ರಾಮನಗರ: ದಕ್ಷಿಣ ಅಯೋಧ್ಯೆ ಎಂದೇ ಪ್ರಸಿದ್ಧಿ ಪಡೆದಿರುವ ರಾಮನೂರಿನಲ್ಲಿ ಲೋಕ ಕಲ್ಯಾಣಾರ್ಥ ಹಾಗೂ ಶ್ರೀ ರಾಮೋತ್ಸವಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ 101 ಪುರೋಹಿತರಿಂದ ಶ್ರೀ ರಾಮತಾರಕ ಯಜ್ಞ ನೆರವೇರಲಿದೆ.
ರಾಮನಗರದ ರಾಮದೇವರ ಬೆಟ್ಟದಲ್ಲಿರುವ ಶ್ರೀ ಪಟ್ಟಾಭಿರಾಮನ ದೇಗುಲಕ್ಕೆ ಸಾಗುವ ಮಾರ್ಗದಲ್ಲಿರುವ ಶ್ರೀರಾಮನ ಭಂಟ ಅಭಯ ಆಂಜನೇಯನ ಬೃಹತ್ ಮೂರ್ತಿಯ ಸನಿಹದಲ್ಲಿಯೇ ಇರುವ ಬನ್ನಿಮಂಟಪದಲ್ಲಿ ಜನವರಿ 15ರಂದು ಶ್ರೀ ರಾಮತಾರಕ ಯಜ್ಞ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳು ಸಮಾರೋಪಾದಿಯಲ್ಲಿ ಸಾಗಿದೆ.
ಲಕ್ಷಕ್ಕೂ ಅಧಿಕ ಶ್ರೀ ರಾಮತಾರಕ ಮಂತ್ರ ಪಠಣ:ಶೃಂಗೇರಿ ಮಠದ ರಾಜು ಶ್ರೀನಾಥ ಶರ್ಮಾ ನೇತೃತ್ವದಲ್ಲಿ 101 ಋತ್ವಿಜರು ಹೋಮ ಕುಂಡವನ್ನು ರಚನೆ ಮಾಡಿ ಹೋಮ ಹವನ ನೆರವೇರಿಸುವರು. ಅಂದು ಬೆಳಗ್ಗೆ 7.30 ಗಂಟೆಗೆ ಯಾಗ ಸ್ಥಳದಲ್ಲಿ ಗಂಗಾಪೂಜೆ, ಪುಣ್ಯಾಹುತಿ, ಗೋಪೂಜೆ, ಗಣಪತಿ ಹೋಮ ನಡೆದ ಬಳಿಕ ಕಳಸ ಸ್ಥಾಪಿಸಲಾಗುತ್ತದೆ. ರಾಮದೇವರ ಬೆಟ್ಟದಿಂದ ಶ್ರೀ ರಾಮದೇವರ ಉತ್ಸವ ಮೂರ್ತಿಯನ್ನು ಬನ್ನಿಮಂಟಪಕ್ಕೆ ತಂದಿರಿಸಿದ ನಂತರ ಯಜ್ಞ ಕಾರ್ಯ ಪ್ರಾರಂಭವಾಗಲಿದೆ.
ಶ್ರೀರಾಮ ಜಯರಾಮ ಜಯಜಯರಾಮ ಸ್ವಾಹಾಕಾರ ಮಂತ್ರ ಘೋಷದೊಂದಿಗೆ ಹೋಮ ಕುಂಡದಲ್ಲಿನ ಅಗ್ನಿಗೆ ಹಲ ವಿಧದ ಸಮಿತ್ತು, ಯಜ್ಞ ವಸ್ತುಗಳನ್ನು ಸಮರ್ಪಿಸುವರು. ಶಾಸಕ ಇಕ್ಬಾಲ್ ಹುಸೇನ್ ಸೇರಿದಂತೆ ಅನೇಕ ಗಣ್ಯರು ಯಜ್ಞ ಕಾರ್ಯಗಳಲ್ಲಿ ಪಾಲ್ಗೊಳ್ಳುವರು.
ಭಕ್ತರಿಗೆ ಪ್ರಸಾದ ವಿನಿಯೋಗ:
ಬಾಕ್ಸ್ ...............
-ರಾಮ ತಾರಕ ಹೋಮ ವ್ಯಕ್ತಿಯನ್ನು ಧಾರ್ಮಿಕ ಬೆಳವಣಿಗೆಯತ್ತ ಮುನ್ನಡೆಸುವಲ್ಲಿ ಮತ್ತು ಮೋಕ್ಷವನ್ನು ಹೊಂದಲು ಸಹಕಾರಿಯಾಗಿದೆ.
-ರಾಮನ ಕೃಪೆಯೊಂದಿಗೆ ಜೀವಿ ಮನೋಬಲ ಮತ್ತು ಶಕ್ತಿಯನ್ನು ಪಡೆದನೆಂದು ನಂಬಲಾಗಿದೆ.
- ಪ್ರಭು ರಾಮನ ಆಶೀರ್ವಾದವು ಜೀವನದಲ್ಲಿ ಧರ್ಮಕ್ಕೆ ಅನುಗುಣವಾದ ಕಾರ್ಯಗಳಲ್ಲಿ ಯಶಸ್ಸನ್ನು ತರಲು ಸಹಕಾರಿಯಾಗಿದೆ.
