ಕನ್ನಡಪ್ರಭ ವಾರ್ತೆ ಮಹಾಲಿಂಗಪುರಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವುದು ಅತೀ ಅವಶ್ಯವಾಗಿದೆ. ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಪ್ರತಿಯೊಬ್ಬರು ಒಂದಿಲ್ಲೊಂದು ಕ್ರೀಡಾಚಟುವಟಿಕೆಯಲ್ಲಿ ನಿತ್ಯ ಒಂದು ಗಂಟೆಯಾದರೂ ಮೈದಾನದಲ್ಲಿ ಕಳೆಯುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಅರೋಗ್ಯ ಹೊಂದಬಹುದು ಎಂದು ತೇರದಾಳ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.
ಅತಿಥಿಗಳಾಗಿ ತಂಡಗಳ ಮಾಲೀಕರಾದ ಮಹಾಲಿಂಗಪ್ಪ ಕೌಜಲಗಿ, ಸಿದ್ದುಗೌಡ ಪಾಟೀಲ, ಬಲವಂತಗೌಡ ಪಾಟೀಲ, ಬಾಳಕೃಷ್ಣ ಮಾಳವದೆ, ಬಸವರಾಜ ಕರೆಹೊನ್ನ, ಅಪ್ಪಸಾಬ ನಾಲಬಂದ್, ಮಂಜು ಬಕರೇ, ಲಕ್ಕಪ್ಪಣ್ಣ ಭಜಂತ್ರಿ, ಇಜಾಜ್ ಯಾದವಾಡ, ಮಹೇಶ ಮನ್ನಯ್ಯನವರಮಠ, ಶ್ರೀಕಾಂತ ಮಾಗಿ ಉಪಸ್ಥಿತರಿದ್ದರು. ಇದೇ ವೇಳೆ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮೊದಲ ದಿನ ಎರಡು ಪಂದ್ಯಗಳು ನಡೆದವು. ಅಪ್ಪಾಜಿ ತಂಡ ಮತ್ತು ಎಸ್.ಆರ್.ಪಿ ಫೌಂಡೇಶನ್ ಮಧ್ಯೆ ನಡೆದ ಮೊದಲ ಪಂದ್ಯದಲ್ಲಿ ಎಸ್.ಆರ್. ಪಿ ಫೌಂಡೇಶನ್ ತಂಡ ಗೆಲುವಿನ ನಗೆ ಬೀರಿತು. ಎಲ್.ಬಿ. ಬಾಯ್ಸ್ ಮತ್ತು ಬಿಎಲ್ ಪಿ ಲೈನ್ಸ್ ತಂಡಗಳ ಮಧ್ಯೆ ನಡೆದ ಎರಡನೇ ಪಂದ್ಯ ಸಮಬಲ ಸಾಧಿಸಿ ರೋಚಕ ಟೈಗೊಂಡು ಕುತೂಹಲ ಕೆರಳಿಸಿತು. ಎರಡು ಓವರಗಳ ಪವರ್ ಪ್ಲೆ ರನ್ ರೇಟ್ ಆಧಾರದ ಮೇಲೆ ಬಿಎಲ್ ಪಿ ಲೈನ್ಸ್ ತಂಡ 3 ರನಗಳಿಂದ ಗೆದ್ದು ಬಿಗಿತು.ಮೊದಲ ಪಂದ್ಯದ ಪಂದ್ಯ ಪುರಷೋತ್ತಮನಾಗಿ ಅವಿನಾಶ ಜಾಧವ, ಬೆಸ್ಟ್ ಬೌಲರ್ ಆಗಿ ಬಸವರಾಜ ರಾಯರ ಪ್ರಶಸ್ತಿ ಪಡೆದುಕೊಂಡರು, ಎರಡನೇ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಮಲ್ಲು ಪಶ್ಚಾಪುರ ಪಡೆದುಕೊಂಡರು. ಮೂರನೇ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಇದರಿಂದಾಗಿ ಮುಂದಿನ ಪಂದ್ಯಗಳು ಜರುಗದೆ ಮುದೂಡಲಾಯಿತು.
ಈ ಸಂದರ್ಭದಲ್ಲಿ ಯಾಸೀನ್ ಪಾಂಡು, ಬಸೀರ್ ಕೆಂಭಾವಿ, ರಾಜು ಶೆಟ್ಟರ್, ಸಿಕಂದರ್ ಸಾಂಗ್ಲಿಕರ, ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು, ಪ್ರಕಾಶ ಕರ್ಲಟ್ಟಿ, ಮಲ್ಲಿಕಾರ್ಜುನ ಮನ್ನಯ್ಯನವರಮಠ, ಮಾನಿಂಗ ಮಾಳಿ, ಅಲ್ಲಭಕ್ಷ ವೀಕ್ಷಕ ವಿವರಣೆ ನೀಡಿದರು. ಚಂದ್ರು ಮೊರೆ ನಿರೂಪಿಸಿದರು. ಮೀರಾ ತಟಗಾರ ಸ್ವಾಗತಿಸಿದರು. ಮಹಾದೇವ ಕಡಬಲ್ಲವರ ವಂದಿಸಿದರು.