ರಂಗಾಯಣ, ನೀನಾಸಂ ರೀತಿ ಕೂಡ್ಲಿಗಿಯಲ್ಲಿ ರಂಗ ತರಬೇತಿ ಕೇಂದ್ರ ಅಗತ್ಯ

KannadaprabhaNewsNetwork |  
Published : May 10, 2026, 02:15 AM IST
 ಕೂಡ್ಲಿಗಿಯ ವಿನಾಯಕ ಜ್ಯೋತಿ ಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕ್ರುತಿ ಇಲಾಖೆ ಬೆಂಗಳೂರು ಸಂಯಕ್ತಾಶ್ರಯದಲ್ಲಿ ಗಿರಿಜನ ಉಫಯೋಜನೆಯಡಿ ಪಟ್ಟಣದ ಬಯಲು ಬಸವೇಶ್ವರ ರಂಗಮಂದಿರದಲ್ಲಿ  ಆಯೋಜಿಸಿದ್ದ ಜಾನಪದ ಕಲಾವೈಭವ ಕಾರ್ಯಕ್ರಮವನ್ನು ಕೂಡ್ಲಿಗಿ ತಾಲೂಕು ಬಿಸಿಎಂ ಅಧಿಕಾರಿ ಶ್ಯಾಮಪ್ಪ ಉಧ್ಗಾಟಿಸಿದರು. ಈ ಸಂದರ್ಭದಲ್ಲಿ ಕೂಡ್ಲಿಗಿಯ ಹಿರಿಯ ರಂಗಕಲಾವಿದರು ಭಾಗವಹಿಸಿದ್ದರು.  | Kannada Prabha

ಸಾರಾಂಶ

ತಾಲೂಕಿನಲ್ಲಿ ಕಲಾವಿದರ ಪರಂಪರೆ ಇಂದು ನಿನ್ನೆಯದಲ್ಲ.

ಕೂಡ್ಲಿಗಿ: ಇಲ್ಲಿನ ಕೂಡ್ಲಿಗಿ ರಂಗಕಲಾವಿದರ ತವರೂರು. ರಂಗಾಯಣ ನೀನಾಸಂ ರೀತಿ ಕೂಡ್ಲಿಗಿಯಲ್ಲಿ ರಂಗ ತರಬೇತಿ ಕೇಂದ್ರ ಪ್ರಾರಂಭವಾಗಬೇಕು. ಈ ಮೂಲಕ ಕೂಡ್ಲಿಗಿಯಲ್ಲಿ ಮುಂದಿನ ಪೀಳಿಗೆಗೆ ನಾಟಕ, ರಂಗಭೂಮಿ, ಜಾನಪದ ಕಲೆಗಳನ್ನು ವರ್ಗಾಯಿಸುವ ಕಾರ್ಯ ಆಗಬೇಕಿದೆ ಎಂದು ಹಿರಿಯ ರಂಗಭೂಮಿ ಕಲಾವಿದ ಭಜನೆ ನರಸಿಂಹಪ್ಪ ತಿಳಿಸಿದರು.

