ದೈಹಿಕ ಸಾಮರ್ಥ್ಯ ವೃದ್ಧಿಗೆ ಕ್ರೀಡೆ ಸಹಕಾರಿ

KannadaprabhaNewsNetwork |  
Published : Aug 31, 2024, 01:31 AM IST
30ಶಿರಾ2 ಶಿರಾ ತಾಲೂಕು ಹೂಯಿಲ್ ದೊರೆ ಗ್ರಾಮದ ಶ್ರೀ ಶಾರದಾ ಇಂಟರ್ನ್ಯಾಷನಲ್ ಕೇಂಬ್ರಿಡ್ಜ್ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಪ್ರಾಂಶುಪಾಲ ನದೀಮ್ ಅಜ್ಮತ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಶಿಕ್ಷಣದ ಜತೆಗೆ ಕ್ರೀಡೆಯು ಪ್ರತಿಯೊಬ್ಬ ಮಗುವಿನ ದೈಹಿಕ ಸಾಮರ್ಥ್ಯ ಭೌತಿಕ ಬೆಳವಣಿಗೆ ಮನೋವಿಜ್ಞಾನಿಕ ಅಂಶಗಳನ್ನು ಹೆಚ್ಚಿಸುತ್ತದೆ ಎಂದು ಪ್ರಾಂಶುಪಾಲ ನದೀಮ್ ಅಜ್ಮತ್ ಹೇಳಿದರು.

ಶಿರಾ: ಶಿಕ್ಷಣದ ಜತೆಗೆ ಕ್ರೀಡೆಯು ಪ್ರತಿಯೊಬ್ಬ ಮಗುವಿನ ದೈಹಿಕ ಸಾಮರ್ಥ್ಯ ಭೌತಿಕ ಬೆಳವಣಿಗೆ ಮನೋವಿಜ್ಞಾನಿಕ ಅಂಶಗಳನ್ನು ಹೆಚ್ಚಿಸುತ್ತದೆ ಎಂದು ಪ್ರಾಂಶುಪಾಲ ನದೀಮ್ ಅಜ್ಮತ್ ಹೇಳಿದರು.

ತಾಲೂಕಿನ ಹೂಯಿಲ್ ದೊರೆ ಗ್ರಾಮದ ಶ್ರೀ ಶಾರದಾ ಇಂಟರ್‌ನ್ಯಾಷನಲ್ ಕೇಂಬ್ರಿಡ್ಜ್ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಮೇಜರ್ ಧ್ಯಾನ್‌ಚಂದ್ ದೇಶಕ್ಕಾಗಿ ಹಾಕಿಯಲ್ಲಿ ಅನೇಕ ಗೋಲುಗಳನ್ನು ಬಾರಿಸಿ ಪದಕ ಗೆದ್ದರು. ದೇಶದ ಕ್ರೀಡಾ ಜಗತ್ತಿನಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಕೆಲಸ ಮಾಡಿದರು ಎಂದು ಹೇಳಿದರು.

ಉಪ ಪ್ರಾಂಶುಪಾಲ ನವೀನ್ ಕುಮಾರ್, ಬಾಲೋಧ್ಯಾನ ಮುಖ್ಯ ಶಿಕ್ಷಕಿ ಕಾವ್ಯ ಮಹೇಶ್, ದೈಹಿಕ ಶಿಕ್ಷಣ ಶಿಕ್ಷಕರಾದ ಕುಮಾರ್ ಎನ್.ಆರ್., ಕಿರಣ್ ಕುಮಾರ್, ನರಸಿಂಹಮೂರ್ತಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