ನಾಪೋಕ್ಲು: ಇಲ್ಲಿಗೆ ಸಮೀಪದ ಚೇರಂಬಾಣೆಯ ಅರುಣ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಲೋಕೇಶ್ ಅವರಿ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶನಿವಾರ ಕೆಪಿಸಿಸಿ ಶಿಕ್ಷಕರ ಘಟಕದ ವತಿಯಿಂದ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು. ಶ್ರೇಷ್ಠ ಶಿಕ್ಷಕರ ಪ್ರಶಸ್ತಿ ಯನ್ನು ಪಡೆದ ಲೋಕೇಶ್ 30 ವರ್ಷಗಳಿಂದ ಪ್ರಸ್ತುತ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ, ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಸೋಮವಾರಪೇಟೆ ತಾಲೂಕಿನ ಚನ್ನಾಪುರ ಗ್ರಾಮದ ದಿ. ರಾಮಯ್ಯ ಮತ್ತು ಬಸಮ್ಮ ದಂಪತಿ ಪುತ್ರ.