
ಕನ್ನಡಪ್ರಭ ವಾರ್ತೆ ಮುದಗಲ್
ಕ್ರೀಡಾಕೂಟಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಪಕೀರೇಶ್ವರ ಸ್ವಾಮಿಗಳು, ಕ್ರೀಡೆಯಿಂದ ಮಕ್ಕಳಲ್ಲಿ ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ಕ್ರೀಡಾ ಸ್ಫೂರ್ತಿ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಗೂ ಸಮಾನ ಆದ್ಯತೆ ನೀಡಿ ತಮ್ಮಲ್ಲಿರುವ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚಂದ್ರಶೇಖರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಕ್ರೀಡಾಕೂಟದ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಕ್ರೀಡಾಸ್ಫೂರ್ತಿಯಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುಸಂಗಯ್ಯ ಗಣಾಚಾರಿ, ಎಸ್.ಎನ್. ಅಕ್ಕಿ, ಬನ್ನಿಗೋಳ ವಲಯದ ಸಿಆರ್ಪಿ ಶ್ರೀನಿವಾಸ ರೆಡ್ಡಿ, ಮುದಗಲ್ ಸಿ ಆರ್ ಪಿ ರಾಮಚಂದ್ರ ಡವಳೆ ಮಹಾಂತೇಶ ಹಳ್ಳೂರ, ಮಹಾಂತೇಶ ಸಜ್ಜನ್, ರಿಯಾಜ್, ಮಾರುತಿ, ರುದ್ರಗೌಡ, ಸಿದ್ರಾಮಯ್ಯ ತಾತ, ಗುಂಡನಗೌಡ, ರಾಮಣ್ಣ, ಸುಜೀತ್, ಮಲ್ಲಿಕಾರ್ಜುನ ಗೌಡರ, ಮಹೇಶ, ರಾಜಸಾಬ ಮು.ಗು., ದಾದಾಪೀರ್,ಸಿಆರ್ಪಿ ಶ್ರೀನಿವಾಸ ರೆಡ್ಡಿ, ಸೋಮಶೇಖರ್,