ಸಾಧಕರ ಜೀವನ ಪಾಠ ಯುವ ಜನರಿಗೆ ಸ್ಪೂರ್ತಿ ಆಗಬೇಕು

KannadaprabhaNewsNetwork |  
Published : Sep 18, 2024, 01:51 AM IST
1 | Kannada Prabha

ಸಾರಾಂಶ

ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಯುವಕರಿಗೆ ಇವೆರಡೂ ಕೃತಿಗಳು ಸ್ಪೂರ್ತಿದಾಯಕವಾಗಿವೆ.

ಕನ್ನಡಪ್ರಭ ವಾರ್ತೆ ಮೈಸೂರುಹಿರಿಯ ಪತ್ರಕರ್ತ ಮತ್ತು ಲೇಖಕ ಎಸ್. ಪ್ರಕಾಶ್ ಬಾಬು ಅವರು ಬರೆದಿರುವ ''ಅವರು ಹೋದ ಮೇಲೆ'' ಮತ್ತು ''ಸಿನಿ ಸಾಧಕರ ಟರ್ನಿಂಗ್ ಪಾಯಿಂಟ್'''' ಎಂಬ ಕೃತಿಗಳನ್ನು ಮಂಗಳವಾರ ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಿಡುಗಡೆಗೊಳಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಿಮಾಲಯ ಫೌಂಡೇಷನ್ ಮತ್ತು ಬೆಂಗಳೂರಿನ ಸಿವಿಜಿ ಪಬ್ಲಿಕೇಷನ್ಸ್ ಜಂಟಿಯಾಗಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ, ಪತ್ರಕರ್ತರಾಗಿ ಸಾಹಿತ್ಯ ರೂಢಿಸಿಕೊಂಡಿರುವ ಎಸ್. ಪ್ರಕಾಶ್ ಬಾಬು ಅವರ ಅವರು ಹೋದಮೇಲೆ ಮತ್ತು ಸಿನಿ ಸಾಧಕರ ಟರ್ನಿಂಗ್ ಪಾಯಿಂಟ್ ಎಂಬ ಎರಡು ಕೃತಿಗಳು ಸಾಧನೆ ಮಾಡಿ ಗತಿಸಿದ ಮತ್ತು ಸಾಧನೆ ಮಾಡುತ್ತಿರುವ ಸಾಧಕರ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ತಿಳಿಸುತ್ತದೆ ಎಂದರು.ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಯುವಕರಿಗೆ ಇವೆರಡೂ ಕೃತಿಗಳು ಸ್ಪೂರ್ತಿದಾಯಕವಾಗಿವೆ. ಇದೊಂದು ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಪ್ರಾಕಾರವಾಗಿಯೂ ಈ ಕೃತಿಗಳು ಗುರುತಿಸಿಕೊಳ್ಳುತ್ತವೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಪ್ರೊ. ಸಿಪಿಕೆ ಮಾತನಾಡಿ, ಅವರು ಹೋದಮೇಲೆ ರಾಷ್ಟ್ರಕವಿ ಕುವೆಂಪು, ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ್ ಅರಸ್ ಮತ್ತು ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜಕುಮಾರ್ ಸೇರಿದಂತೆ 35 ಗಮನಾರ್ಹ ವ್ಯಕ್ತಿಗಳು ಸಮಾಜದ ಮೇಲೆ ಶಾಶ್ವತವಾದ ಪ್ರಭಾವ ಹೇಗೆ ಬೀರಿದ್ದಾರೆ ಎಂಬುದನ್ನು ಎತ್ತಿ ತೋರಿಸುತ್ತದೆ. ಹಾಗೇ, ಸಿನಿ ಸಾಧಕರ ಟರ್ನಿಂಗ್ ಪಾಯಿಂಟ್ ಪುಸ್ತಕವು ಹಿರಿಯ ನಟಿಯರಾದ ಭಾರತಿ, ಜಯಂತಿ ಅವರನ್ನಲ್ಲದೆ, ಈಗಿನ ನಟರಾದ ನಟ ದರ್ಶನ್ ತೂಗುದೀಪ ಸೇರಿದಂತೆ ಹಲವಾರು ಸಿನಿ ಕಲಾವಿದರು ತಮ್ಮ ವೃತ್ತಿ ಬದುಕಿನ ಆರಂಭದಲ್ಲಿ ಸಾಧನೆಯ ಬೆನ್ನು ಹತ್ತಿ ಗೆದ್ದ ತಿರುವಿನ ಬಗ್ಗೆ ಆಸಕ್ತಿದಾಯಕ ಒಳನೋಟಗಳನ್ನು ಹಂಚಿಕೊಳ್ಳುತ್ತದೆ ಎಂದು ಹೇಳಿದರು.ಆಶೀರ್ವಚನ ನೀಡಿ ಮಾತನಾಡಿದ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯಶ್ರೀ ದತ್ತ ವಿಜಯಾನಂದ ತೀರ್ಥರು, ಎಸ್. ಪ್ರಕಾಶ್ ಬಾಬು ಅವರು ಬರೆದ ಎರಡೂ ಕೃತಿಗಳಲ್ಲಿ ಸಿನಿಮಾ ಕ್ಷೇತ್ರದವರ ವಿಷಯಗಳೇ ಹೆಚ್ಚಿದ್ದರೂ, ಅದರಲ್ಲಿರುವ ಸಾಹಿತ್ಯ ಸರಸ್ವತಿ ಅಕ್ಕರೆಯಿಂದ ಸಾಧಕರನ್ನು ಕರೆದು ಪ್ರೋತ್ಸಾಹಿಸುವಂತಿರುವ ಕಾರಣಕ್ಕೆ ಮತ್ತು ಲೇಖಕ ಎಸ್. ಪ್ರಕಾಶ್ ಬಾಬು ಶ್ರೀದತ್ತ ಪೀಠಕ್ಕೆ ನೀಡುತ್ತಿರುವ ನಿರಂತರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಶ್ರೀಗಣಪತಿ ಸಚ್ಚಿದಾನಂದಸ್ವಾಮೀಜಿ ಕೃತಿಗಳ ಬಿಡುಗಡೆ ಮಾಡಿ ಹರಸಿದ್ದಾರೆ ಎಂದರು.ಕೃತಿಯಲ್ಲಿ ಅಡಗಿರುವ ಸಾಧನಾ ಸ್ಫೂರ್ತಿಯನ್ನು ಯುವ ಜನರು ಅಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಸಾಧನೆಯ ಉತ್ತುಂಗಕ್ಕೆ ಏರಬೇಕು ಎಂದು ಕರೆ ನೀಡಿದರು.ಮುಖ್ಯ ಅತಿಥಿಯಾಗಿ ಹಿರಿಯ ಪತ್ರಕರ್ತ ಕೆ.ಜೆ. ಕುಮಾರ್, ಸಮಾಜ ಸೇವಕ ಕೆ. ರಘುರಾಮ್ ವಾಜಪೇಯಿ, ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ಡಿ. ರವಿಕುಮಾರ್, ಲೇಖಕ ಎಸ್. ಪ್ರಕಾಶ್ ಬಾಬು ಮತ್ತು ವ್ಯಂಗ್ಯಚಿತ್ರಕಾರ ಎಂ.ವಿ. ನಾಗೇಂದ್ರ ಬಾಬು ಇದ್ದರು.ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿಮಾಲಯ ಫೌಂಡೇಷನ್ ಅಧ್ಯಕ್ಷ ಎನ್. ಅನಂತ ವಂದಿಸಿದರು. ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ವಿ. ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