ಅವರು ಕೂಡ್ಲಿಗಿಯ ವಿನಾಯಕ ಜ್ಯೋತಿ ಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕ್ರುತಿ ಇಲಾಖೆ ಬೆಂಗಳೂರು ಸಂಯಕ್ತಾಶ್ರಯದಲ್ಲಿ ಗಿರಿಜನ ಉಫಯೋಜನೆಯಡಿ ಪಟ್ಟಣದ ಬಯಲು ಬಸವೇಶ್ವರ ರಂಗಮಂದಿರದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ಜಾನಪದ ಕಲಾವೈಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮ ಉದ್ಘಾಟಿಸಿ ತಾಲೂಕು ಬಿಸಿಎಂ ಅಧಿಕಾರಿ ಶ್ಯಾಮಪ್ಪ ಮಾತನಾಡಿ, ತಾಲೂಕಿನಲ್ಲಿ ಕಲಾವಿದರ ಪರಂಪರೆ ಇಂದು ನಿನ್ನೆಯದಲ್ಲ. ಕೂಡ್ಲಿಗಿಯಲ್ಲೊಂದೇ ನೂರಾರು ರಂಗನಟಿಯರು ನಾಲ್ಕು ಐದು ತಲೆಮಾರುಗಳಿಂದ ನಾಟಕಗಳನ್ನೇ ನಂಬಿ ಜೀವನ ಸವೆಸಿದ ಇತಿಹಾಸ ಇದೆ. ಈಗಲೂ ಉತ್ತರ ಕರ್ನಾಟಕದಲ್ಲಿ ಬಯಲಾಟ ಅಂದರೆ ಕೂಡ್ಲಿಗಿಯ ರಂಗನಟಿಯರೇ ಬೇಕು ಎನ್ನುವಷ್ಟರ ಮಟ್ಟಿಗೆ ಇವರ ಕಲಾಸಿರಿವಂತಿಕೆ ಇರುವುದು ಶ್ಲಾಘನೀಯ ಎಂದರು.

ಕೂಡ್ಲಿಗಿಯ ಕೆ.ದುರುಗಮ್ಮ ಮತ್ತು ತಂಡದವರಿಂದ ರಂಗಗೀತೆಗಳ ಗಾಯನ ಪ್ರೇಕ್ಷಕರ ಮನಸೆಳೆಯಿತು. ಕಂಪ್ಲಿಯ ಕೆ.ವಾಲ್ಮೀಕಿ ವೀರಣ್ಣ ತಂಡದವರಿಂದ ಬಯಲಾಟ ಮುಮ್ಮೇಳ ಪದಗಳು, ಗುಡೇಕೋಟೆಯ ಹೆಚ್.ಪಿ.ಯರ್ರಯ್ಯ ತಂಡದಿಂದ ಜೋಗುತಿ ನೖತ್ಯ, ನಂತರ ಬಿಜಿ ದಿನ್ನಿ ಗ್ರಾಮದ ಕೆ.ಹನುಮಂತಪ್ಪ ಮತ್ತು ತಂಡದವರಿಂದ ಮನೆ ಮನೆ ಕಥೆ, ಅರ್ಥಾತ್ ಇಕ್ಕಟ್ಟಿನ ಸಂಸಾರ ಎನ್ನುವ ಸಾಮಾಜಿಕ ಹಾಸ್ಯ ನಾಟಕ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ವಿನಾಯಕ ಜ್ಯೋತಿ ಕಲಾ ಟ್ರಸ್ಟ್ ನ ಅಧ್ಯಕ್ಷೆ ಜಿ.ಜ್ಯೋತಿ, ಹಿರಿಯ ಕಲಾವಿದೆ ಸಿರಿಮಲ್ಲಮ್ಮ, ವಿಭೂತಿ ವೀರಣ್ಣ, ತಿಂದಪ್ಪ, ಮಲ್ಲನಗೌಡ, ಗುರುಸಿದ್ದಣ್ಣ, ಸೋಮಣ್ಣ, ಕುಪ್ಪಳ್ಳಿ ಮೂಗಣ್ಣ, ಕಂಪ್ಲಿ ವೀರಣ್ಣ, ಯು. ದೊಡ್ಡಬಸಪ್ಪ ಮುದ್ದಾಪುರ, ಚಿರಿಬಿ ಅಂಜಿನಪ್ಪ, ಹಿರಿಯ ರಂಗನಟಿಯರಾದ ಸಿರಿಬಿ ಗೌರಮ್ಮ, ಕೋಟೆ ಅಂಜಿನಮ್ಮ, ಜಿ.ಗೀತಾ, ವೈಟ್ ಸುಮಾ, ಓಬಳಮ್ಮ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

₹1 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ: ಕನಕ ಶ್ರೀ
ತೆಗ್ಗಿನಮಠದಿಂದ ಅನ್ನ, ಅಕ್ಷರ ಜತೆ ಧರ್ಮಕಾರ್ಯ: ಸಂಸದ ಇ.ತುಕಾರಾಂ