ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಪಾವನ ಆಸ್ಪತ್ರೆಯಲ್ಲಿ ಬಹಜನ ನಾಯಕ ಬೆಲ್ಲದಮಡು ರಂಗಸ್ವಾಮಿ ಅವರ 75ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ದಲಿತ ಚಳವಳಿಯ ಆರಂಭದಲ್ಲಿ ಗುರುತಿಸಿಕೊಂಡಿದ್ದ ಎಲ್ಲಾ ನಾಯಕರು ತಾಯ್ತತನದಿಂದ ಕೆಲಸ ಮಾಡಿದ್ದರು. ಹಾಗಾಗಿಯೇ ಎಲ್ಲಾ ವರ್ಗದ ಜನರನ್ನು ತಲುಪಲು ಸಾಧ್ಯವಾಯಿತು ಎಂದರು.
ದಸಂಸ ಮತ್ತು ನಮ್ಮದು 45 ವರ್ಷಗಳ ಒಡನಾಟ. ಹತ್ತನೇ ತರಗತಿ ಅನುತ್ತೀರ್ಣಗೊಂಡು ದನ ಕಾಯುವಾಗ ಸಮಯ ಕಳೆಯಲು ವಿವಿಧ ರೀತಿಯ ಗೀತೆಗಳನ್ನು ಹಾಡುತ್ತಿದ ನನ್ನನ್ನು ಹಿರಿಯರೊಬ್ಬರು ಕೋಟಗಾನಹಳ್ಳಿ ರಾಮಯ್ಯ ಬಳಿ ತಂದು ಬಿಟ್ಟರು, ಅಲ್ಲಿಂದ ಆರಂಭವಾದ ದಸಂಸ ಒಡನಾಟ ಇಂದಿಗೂ ಮುಂದುವರೆದಿದೆ. ನಾವು ಸದ್ಯ ಏನಾದರೂ ಆಗಿದ್ದೇವೆ ಎಂದರೆ ಅದಕ್ಕೆ ಕಾರಣ ದಲಿತ ಸಂಘರ್ಷ ಸಮಿತಿ ಮತ್ತು ಅದರಲ್ಲಿದ್ದ ಬೆಲ್ಲದ ಮಡು ರಂಗಸ್ವಾಮಣ್ಣನ ರೀತಿಯ ತಾಯ್ತನದ ಮುಖಂಡರಗಳೇ ಸಹೃದಯವಂತರ ಸಹವಾಸ ಎಂದರು.ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣದಾಸ್ ಮಾತನಾಡಿ, ನಾನು ಮತ್ತು ಬೆಲ್ಲದ ಮಡು ರಂಗಸ್ವಾಮಿ ಒಡನಾಡಿಗಳು, ಅವರು ಹೋರಾಟಗಾರರಾಗಿ ಗುರುತಿಸಿಕೊಂಡರೆ, ನಾನು ಕಲಾವಿದನಾದೆ. ಪುರಾಣ ಕಥೆಗಳಿಗೆ ಸಿಮೀತವಾಗಿದ್ದ ಹರಿಕಥಾ ಕ್ಷೇತ್ರದಲ್ಲಿ ಐತಿಹಾಸಿಕ ವ್ಯಕ್ತಿಗಳ ಜೀವನ ಚರಿತ್ರೆ ಹೇಳುವ ಜನಕಥಾ ಕೀರ್ತನೆ ಸೃಜನೆಯ ಹಿಂದೆ ದಸಂಸದ ಸಂಗಾತಿಗಳ ಒಡನಾಡುವೂ ಕಾರಣ ಎಂದರು.
ಈ ಜಗತ್ತು ಯಾವತ್ತು ಸರ್ವಾಧಿಕಾರಿಯನ್ನು ಬೆಳೆಯಲು ಬೆಳೆಯಲು ಬಿಟ್ಟಿಲ. ನಾನು, ನನ್ನದು ಎಂಬುದು ಬಹು ಕಾಲ ನಿಲ್ಲದು, ನಾವು, ನಮ್ಮದು ಎಂಬುದಕ್ಕೆ ಎಂದಿಗೂ ಮನ್ನಣೆ ಇದೆ. ಇದನ್ನು ಇತಿಹಾಸವೇ ತಿಳಿಸಿಕೊಟ್ಟಿದೆ. ನಾನು ಎಷ್ಟೇ ಆರೋಗ್ಯವಂತನಾಗಿದ್ದರೂ, ನನ್ನ ಸುತ್ತಮುತ್ತ ಕೊಳಕು ಇದ್ದರೆ, ನನ್ನನ್ನು ಒಂದು ದಿನ ಕೊಳೆಯುವಂತೆ ಮಾಡುತ್ತದೆ ಎಂಬ ಸತ್ಯವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಒಬ್ಬರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಕೆಲಸವನ್ನು ಇನ್ನೊಬ್ಬರು ಮುಂದುವರೆಸಿಕೊಂಡು ಹೋಗುವುದನ್ನು ನೋಡಿದಾಗ,ಅವರ ಇದ್ದಾರೆ ಎಂಬ ಭಾವನೆ ಮೂಡುತ್ತದೆ ಎಂದು ಕೆ.ದೊರೆರಾಜು ನುಡಿದರು
ಅಭಿನಂದಿತರಾದ ಕರಾಟೆ ಕೃಷ್ಣಮೂರ್ತಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಎಚ್.ವಿ.ವೆಂಕಟಾಚಲ ಮಾತನಾಡಿದರು. ಡಾ.ಪಾವನ, ದಸಂಸ ಹಿರಿಯರಾದ ನರಸಿಂಹಯ್ಯ, ನರಸೀಯಪ್ಪ, ಸಿಐಟಿಯುನ ಸುಬ್ರಮಣ್ಯ, ಬಿ.ಉಮೇಶ್,ಬೆಲ್ಲದಮಡು ರಂಗಸ್ವಾಮಿ ಅವರ ಸಹೋದರರಾದ ಶಿವಣ್ಣ, ಕೃಷ್ಣಪ್ಪ ಉಪಸ್ಥಿತರಿದ್ದರು.