- ಜಿಲ್ಲಾ ಕ್ರೀಡಾಂಗಣದಲ್ಲಿ ಮ್ಯಾರಥಾನ್ಗೆ ಚಾಲನೆ ನೀಡಿ ಐಜಿಪಿ ರವಿಕಾಂತೇಗೌಡ ಹೇಳಿಕೆ । ನಮ್ಮ ಪೊಲೀಸ್ ನಮ್ಮ ಹೆಮ್ಮೆ ಘೋಷಣೆಯಡಿ ಆಯೋಜನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ಇಲಾಖೆ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಘೋಷಣೆಯಡಿ ಹಮ್ಮಿಕೊಂಡಿದ್ದ ಪೊಲೀಸರೊಂದಿಗೆ 10 ಕೆ ಮ್ಯಾರಥಾನ್ ಮತ್ತು 5 ಕೆ ಮ್ಯಾರಥಾನ್ಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ದೈಹಿಕ ಶ್ರಮದೊಂದಿಗೆ ಸದೃಢ ಕಾಯ, ದೇಹ, ಮನಸ್ಸಿನೊಂದಿಗೆ ಬಲಿಷ್ಠ ಭಾರತವನ್ನು ಕಟ್ಟಬೇಕಾಗಿದೆ ಎಂದರು.
ಹೆಣ್ಣುಮಕ್ಕಳ ರಕ್ಷಣೆಯೂ ನಮ್ಮೆಲ್ಲರ ಅತಿ ಮುಖ್ಯ ಜವಾಬ್ದಾರಿಯಾಗಿದೆ. ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಕಲ್ಪಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ರಾಜ್ಯವ್ಯಾಪಿ ಪೊಲೀಸ್ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ಪೂರ್ವ ವಲಯದ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ ಜಿಲ್ಲೆಗಳಲ್ಲೂ ಮ್ಯಾರಥಾನ್ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.ಪೊಲೀಸರೆಂಬ ಭಯ ಬೇಡ:
ಸಾರ್ವಜನಿಕರ ಸಹಕಾರ ಬೇಕು:
ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಪ್ರತಿಜ್ಞಾವಿಧಿ ಬೋಧಿಸಿ, ಮ್ಯಾರಥಾನ್ ಕುರಿತಂತೆ ಮಾಹಿತಿ ನೀಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಚನ್ನಗಿರಿ ಎಎಸ್ಪಿ ಸ್ಯಾಮ್ ವರ್ಗೀಸ್, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ಪಿ.ಬಿ.ಪ್ರಕಾಶ, ನಗರ ಡಿವೈಎಸ್ಪಿ ಶರಣ ಬಸವೇಶ್ವರ, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ಬಸವರಾಜ, ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ ಸೇರಿದಂತೆ ಜಿಲ್ಲಾ, ತಾಲೂಕು, ನಗರಮಟ್ಟದ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಕೋಟ್ ಜನತೆ ನಮ್ಮ ನೆಲದ ಅಡುಗೆ, ಆಹಾರ ಸೇವನೆಯಿಂದ ವಿಮುಖರಾಗಿ, ಜೀವನಶೈಲಿಯನ್ನೇ ಮರೆಯುತ್ತಿದ್ದಾರೆ. ರಾಗಿ ಮುದ್ದೆ, ಜೋಳದ ರೊಟ್ಟಿಗಳಂತಹ ಆಹಾರಗಳು ದೇಹಕ್ಕೆ ಶಕ್ತಿ ನೀಡುತ್ತವೆ. ಆದರೆ, ಅವುಗಳನ್ನೆಲ್ಲ ಜನತೆ ಬಿಟ್ಟು, ಫಿಜ್ಜಾ, ಬರ್ಗರ್, ಚೈನೀಸ್ ಫುಡ್ ಅಂತೆಲ್ಲಾ ಫಾಸ್ಟ್ ಫುಡ್ ಆಸೆಗೆ ಹೋಗಿ, ಜೀವನ, ಆರೋಗ್ಯ, ದೈಹಿಕ ಸಾಮರ್ಥ್ಯಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಇದು ಸಲ್ಲದು.
