ಕನ್ನಡಪ್ರಭ ವಾರ್ತೆ ವಿಜಯಪುರ: ಶ್ರೇಷ್ಠ ಸಂವಿಧಾನ ನೀಡಿದ ಡಾ.ಅಂಬೇಡ್ಕರ್ ಅವರ ಬಗ್ಗೆ ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅಪಮಾನಕಾರಿಯಾಗಿ ಮಾತನಾಡಿದ್ದಾರೆ. ಅವರ ಮಾತಿನಿಂದ ಇಡೀ ದೇಶವಾಸಿಗಳಿಗೆ ನೋವಾಗಿದೆ ಎಂದು ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಆಕ್ರೋಶ ವ್ಯಕ್ತಪಡಿಸಿದರು.
ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಮಾತನಾಡಿ, ಗೃಹಮಂತ್ರಿ ಅಮಿತ್ ಶಾ ಅವರು ದೇಶ ಖಂಡಿಸುವಂತ ಮಾತುಗಳನ್ನು ಏಳುಬಾರಿ ಹೇಳಿದ್ದು, ಇಂದು ಹೇಳಿಲ್ಲ ಎನ್ನುತ್ತಾರೆ. ಲೋಕಸಭೆ ಒಳಗೆ ಹೋಗುವಾಗ ಸಂವಿಧಾನಕ್ಕೆ ನಮಿಸಿ ಹೋಗುತ್ತೀರಿ, ಒಳಗೆ ಹೋದಮೇಲೆ ಅದನ್ನು ತಿರುಚುತ್ತೀರಿ. ಬಾಬಾಸಾಹೇಬ ದಲಿತ ಎಂದು ನೋಡುತ್ತಿದ್ದೀರಿ, ಅವರೊಂದು ಅಸ್ಮಿತೆ ಎಂದು ನೋಡುತ್ತಿಲ್ಲ. ಅಮಿತ್ ಶಾ ಕ್ಷಮೆ ಕೇಳುವವರೆಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಹಿಂದ ಮುಖಂಡರಾದ ಚಂದ್ರಶೇಖರ ಕೊಡಬಾಗಿ, ಶ್ರೀನಾಥ ಪೂಜಾರಿ, ಅಡಿವೆಪ್ಪ ಸಾಲಗಲ, ಅನಸೂಯಾ, ಹಿರೇಗೌಡರ, ಎಂ.ಸಿ.ಮುಲ್ಲಾ ಮಾತನಾಡಿದರು. ಫಯಾಜ್ ಕಲಾದಗಿ, ಪ್ರಭುಗೌಡ ಪಾಟೀಲ್, ಆರತಿ ಶಹಾಪುರ, ಮಾಬುಬಿ, ಬಾಲಾಜಿ ಕಾಂಬಳೆ, ಚನ್ನು ಕಟ್ಟಿಮನಿ ಇದ್ದರು.