ಕನ್ನಡಪ್ರಭ ವಾರ್ತೆ ಮಂಗಳೂರು
ಹರಿಯಾಣದ ಫರೀದಾಬಾದ್ನಲ್ಲಿರುವ ಐಬಿಆರ್ ಸಂಸ್ಥೆಯವರು ಈ ಸಂಖ್ಯಾಚಿತ್ರ ಗಮನಿಸಿ ಇದೊಂದು ವಿಶೇಷ ಸಾಧ್ಯತೆ ಎಂದು ಪರಿಗಣಿಸಿ ವಿಶ್ವದಾಖಲೆ ಪ್ರಶಸ್ತಿಯನ್ನು ಘೋಷಿಸಿದ್ದಾರೆ ಎಂದು ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮತ್ತೊಂದು ವಿಶ್ವದಾಖಲೆಗೆ ಸಿದ್ಧತೆ:
ಜನನ್ ಈಗಾಗಲೇ ಒಂದೇ ತಿಂಗಳಲ್ಲಿ ಎಸ್ಸೆಸ್ಸೆಲ್ಸಿ ಸ್ಟೇಟ್ ಸಿಲಬಸ್ ಪೋರ್ಶನ್ ಮುಗಿಸಿಕೊಂಡು ಆರು ವಿಷಯಗಳ ಪೂರ್ಣ ಪಠ್ಯ ವಿಷಯಗಳನ್ನು ಚಿತ್ರದ ಮೂಲಕ ತನ್ನ ಅಂಗಿ, ಪ್ಯಾಂಟ್ನಲ್ಲಿ ಬರೆದು ಮತ್ತೊಂದು ವಿಶ್ವ ದಾಖಲೆ ಮಾಡಲು ಸಿದ್ಧನಾಗಿದ್ದಾನೆ ಎಂದವರು ತಿಳಿಸಿದರು.784 ಜಿಲ್ಲೆಗಳ ಹೆಸರು ಕಂಠಪಾಠ:
ಐಪಿಎಸ್ ಕನಸು:
ಈ ಸಂದರ್ಭ ಮಾತನಾಡಿದ ಜನನ್, ಭವಿಷ್ಯದಲ್ಲಿ ಐಪಿಎಸ್ ಅಧಿಕಾರಿಯಾಗುವುದು ನನ್ನ ಕನಸು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿದ್ದೇನೆ ಎಂದರು.ಪ್ರತಿ ಮಕ್ಕಳಲ್ಲಿರುವ ಅಸಾಮಾನ್ಯ ಪ್ರತಿಭೆಯನ್ನು ಅನಾವರಣಗೊಳಿಸುವ ಸ್ವರೂಪ ಅಧ್ಯಯನ ಕೇಂದ್ರದ ಶಿಕ್ಷಣವನ್ನು ಮುಂದಿನ ವರ್ಷ ದೇಶದಾದ್ಯಂತ ಪರಿಚಯಿಸಲು ಸಿದ್ಧತೆ ನಡೆದಿದೆ ಎಂದು ಗೋಪಾಡ್ಕರ್ ಇದೇ ಸಂದರ್ಭ ಹೇಳಿದರು.ಜನನ್ ತಂದೆ ಸಿವಿಲ್ ಎಂಜಿನಿಯರ್ ವಸಂತ ಮಿತ್ತಡ್ಕ ಮತ್ತು ತಾಯಿ ಭವಾನಿ ಗ್ರಂಥಪಾಲಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಧ್ಯಯನ ಕೇಂದ್ರದ ಸಂಸ್ಕೃತ ಗುರು ಶಿವಲಿಂಗ ಇದ್ದರು.