರಿಯಲ್ಲಿ ಹಾನಿಕಾರಕ ಅಂಶ ಪತ್ತೆ: ಶೀಘ್ರ ಸೂಕ್ತ ಮಾರ್ಗಸೂಚಿ
ಸಿಲಿಂಡರ್‌ಗೆ ಹಾಹಾಕಾರ: ಊಟ, ತಿಂಡಿ ಹರೋಹರ!