ಬಾಕ್ಸ್ ...............ರಾಮ ತಾರಕ ಹೋಮದ ವಿಧಾನಗಳು
- ಸಂಕಲ್ಪ(ಪ್ರಾರ್ಥನೆ): ಪೂಜಾರಿ ಮತ್ತು ಭಾಗವಹಿಸುವವರು ತಮ್ಮ ಸಂಕಲ್ಪವನ್ನು ಪ್ರಾರ್ಥಿಸುತ್ತಾರೆ, ಇದು ಆರೋಗ್ಯ, ಶಾಂತಿ, ಧರ್ಮ ಮುಂತಾದ ವಿಷಯಗಳ ಕೋರಿಕೆಯಾಗಿರಬಹುದು.- ರಾಮನ ಆಹ್ವಾನ: ಶ್ರೀರಾಮನನ್ನು “ಓಂ ಶ್ರೀ ರಾಮಾಯ ನಮಃ” ಎಂಬ ಪವಿತ್ರ ತಾರಕ ಮಂತ್ರದ ಮೂಲಕ ಆಹ್ವಾನಿಸಲಾಗುತ್ತದೆ.
- ಹೋಮದ ಅರ್ಪಣೆಗಳು (ಅಹುತಿ): ತುಪ್ಪ, ಅಕ್ಕಿ, ಹಸಿರು ಗಿಡಗಳು ಮತ್ತು ಶುದ್ಧ ವಸ್ತುಗಳನ್ನು ಹೋಮದ ಅಂಗವಾಗಿ ಅರ್ಪಿಸಲಾಗುತ್ತದೆ.- ರಾಮ ಮಂತ್ರ ಪಠಣೆ: ಶ್ರೀರಾಮನ ಮಂತ್ರಗಳನ್ನು ಪಠಿಸುವ ಮೂಲಕ ಈ ಹೋಮದ ಶಕ್ತಿಯನ್ನು ಹೆಚ್ಚಿಸಲಾಗುತ್ತದೆ ಮತ್ತು ದೇವರ ಸಾನ್ನಿಧ್ಯವನ್ನು ಪಡೆಯಲಾಗುತ್ತದೆ.
- ಆರತಿ ಮತ್ತು ಪೂರ್ಣಾಹುತಿ: ಹೋಮದ ಅಂತಿಮವಾಗಿ ರಾಮನ ಆರತಿಯನ್ನು ಮಾಡಲಾಗುತ್ತದೆ ಮತ್ತು ಭಾಗವಹಿಸುವವರಿಗೆ ಪ್ರಸಾದ ಹಂಚಲಾಗುತ್ತದೆ.ಕೋಟ್ ................
ರಾಮನಗರ ಕ್ಷೇತ್ರ ಸೇರಿದಂತೆ ಲೋಕಕಲ್ಯಾಣಾರ್ಥವಾಗಿ ರಾಮೋತ್ಸವ ಸಂದರ್ಭದಲ್ಲಿ ರಾಮತಾರಕ ಯಜ್ಞ ಆಯೋಜಿಸಲಾಗಿದೆ. ಪ್ರತಿಯೊಬ್ಬರ ಜೀವನದಲ್ಲಿ ಆಧ್ಯಾತ್ಮಿಕ ಉನ್ನತಿ, ಮೋಕ್ಷ, ಶಾಂತಿ, ಆರೋಗ್ಯ, ಕ್ಷೇಮ ಹಾಗೂ ಯಶಸ್ಸನ್ನು ತರಲು ರಕ್ಷಣೆ ಜೊತೆಗೆ ಧೈರ್ಯ ಮತ್ತು ಶಕ್ತಿಯನ್ನು ಪ್ರಭು ಶ್ರೀ ರಾಮ ಕರುಣಿಸಲಿ ಎಂದು ಸಂಕಲ್ಪ ಮಾಡುತ್ತೇನೆ.- ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ
ಕೋಟ್ ..................ಶ್ರೀ ರಾಮನು ಪಾದ ಸ್ಪರ್ಶ ಮಾಡಿದ ರಾಮನಗರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ದೊಡ್ಡ ಮಟ್ಟದಲ್ಲಿ ಶ್ರೀ ರಾಮತಾರಕ ಯಜ್ಞವನ್ನು ಆಯೋಜಿಸಿರುವುದು ಅರ್ಥಪೂರ್ಣ. ಈ ಧಾರ್ಮಿಕ ಕಾರ್ಯದಲ್ಲಿ ರಾಮನಗರದ ಸಮಸ್ತರು ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾಗಬೇಕು. ಶ್ರೀರಾಮ ಮತ್ತು ಭಕ್ತರ ನಡುವಿನ ಭಕ್ತಿಯ ನಂಟು ವೃದ್ಧಿಯಾಗಲಿದೆ.
- ಸಿ.ಎನ್.ಆರ್. ವೆಂಕಟೇಶ್, ಮಾಜಿ ಅಧ್ಯಕ್ಷರು, ರಾ-ಚ ನಗರಾಭಿವೃದ್ಧಿ ಪ್ರಾಧಿಕಾರ9ಕೆಆರ್ ಎಂಎನ್ 5,6,7,8.ಜೆಪಿಜಿ
5.ಶ್ರೀ ರಾಮತಾರಕ ಯಜ್ಞದ ಸಾಂದರ್ಭಿಕ ಚಿತ್ರ6.ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರ.
7.ಸಿ.ಎನ್.ಆರ್. ವೆಂಕಟೇಶ್ , ಮಾಜಿ ಅಧ್ಯಕ್ಷರು, ರಾ-ಚ ನಗರಾಭಿವೃದ್ಧಿ ಪ್ರಾಧಿಕಾರ.8.ರಾಮೋತ್ಸವ ಲೋಗೋ