ಹಾನಗಲ್ಲ: ಶಿಕ್ಷಣವೆಂದರೆ ಉತ್ತಮ ಅಂಕಪಟ್ಟಿಯೊಂದಿಗೆ ತೇರ್ಗಡೆಯಾಗುವುದರ ಜೊತೆಗೆ ಪಠ್ಯೇತರ ಕ್ರೀಡೆಗಳಲ್ಲಿ ಸಹಭಾಗಿತ್ವ ಹೊಂದಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದೂ ಅತ್ಯಂತ ಮುಖ್ಯವಾಗಿ ಬೇಕಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನಿಕಟ್ಟಿ ಹೇಳಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಜನತಾ ಶಿಕ್ಷಣ ಸೌಹಾರ್ದ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ಆಟಗಳಲ್ಲಿ ಗೆಲುವಿಗಾಗಿ ಪ್ರಯತ್ನ ಎಷ್ಟು ಮುಖ್ಯವೋ ಒಮ್ಮೊಮ್ಮೆ ಸೋಲನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ಯಾರಿಗೆ ಸೋಲು-ಗೆಲುವಿನ ನಿರ್ಧಿಷ್ಟ ಕಾರಣ ತಿಳಿದಿರುತ್ತದೆಯೋ ಆತ ಗೆಲುವಿನತ್ತ ದಾಪುಗಾಲು ಹಾಕಬಲ್ಲ. ಆಟದಲ್ಲಿ ದಕ್ಷತೆಯ ಜೊತೆಗೆ ಎಚ್ಚರಿಕೆಯೂ ಬಹುಮುಖ್ಯ. ಪಾಠ-ಆಟಗಳೆರಡೂ ನಮ್ಮ ಬದುಕಿನ ದಾರಿಯನ್ನು ನಿರ್ಧರಿಸುವ ಮುಖ್ಯ ಸಂಗತಿಗಳು ಎಂದರು.
ಸಂಸ್ಥೆಯ ನಿರ್ದೇಶಕ ನಾಗರಾಜ ಉದಾಸಿ ವ್ಹಾಲಿಬಾಲ್ ಸ್ಪರ್ಧೆಗೆ ಚಾಲನೆ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕಿ ಲಕ್ಷ್ಮೀ ಪಟಗಾರ ಪ್ರತಿಜ್ಞಾವಿಧಿ ಬೋಧಿಸಿದರು. ನಿರ್ದೇಶಕರಾದ ರವಿ ಮೂಡ್ಲಿಯವರ, ಸಿ.ಮಂಜುನಾಥ್, ಯಲ್ಲಪ್ಪ ಶೇರಖಾನಿ, ಭಾಸ್ಕರ ಹುಲಮನಿ, ರೇಖಾ ಶೆಟ್ಟರ, ಬಿ.ಎಸ್. ಕೂಕನಗೌಡ್ರ, ಅಶೋಕ ಹಂಗರಗಿ, ಮಂಜುಳಾ ಬೇದ್ರೆ, ಕಾರ್ಯದರ್ಶಿ ಎಂ.ಎಚ್. ಬಳಿಗಾರ, ಮುಖ್ಯ ಶಿಕ್ಷಕ ಸಿ.ಎಸ್. ಲಂಗಟಿ ಹಾಗೂ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕಿ ಕೆ.ಕೆ. ರೂಪಶ್ರೀ ಸ್ವಾಗತಿಸಿದರು. ಶಿಕ್ಷಕ ನಿರಂಜನ ಗುಡಿ ನಿರೂಪಿಸಿದರು. ಶಿಕ್ಷಕ ಎಸ್.ಜಿ. ಗಿರಿಯಣ್ಣನವರ ವಂದಿಸಿದರು.