ಸಂಡೂರು: ಸಂಡೂರು ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ (ಎಸ್ಪಿಎಸ್ ಬ್ಯಾಂಕ್) 2025-26ನೇ ಆರ್ಥಿಕ ವರ್ಷದಲ್ಲಿ ₹3.13 ಕೋಟಿ ಲಾಭಗಳಿಸಿದ್ದು, ತೆರಿಗೆ ಪಾವತಿಸಿದ ನಂತರ ₹2.36 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಬ್ಯಾಂಕಿನ ನೂತನ ಅಧ್ಯಕ್ಷ ಡಾ. ಎಚ್.ಆರ್. ಹಾಲಂಬಿ ತಿಳಿಸಿದರು.
2025-26ನೇ ಆರ್ಥಿಕ ವರ್ಷದ ಅಂತ್ಯದಲ್ಲಿ ಬ್ಯಾಂಕಿನ ಠೇವಣಿ 134.33 ಕೋಟಿ ಇದ್ದು, ಸಾಲ ಮತ್ತು ಮುಂಗಡಗಳು ರೂ. 40.04 ಕೋಟಿ ಇದೆ. ಈ ಅವಧಿಯಲ್ಲಿ ಬ್ಯಾಂಕ್ ಒಟ್ಟಾರೆ ₹174.37 ಕೋಟಿ ವಹಿವಾಟು ನಡೆಸಿದೆ. ಬ್ಯಾಂಕಿನ ಬಂಡವಾಳದ ನಿಧಿಯು ₹14.75 ಕೋಟಿಯಿಂದ ₹16.53 ಕೋಟಿಗೆ ಏರಿಕೆಯಾಗಿದೆ. ಪ್ರತಿ ವರ್ಷದಂತೆ ಈ ಸಾಲಿನಲ್ಲಿಯೂ ಬ್ಯಾಂಕಿನ ಸಾಲ ವಸೂಲಾತಿ ಉತ್ತಮವಾಗಿದ್ದು, ನಿವ್ವಳ ಎನ್ಪಿಎ (ಅನುತ್ಪಾದಕ ಸ್ವತ್ತು) ಶೇ. 0 ಆಗಿದೆ. ಡಿಜಿಟಲ್ ಬ್ಯಾಂಕಿಂಗ್ ವಹಿವಾಟು ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ.
ಸದಸ್ಯರ ವಿಶ್ವಾಸ, ಸಹಕಾರ ಮತ್ತು ಪಾಲ್ಗೊಳ್ಳುವಿಕೆಯಲ್ಲಿ ಅಡಕವಾಗಿದೆ. ಮುಂದಿನ ದಿನಗಳಲ್ಲಿ ಬ್ಯಾಂಕಿನ ಸದಸ್ಯರು ಸಹಕಾರ ಹಾಗೂ ಸಲಹೆಗಳನ್ನು ನೀಡುವ ಮೂಲಕ ಬ್ಯಾಂಕಿನ ಸಮಗ್ರ ಅಭಿವೃದ್ಧಿಗೆ ಕೈಜೋಡಿಸುವಂತೆ ತಿಳಿಸಿದರು.ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಕೆ.ಎಸ್. ನಾಗರಾಜ ಹಾಗೂ ಸಂಸ್ಥಾಪಕ ಉಪಾಧ್ಯಕ್ಷ ಸಿ. ರವಿಶಂಕರ್ ಅವರು, ಭಾರತೀಯ ರಿಸರ್ವ್ ಬ್ಯಾಂಕ್ನ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ತಿದ್ದುಪಡಿ ಅನ್ವಯ, ಬ್ಯಾಂಕಿನ ನೂತನ ಆಡಳಿತ ಮಂಡಳಿ ಆಯ್ಕೆ, ಬ್ಯಾಂಕಿನ ಪ್ರಗತಿಯ ಕುರಿತು ವಿವರಿಸಿದರು.
ನಿರ್ದೇಶಕರಾದ ಕೆ. ವೀರಪ್ಪ ಅವರು ಲೆಕ್ಕ ಪರಿಶೋಧಕರು. ಆಂತರಿಕ ಲೆಕ್ಕ ಪರಿಶೋಧಕರ ನೇಮಕ ಕುರಿತು, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರು ಲೆಕ್ಕ ಪರಿಶೋಧಕರ ವರದಿ, ಬ್ಯಾಂಕಿನ ಅಧಿಕಾರಿ ಕುಮಾರ್ ಎ. ಅವರು 2026-27ನೇ ಸಾಲಿನ ವಾರ್ಷಿಕ ಕಾರ್ಯಾಚರಣೆ, ರಾಮಚಂದ್ರ ಮಸೂತಿಯವರು ವಾರ್ಷಿಕ ಬಜೆಟ್ ಅನುಮೋದಿಸುವ ಕುರಿತು, ಕೊಟ್ರೇಶ್ ಎ ಅವರು ಕಳೆದ ಸಾಲಿನಲ್ಲಿ ಸೇರಿಸಲ್ಪಟ್ಟ ಹಾಗೂ ಸಮಾಪನೆಗೊಂಡ ಸದಸ್ಯತ್ವಗಳ ವರದಿ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ನಿರ್ದೇಶಕ ಸಿದ್ದಪ್ಪ ಅಂಕಮನಾಳ, ಜೋತಿ ನಂಜುಂಡಪ್ಪ, ಗಂಗಮ್ಮ ಬಿ., ಹಾಲಿ ನಿರ್ದೇಶಕ ಕೆ.ಎಸ್. ನಿಕಿಲ್, ಅನುಪ್ ಸಿ, ಜೈ ಭಾಸ್ಕರ್ ಕೆ., ನಾರಾಯಣ್ ಆಚಾರ್ ಬಿ., ಸಂತೋಷ ಕುಮಾರ್, ವನಜಾಕ್ಷೀ ಹೊಂಬಳ್, ಮಧುಮತಿ ಎ., ಮಂಜುಳಾ ಜೆ.ಎಂ., ನಾಗರಾಜ ಗುಂಡಿ, ಸಹಾಯಕ ವ್ಯವಸ್ಥಾಪಕಿ ಶ್ವೇತಾ, ಅಧಿಕಾರಿಗಳಾದ ವಿಜಯಲಕ್ಷ್ಮೀ, ಪೂಜಾ ಎ., ಕಿರಿಯ ಅಧಿಕಾರಿ ವಿಶ್ವನಾಥ ಜಿ., ಜಗದೀಶ್ ಎಂ., ಬ್ಯಾಂಕಿನ ಸದಸ್ಯರು ಉಪಸ್ಥಿತರಿದ್ದರು.