ಡಂಬಳ: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದು ಅವಶ್ಯಕ ಎಂದು ಗ್ರಾಪಂ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ ಹೇಳಿದರು.
ಎಸ್ಡಿಎಂಸಿ ಅಧ್ಯಕ್ಷ ಗೌಸಿದ್ಧಪ್ಪ ಹಾದಿಮನಿ ಮಾತನಾಡಿ, ಮಕ್ಕಳ ಆಸಕ್ತಿ ಗುರುತಿಸಿ ಪಾಲಕರು ಕ್ರೀಡಾ ಶಿಕ್ಷಕರು ಅವರಿಗೆ ಪ್ರೋತ್ಸಾಹ ನೀಡುವುದರ ಮೂಲಕ ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಬೇಕು. ಗ್ರಾಮೀಣ ಮಟ್ಟದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡುವ ಮಕ್ಕಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದು ಹೇಳಿದರು.
ಬಾಲಕರ ಗುಂಪು ಆಟಗಳಾದ ಖೋ ಖೋ, ಥ್ರೋ ಬಾಲ್, ವಾಲಿಬಾಲ್, ಕಬಡ್ಡಿಯಲ್ಲಿ ಎಂಸಿಎಸ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ, ಬಾಲಕಿಯರ ಗುಂಪು ಆಟದಲ್ಲಿ ಥ್ರೋಬಾಲ್, ಕಬಡ್ಡಿ ಕೆಜಿಎಸ್ ಶಾಲೆ, ಖೋ ಖೋ ಕೆಜಿಬಿವಿ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದರು.100 ಮೀ ಓಟದಲ್ಲಿ ಮಂಜುನಾಥ ಬೆನಾಳ(ಡಿಪಿಇಪಿ) ಪ್ರಥಮ, ಸೂರಜ ಲಮಾಣಿ (ಎಂಸಿಎಸ್) ದ್ವೀತಿಯ, 200ಮೀ ಓಟದಲ್ಲಿ ಅನಿಲರಾಜೂರ (ಡಿಪಿಇಪಿ)ಪ್ರಥಮ, ಪಾಂಡುರಂಗ ಆದಮ್ಮನವರ (ಡಿಪಿಇಪಿ) ದ್ವೀತಿಯ, 400ಮೀ ಓಟದಲ್ಲಿ ಯಲ್ಲಪ್ಪ ಕದಡಿ(ಡಿಪಿಇಪಿ)ಪ್ರಥಮ, ಅಭಿಷೇಕ ಬಂಡಿ (ಎಂಸಿಎಸ್), 80ಮೀ ಅಡೆತಡೆ ಓಟದಲ್ಲಿ ಸೂರಜ ಲಮಾಣಿ (ಎಂಸಿಎಸ್) ಪ್ರಥಮ, ಯಲ್ಲಪ್ಪ ಕದಡಿ (ಡಿಪಿಇಪಿ)ದ್ವೀತಿಯ, 600ಮೀ ಓಟದಲ್ಲಿ ಹನುಮಂತ ಶಿರುಂದ ಪ್ರಥಮ, ಶಿವಾನಂದ ಹಾದಿಮನಿ ದ್ವೀತಿಯ, 400ಮೀ ರಿಲೆಯಲ್ಲಿ ದೇವರಾಜ ದಾಸರು ಸಂಗಡಿಗರು, ಬಾಲಕೀಯರ ವೈಯಕ್ತಿಕ ಕ್ರೀಡಾ ಕೂಟದಲ್ಲಿ 100ಮೀ ಓಟದಲ್ಲಿ ನೇತ್ರಾ ಒಂಟೆಲಭೋವಿ (ರಾಣಿಚೆನ್ನಮ್ಮ) ಪ್ರಥಮ, ಅರ್ಪಿತಾ ಲಮಾಣಿ ದ್ವೀತಿಯ, 200ಮೀ ಓಟದಲ್ಲಿ ನೇತ್ರಾ ಒಂಟೆಲಭೋವಿ ಪ್ರಥಮ, ಭಾಗ್ಯ ಬೂದಿಹಾಳ ದ್ವೀತಿಯ, 400 ಮೀ ಓಟದಲ್ಲಿ ಚೈತ್ರಾ ಕೂಲಿ ಪ್ರಥಮ, ಪ್ರೀತಿ ಪೂಜಾರ ದ್ವೀತಿಯ, 600ಮೀ ಓಟದಲ್ಲಿ ಚಂದ್ರಿಕಾ ತಳವಾರ ಪ್ರಥಮ, ಅಕ್ಷತಾ ಜಕ್ಕಲಿ,80 ಮೀ ಅಡತಡೆ ಓಟದಲ್ಲಿ ನೇತ್ರಾ ಒಂಟೆಲಭೋವಿ ಪ್ರಥಮ, ಅರ್ಪಿತಾ ಲಮಾಣಿ ದ್ವೀತಿಯ, 400ಮೀ ರಿಲೆಯಲ್ಲಿ ನೇತ್ರಾ. ಮಲ್ಲಪ್ಪ ಒಂಟೆಲಭೋವಿ ಸಂಗಡಿಗರು.