- - - ಬಾಕ್ಸ್* ಮ್ಯಾರಥಾನ್ ಸ್ಪರ್ಧೆಗಳ ವಿಜೇತರು
5ಕೆ ಪುರುಷರ ಜನರಲ್ ಮತ್ತು ಪೊಲೀಸ್ ವಿಭಾಗ:
ಮಹಿಳೆಯರ ವಿಭಾಗದ 5ಕೆ ಮ್ಯಾರಥಾನ್:
ಜಗಳೂರು ಪೊಲೀಸ್ ಠಾಣೆಯ ಜಿ.ಎಂ.ಮಧುರಾ (ಡಬ್ಲ್ಯುಪಿಸಿ-79), ದಾವಣಗೆರೆ ಬಸವ ನಗರ ಠಾಣೆಯ ಮಾಲತಿ ಬಾಯಿ (ಡಬ್ಲ್ಯುಪಿಸಿ-443), ಅಲಮಸ್ ಬೇಗಂ (ಹೋಂ ಗಾರ್ಡ್ಸ್-305) ತೃತೀಯ ಸ್ಥಾನ. ಸಾಮಾನ್ಯ ಮಹಿಳೆಯರ ವಿಭಾಗದಲ್ಲಿ ಅಕ್ಷತಾ ಪ್ರಥಮ, ಅರ್ಚನಾ ದ್ವಿತೀಯ, ರಕ್ಷಾ ತೃತೀಯ ಸ್ಥಾನ ಪಡೆದಿದ್ದಾರೆ.- - - -9ಕೆಡಿವಿಜಿ1, 2.ಜೆಪಿಜಿ:
ದಾವಣಗೆರೆಯಲ್ಲಿ ಜಿಲ್ಲಾ ಪೊಲೀಸ್ ಹಮ್ಮಿಕೊಂಡಿದ್ದ 10 ಕೆ, 5 ಕೆ ಮ್ಯಾರಥಾನ್ಗೆ ಪೂರ್ವ ವಲಯದ ಐಜಿಪಿ ರವಿಕಾಂತೇಗೌಡ ಹಸಿರು ನಿಶಾನೆ ತೋರಿದರು. ಎಸ್ಪಿ ಉಮಾ ಪ್ರಶಾಂತ, ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣಕುಮಾರ ಇತರರು ಇದ್ದರು. -9ಕೆಡಿವಿಜಿ3.ಜೆಪಿಪಿ:ದಾವಣಗೆರೆಯಲ್ಲಿ ಜಿಲ್ಲಾ ಪೊಲೀಸ್ ಹಮ್ಮಿಕೊಂಡಿದ್ದ 10ಕೆ, 5ಕೆ ಮ್ಯಾರಥಾನ್ನಲ್ಲಿ ಪೂರ್ವ ವಲಯದ ಐಜಿಪಿ ರವಿಕಾಂತೇಗೌಡ, ಎಸ್ಪಿ ಉಮಾ ಪ್ರಶಾಂತ, ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು ಪಾಲ್ಗೊಂಡರು.
-9ಕೆಡಿವಿಜಿ4.ಜೆಪಿಜಿ:ದಾವಣಗೆರೆಯಲ್ಲಿ ಜಿಲ್ಲಾ ಪೊಲೀಸ್ ಹಮ್ಮಿಕೊಂಡಿದ್ದ 10ಕೆ, 5ಕೆ ಮ್ಯಾರಥಾನ್ಗೆ ಪೂರ್ವ ವಲಯದ ಐಜಿಪಿ ರವಿಕಾಂತೇಗೌಡ ಜೊತೆಗೆ ಕಿರಿಯ ಅಧಿಕಾರಿ ಸಹೋದ್ಯೋಗಿಗಳ ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಸೆಲ್ಫೀ ಸಂಭ್ರಮ.