ಮಾಗಡಿ: ತುಮಕೂರಿನ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರು ಮಾಗಡಿಗೆ ಎಕ್ಸ್ಪ್ರೆಸ್ ಕೆನಾಲ್ ಮೂಲಕ ಹೇಮಾವತಿ ನೀರು ತರಲು ವಿರೋಧಿಸುತ್ತಿರುವುದನ್ನು ಖಂಡಿಸಿ ಪಕ್ಷಾತೀತ ಹೋರಾಟಕ್ಕೆ ಎಲ್ಲರೂ ಬೆಂಬಲಿಸಬೇಕಿದೆ ಎಂದು ಬಿಜೆಪಿ ಯುವ ಮುಖಂಡ ಪ್ರಸಾದ್ ಗೌಡ ಮನವಿ ಮಾಡಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡಲೇ ತುಮಕೂರಿನ ಸಚಿವರಿಗೆ, ಶಾಸಕರಿಗೆ ಯಾವುದೇ ಕಾರಣಕ್ಕೂ ಈ ಯೋಜನೆಗೆ ವಿರೋಧವಾಗದಂತೆ ಎಕ್ಸ್ಪ್ರೆಸ್ ಕೆನಾಲ್ ಮೂಲಕ ಮಾಗಡಿ ತಾಲೂಕಿಗೆ ನೀರು ತರಬೇಕು. ನಮಗೆ ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ಬಗ್ಗೆ ವಿರೋಧ ಕೂಡ ಇಲ್ಲ. ಮಾಗಡಿ ತಾಲೂಕಿಗೆ ಹೇಮಾವತಿ ನೀರು ಬೇಕಷ್ಟೆ. ತುಮಕೂರು ಜಿಲ್ಲೆ ಕೈಗಾರಿಕೆ ಸೇರಿದಂತೆ ಎಲ್ಲಾ ರಂಗದಲ್ಲೂ ಸಮೃದ್ಧಿಯಾಗಿದ್ದು ಹಿಂದುಳಿದ ತಾಲೂಕಾಗಿರುವ ಮಾಗಡಿಗೆ ಅನ್ಯಾಯ ಆಗದಂತೆ ಉಪಮುಖ್ಯಮಂತ್ರಿಗಳು ಕ್ರಮ ವಹಿಸುವ ವಿಶ್ವಾಸವಿದೆ ಎಂದರು.
ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ತಾಲೂಕು ಅಧ್ಯಕ್ಷ ವೀರಭದ್ರ, ಬಿಜೆಪಿ ಮುಖಂಡರಾದ ಬಿಡದಿ ಸುದೀಪ್, ತಿರುಮಲೆ ನಾರಾಯಣ್ ಸ್ವಾಮಿ, ಭಾಸ್ಕರ್, ಬಾಲಾಜಿ, ಶಶಿ, ಗೌತಮ್ ಇತರರು ಭಾಗವಹಿಸಿದ್ದರು.ಬಾಕ್ಸ್........
ನಾಳೆ ನೀರಿಗಾಗಿ ಪ್ರತಿಭಟನೆ: ಬಿಜೆಪಿಯಿಂದ ಮೇ 20ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ತಾಲೂಕು ಕಚೇರಿ ಮುಂದೆ ಹೇಮಾವತಿ ನೀರಿಗಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಪ್ರತಿಭಟನೆಗೆ ಎಲ್ಲಾ ಸಂಘಟನೆಗಳು ಸಹಕರಿಸಬೇಕು. ಇದು ಒಂದು ಪಕ್ಷದ ಪ್ರತಿಭಟನೆ ಅಲ್ಲ. ಪಕ್ಷಾತೀತ ಹೋರಾಟ. ಪ್ರತಿಭಟನೆಗೆ ಎಲ್ಲರೂ ಸಹಕರಿಸಬೇಕು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ನಮಗೆ ಹೇಮಾವತಿ ನೀರು ಬರೆಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪ್ರಸಾದ್ ಗೌಡ ತಿಳಿಸಿದರು.ಪೋಟೋ 18ಮಾಗಡಿ1:ಮಾಗಡಿಯಲ್ಲಿ ಬಿಜೆಪಿ ಯುವ ಮುಖಂಡ ಪ್ರಸಾದ್ ಗೌಡ ಸುದ್ದಿಗಾರರೊಂದಿಗೆ ಮಾತನಾಡಿದರು.