ಹುಬ್ಬಳ್ಳಿ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರ ರಾಣಿ ಚೆನ್ನಮ್ಮ, ವಿಜಯಪುರ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹಾಗೂ ಡಾ. ರಾಜಕುಮಾರ ಅವರ ಹೆಸರು ನಾಮಕರಣ ಮಾಡಬೇಕು. ಬೆಂಗಳೂರು 2ನೇ ಟರ್ಮಿನಲ್ ವಿಮಾನ ನಿಲ್ದಾಣಕ್ಕೂ ನಾಡಿನ ಮಹನೀಯರ ಹೆಸರು ನಾಮಕರಣ ಮಾಡಬೇಕೆಂಬ ಒತ್ತಾಯವನ್ನು ಸಮಿತಿ ಮುಂದಿಡಲಿದೆ ಎಂದರು.
ಪ್ರಶಸ್ತಿ ಪ್ರದಾನ:ಜಯಂತ್ಯುತ್ಸವದ ಅಂಗವಾಗಿ ಪತ್ರಿಕೋದ್ಯಮ, ಸಮಾಜಸೇವೆ, ಜನಪದ ಕಲೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಹಾಗೂ ಕಿತ್ತೂರ ರಾಣಿ ಚನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಬಾರಿ ಕನ್ನಡಪ್ರಭದ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಶ್ರೀಪಾದ ಕುಲಕರ್ಣಿ ಸೇರಿದಂತೆ ಹರ್ಷಾ ಕುಲಕರ್ಣಿ, ಬಸವರಾಜ ಗರಗ, ಮೈಲಾರಪ್ಪ ಕರಿಲಿಂಗಣ್ಣನವರ, ಮುಕ್ಕುಂದ ಕುಲಕರ್ಣಿ, ಸುಭಾಷ ಡಂಕ್, ಸಹದೇವಪ್ಪ ಅಮ್ಮಿನಬಾವಿ, ಲಾಲಸಾಬ ಪಶುಪತಿಹಾಳ, ರಾಜೇಶ ಹೆಬ್ಬಳ್ಳಿ, ಶ್ರೀನಿವಾಸ ಚೆನುತಪಲ್ಲೆ, ರೆವೆರೆಂಡ್ ಸ್ಯಾಮಸನ್ ಡಿ ಇವರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಹಾಗೂ ಮಹಿಳಾ ಸಮಾಜಸೇವಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಭಾರತಿ ಕೊಳ್ಳಿ, ಚೇತನಾ ದೇವೇಂದ್ರ ಅವರಿಗೆ ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದರೊಂದಿಗೆ ಬಂಕಾಪುರದ ಗುರು ಚಲವಾದಿ ಅವರಿಗೆ ‘ಕರ್ನಾಟಕ ಜಾನಪದ ಸಂಗೀತ ಗಾನ ಕಲಾರತ್ನ’ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಯಲ್ಲಪ್ಪ ಕುಂದಗೋಳ, ಕಪ್ರಪ್ಪ ಗೊರಗುದ್ದಿ, ಬಸಣ್ಣ ಅಗಸಿಮನಿ, ರಾಜಗುರು ಚಲವಾದಿ ಸೇರಿದಂತೆ ಹಲವರಿದ್ದರು.