ಕನ್ನಡಪ್ರಭ ವಾರ್ತೆ ಬೀಳಗಿ
ಪಟ್ಟಣದ ಕಂಬಾರ ಅಗಸಿಯಲ್ಲಿರುವ ಮರಗಮ್ನ ದೇವಿ ದೇವಾಲಯದಲ್ಲಿ ಕಂಬಾರ ಓಣಿಯ ಹಿರಿಯರು-ಯುವಕರು ರಾಮ ಲಲ್ಲಾ ಪ್ರಾಣ ಪ್ರತಿಷ್ಠಾನದ ಸಂಭ್ರಮಾಚರಣೆ ಮಾಡಿ ಆಗಮಿಸಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿದರು. ಗೋವಿನದಿನ್ನಿ ಆಂಜನೇಯ ದೇವಸ್ಥಾನದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಸಿಬ್ಬಂದಿ ಅಯೋಧ್ಯೆಯ ರಾಮಮಂದಿರ ಸಂಭ್ರಮಾಚರಣೆ ಅಂಗವಾಗಿ ಅನ್ನ ಸಂತರ್ಪಣೆ ಮಾಡಿದರು. ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾನ ರಾಮೋತ್ಸವ ವಿಜೃಂಭಣೆಯಿಂದ ಜರುಗಿತು.
ವಿಶ್ವ ಹಿಂದು ಪರಿಷತ್ ರಾಜ್ಯ ಸಂಯೋಜಕ ಪುಂಡಲೀಕ ದಳವಾಯಿ, ಮಂತ್ರಾಕ್ಷತೆ ವಿತರಣೆ ತಾಲೂಕು ಸಂಚಾಲಕ ವಿಠ್ಠಲ ಯತ್ನಟ್ಟಿ, ಮುತ್ತು ಬೋರ್ಜಿ, ರಾಮಚಂದ್ರ ನಲವಡೆ, ಲಕ್ಷ್ಮಣ ತೋಟದ, ಸಾಬಣ್ಣ ಮೇರಾಕಾರ, ಶಶಿಕುಮಾರ ಕೊಡತಗೇರಿ, ಸಿದ್ದು ಮಾದರ, ದಾನೇಶ ಹಿರೇಮಠ, ಮೊನೇಶ ಮುರ್ಜಾವರಮಠ, ಆನಂದ ನಿಂಬಾಳಕರ, ಉಮೇಶ ವಾಲಿಕಾರ, ಸಿದ್ದು ಪಾತ್ರೋಟ, ಗಂಗಾಧರ ಕಲಬುರಗಿ ಮತ್ತಿತರರು ಇದ್ದರು.