ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣಸಹವರ್ತಿ ವಿವಿಗಳಲ್ಲಿ ಮಾನವ ಅಭ್ಯುದಯ ಚಿನ್ನದ ಪದಕ , ಮಾನವೀಯ ದೃಷ್ಟಿಯ ಮೌಲ್ಯಮಾಪನವನ್ನೂ ಈ ಸಹಯೋಗವು ಆರಂಭಿಸಲಿದೆ. ಶೈಕ್ಷಣಿಕ ಚಟುವಟಿಕೆಗಳ ಜೊತೆಜೊತೆಗೆ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ ನಿರ್ಮಾಣಕ್ಕೂ ಈ ಸಹಯೋಗವು ಒತ್ತು ನೀಡಲಿದೆ ಎಂದು ತಿಳಿಸಿದರು
ಒಡಂಬಡಿಕೆ ಪತ್ರ ವಿನಿಮಯಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಶ್ರೀಕಂಠ ಮೂರ್ತಿ ಒಡಂಬಡಿಕೆ ಪತ್ರಗಳನ್ನು ವಿನಿಮಯ ಮಾಡಿಕೊಂಡರು. ಬಾಗಲಕೋಟೆ ವಿವಿಯ ಕುಲಪತಿ ಪ್ರೊ ಆನಂದ ದೇಶಪಾಂಡೆ, ಬೀದರ್ ವಿವಿಯ ಕುಲಪತಿ ಬಿ.ಎಸ್.ಬಿರಾದಾರ್, ಚಾಮರಾಜನಗರ ವಿವಿಯ ಕುಲಪತಿ ಎಂ.ಆರ್.ಗಂಗಾಧರ, ಹಾವೇರಿ ವಿವಿಯ ಕುಲಪತಿ ಪ್ರೊ.ತರಿಕೆರೆ ಸಿ.ತಾರಾನಾಥ್, ಹಾಸನ ವಿವಿಯ ಕುಲಪತಿ ಪ್ರೊ ಸುರೇಶ್ ಜಂಗಮಶೆಟ್ಟಿ ಹಾವೇರಿ ವಿವಿ, ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ವೀರಣ್ಣ ಚರಂತಿಮಠ ಅವರು ಒಡಂಬಡಿಕೆ ಪತ್ರಗಳನ್ನು ಪಡೆದುಕೊಂಡರು.
ಈ ವೇಳೆ ಕರ್ನಾಟಕದ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಹಾಸನ ವಿವಿ ಕುಲಪತಿ ಪ್ರೊ ತರಿಕೇರೆ ಸಿ.ತಾರಾನಾಥ್, ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿವಿ ಕುಲಪತಿ ಪ್ರೊ ಶ್ರೀಕಂಠ ಮೂರ್ತಿ, ಬೀದರ್ ವಿವಿ ಕುಲಪತಿ ಬಿಎಸ್ ಬಿರಾದರ್, ಬಾಗಲಕೋಟೆ ವಿವಿ ಕುಲಪತಿ ಆನಂದ್ ದೇಶಪಾಂಡೆ, ವಿಶ್ರಾಂತ ಕುಲಪತಿ ಡಾ ಬಿ.ಎನ್.ನರಸಿಂಹಮೂರ್ತಿ, ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ವೀರಣ್ಣ ಚರಂತಿಮಠ, ಕೊಡಗು ವಿವಿ ಕುಲಪತಿ ಪ್ರೊ ಅಶೋಕ್ ಆಲೂರು, ಹಾವೇರಿ ವಿವಿ ಕುಲಪತಿ ಪ್ರೊ ಸುರೇಶ್ ಜಂಗಮಶೆಟ್ಟಿ, ಚಾಮರಾಜನಗರ ವಿವಿ ಕುಲಪತಿ ಪ್ರೊ ಎಂ.ಆರ್. ಗಂಗಾಧರ್ ಮತ್ತಿತರರು ಇದ್ದರು.