- ತಲೆಮರೆಸಿಕೊಂಡವರ ಮೂವರ ಶೀಘ್ರ ಬಂಧಿಸದಿದ್ದರೆ, ನಾವೇ ಹೆಸರು ಬಹಿರಂತಪಡಿಸಿ ಹೋರಾಟ: ಯಶವಂತ ರಾವ್ ಎಚ್ಚರಿಕೆ - - -
ಡ್ರಗ್ಸ್ ಕೇಸ್ನಲ್ಲಿ ಕಾಂಗ್ರೆಸ್ ಮುಖಂಡ ಶಾಮನೂರು ವೇದಮೂರ್ತಿ ಬಂಧನವಾಗಿದ್ದು, ತಲೆಮರೆಸಿಕೊಂಡ ಉಳಿದ ಮೂವರನ್ನೂ ಬಂಧಿಸಬೇಕು. ಇಲ್ಲದಿದ್ದರೆ ಆ ಮೂವರ ಹೆಸರನ್ನು ನಾವು ಬಹಿರಂಗಪಡಿಸಿ, ಕಠಿಣ ಕ್ರಮಕ್ಕೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಜಿಲ್ಲಾ ಪೊಲೀಸ್ ಇಲಾಖೆಗೆ ಎಚ್ಚರಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡ್ರಗ್ಸ್ ಕೇಸ್ನಲ್ಲಿ ಡಿ.22ರಂದು ಮಧ್ಯಾಹ್ನ ಕಾಂಗ್ರೆಸ್ನ ಶಾಮನೂರು ವೇದಮೂರ್ತಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಮೂವರು ತಲೆಮರೆಸಿಕೊಂಡಿದ್ದಾರೆ. ಬಂಧಿತನ ವಿರುದ್ಧ ಸಣ್ಣಪುಟ್ಟ ಕೇಸ್ ಹಾಕುವಂತೆ, ಬಿಡುವಂತೆ ಒತ್ತಡ ಬಂದರೂ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಕಿವಿಗೊಡದೇ ಕೇಸ್ ಜಡಿದಿರುವ ಕ್ರಮ ಸ್ವಾಗತಿಸುತ್ತೇವೆ. ಅದೇ ರೀತಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಆಗ್ರಹಿಸಿದರು.ಕಾಂಗ್ರೆಸ್ ಪಟಾಲಂ ಈಗ ಮಾತಾಡಲಿ:
ಎಸ್ಎಸ್ಎಂ ರಾಜಿನಾಮೆ ನೀಡಲಿ:
ಓದುವ ಮಕ್ಕಳಿಗೆ, ವಿದ್ಯಾರ್ಥಿ, ಯುವಜನರಿಗೆ ಮಾದಕ ವಸ್ತುಗಳಾದ ಗಾಂಜಾ, ಡ್ರಗ್ಸ್ ಪೂರೈಸುವ ಜಾಲದ ಹಿಂದೆ ಯಾರೆಲ್ಲಾ ಇದ್ದಾರೆ, ದಂಧೆಯ ಆಳ, ಅಗಲ ಏನೆಂಬ ಬಗ್ಗೆ ಎಸ್ಪಿ ಅವರು ಸಮಗ್ರ ತನಿಖೆ ಕೈಗೊಳ್ಳಬೇಕು. ಶಾಬನೂರಿನ ಅಗರ್ಭ ಶ್ರೀಮಂತ ಎಂದು ಬೀಗುತ್ತಿದ್ದ ವೇದ ಇದೇ ರೀತಿ ಡ್ರಗ್ಸ್ ದಂಧೆಯಿಂದಲೇ ಶ್ರೀಮಂತ ಆಗಿರಬೇಕು. ಯಾವುದೇ ಕಾರಣಕ್ಕೂ ವೇದ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಎಸ್ಪಿ ಗಮನಹರಿಸಲಿ ಎಂದು ಅವರು ತಿಳಿಸಿದರು.
2 ತಿಂಗಳ ಹಿಂದೆಯೇ ಸಣ್ಣದಾಗಿ ಡ್ರಗ್ಸ್ ಪ್ರಕರಣ ಬಯಲಿಗೆ ಬಂದರೂ, ತಕ್ಷಣವೇ ಮುಚ್ಚಿ ಹೋಗಿತ್ತು. ಯಾವುದೇ ಕಾರಣಕ್ಕೂ ಈಗ ಬಂಧಿತನಾದ ಶಾಮನೂರು ವೇದನ ಮೇಲೆ ಕಾಯ್ದೆಗಳ ಸಂಖ್ಯೆ ಕಡಿಮೆ ಆಗಬಾರದು. ಇಂತಹವರು ಕಾಯಂ ಆಗಿ ಜೈಲು ಪಾಲಾಗಬೇಕು. ಅನಾರೋಗ್ಯ ಸಮಸ್ಯೆಯೆಂದು ವೇದ ಆಸ್ಪತ್ರೆಗೆ ದಾಖಲಾಗಿದ್ದಾನೆಂಬ ಮಾಹಿತಿ ಇದ್ದು, ಇಂತಹದ್ದಕ್ಕೆಲ್ಲಾ ಇಲಾಖೆ ಆಸ್ಪದ ನೀಡಬಾರದು. ಡಿ.22ರಂದು ಆರೋಪಿಗಳ ಬಂಧನದಿಂದ ಅಂದು ರಾತ್ರಿವರೆಗೆ ಎಸ್ಪಿ ಉಮಾ ಪ್ರಶಾಂತ ಅವರಿಗೆ ಯಾರಿಂದೆಲ್ಲಾ ಫೋನ್ ಕರೆ ಹೋಗಿವೆ, ಏನೆಲ್ಲಾ ಒತ್ತಡ ಹೇರಿದ್ದರು ಎಂಬ ಬಗ್ಗೆಯೂ ತನಿಖೆ ಆಗಬೇಕು ಎಂದು ಯಶವಂತ ರಾವ್, ಎಫ್ಐಆರ್ ದಾಖಲಿಸುವ ವೇಳೆ ವೇದನ ಬಗ್ಗೆ ಮೆದು ಧೋರಣೆ ತೋರಿದರೆ ಬೀದಿಗಿಳಿದು ಹೋರಾಡುತ್ತೇವೆ ಎಂದರು.
- - -
- ಯಶವಂತ ರಾವ್ ಜಾಧವ್, ಬಿಜೆಪಿ ಮುಖಂಡ.
-24ಕೆಡಿವಿಜಿ4: ದಾವಣಗೆರೆಯಲ್ಲಿ ಬುಧವಾರ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.